• 18 ಮಾರ್ಚ್ 2025

ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! 

 ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! 
Digiqole Ad

ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! 

ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ, ನಿರ್ಭರ ನಿಧಿ  ಎನ್ನುವ ಯೋಜನೆಯನ್ನು ಬೀದಿ ವ್ಯಾಪಾರಿಗಳಿಗೆ ಸಾಲ ನೀಡುವ ಸಲುವಾಗಿ ಆರಂಭಿಸಲಾಗಿದ್ದು ,ಕೇಂದ್ರ ಸರ್ಕಾರ ಈ ಮೂಲಕ ಸ್ವ ನಿಧಿ ಯೋಜನೆಯನ್ನು ಪರಿಚಯಿಸಿದೆ.

ಈ ಸುದ್ದಿ ಓದಿದ್ದೀರಾ?:ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ದ.ಕ ಜಿಲ್ಲೆ ಹಾಗೂ ಕದಳಿ ಬೀಚ್ ಟೂರಿಸಂ ಇವರು ಅರ್ಪಿಸುವ ಮಂಗಳೂರಿನ ಪಣಂಬೂರಿನ ಕಡಲ ತಡಿಯಲ್ಲಿ

ಇದರ ಅಡಿಯಲ್ಲಿ ಯಾವುದೇ ರೀತಿಯ ಗ್ಯಾರಂಟಿ ಪಡೆದುಕೊಳ್ಳದೆ ಸರಕಾರ ವ್ಯಾಪಾರ ಮಾಡುವವರಿಗೆ ಸಾಲ  ಸೌಲಭ್ಯ ಒದಗಿಸುತ್ತದೆ. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಪ್ರಧಾನ್ ಮಂತ್ರಿ ಸ್ವನಿಧಿ ಯೋಜನೆ!

Covid 19 ಬಳಿಕ ದೇಶದಲ್ಲಿ ಬೀದಿಗಳಲ್ಲಿ ವ್ಯಾಪಾರ ಮಾಡುವವರಿಗೆ ಆರ್ಥಿಕವಾಗಿ ಸಾಕಷ್ಟು ಸಮಸ್ಯೆ ಎದುರಿಸುವಂತೆ ಆಯ್ತು. ನಂತರ ನಾವು ಸುಧಾರಿಸಿಕೊಳ್ಳುವುದಕ್ಕೆ ಎರಡು ವರ್ಷಗಳ ಸಮಯವೇ ಬೇಕಾಯಿತು.

ಇನ್ನು ಹೀಗೆ ಸಂಕಷ್ಟ ಅನುಭವಿಸಿದವರಲ್ಲಿ ಬೀದಿ ವ್ಯಾಪಾರಿಗಳೇ ಜಾಸ್ತಿ ಎನ್ನಬಹುದು. ಪುಟ್ಟ ಅಂಗಡಿ ಇಟ್ಟುಕೊಂಡು ಅಥವಾ ತೆಳು ಗಾಡಿಯಲ್ಲಿ ತರಕಾರಿ ಹಣ್ಣು ಮಾರಾಟ ಮಾಡುವ ಬೀದಿ ಬದಿಯ ವ್ಯಾಪಾರಿಗಳು ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯನ್ನು ಅನುಭವಿಸಿದರು.

ಮತ್ತೆ ಅವರು ತಮ್ಮ ವ್ಯಾಪಾರವನ್ನು ಆರಂಭಿಸಬೇಕು ಅಂದ್ರೆ ಅದಕ್ಕೆ ಬಂಡವಾಳ  ಬೇಕು, ಈ ಬಂಡವಾಳಕ್ಕಾಗಿ ಲೋಕಲ್ ಶ್ರೀಮಂತ ವ್ಯಕ್ತಿಯ ಬಳಿ ಅತಿ ಹೆಚ್ಚು ಬಡ್ಡಿಗೆ ಸಾಲ ಪಡೆದುಕೊಳ್ಳುವಂತೆ ಆಯ್ತು.

ಇದನ್ನ ಗಮನಿಸಿರುವ ಸರ್ಕಾರ ಸ್ವನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ವ್ಯಾಪಾರಿಗಳಿಂದ ಯಾವುದೇ ಗ್ಯಾರಂಟಿಯನ್ನು ಪಡೆದುಕೊಳ್ಳದೆ 50 ಸಾವಿರ ರೂಪಾಯಿಗಳವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಸಾಲ ಪಡೆದುಕೊಳ್ಳುವುದು ಹೇಗೆ? (How to get loan)

2020 ಜೂನ್ ಒಂದರಂದು ವಸತಿ ಮತ್ತು ನಗರ ಸಚಿವಾಲಯ ಮೈಕ್ರೋ ಕ್ರೆಡಿಟ್ (micro credit) ಅನ್ನು ಪರಿಚಯಿಸಿತು. ಈ ಮೂಲಕ ಕಡಿಮೆ ಮೊತ್ತದ ಹಣವನ್ನು ಯಾವುದೇ ಗ್ಯಾರಂಟಿ ಇಲ್ಲದೆ ಸರಕಾರ ವ್ಯಾಪಾರಿಗಳಿಗೆ ನೀಡುತ್ತದೆ.

ನಿಗದಿತ ಅವಧಿ ಒಳಗೆ ಆ ಸಾಲವನ್ನು ಮರುಪಾವತಿ ಮಾಡಿ ಮತ್ತೆ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಮೊದಲ ಹಂತದಲ್ಲಿ 10,000ಗಳನ್ನು ಅದನ್ನು ಮರುಪಾವತಿ ಮಾಡಿದ ನಂತರ 30,000ಗಳನ್ನು ಹಾಗೂ ನಂತರದಲ್ಲಿ 50,000 ವರೆಗೆ ಸಹಾಯಧನ ಪಡೆಯಬಹುದು. ಸ್ವನಿಧಿ ಸಾಲ ಪಡೆಯಲು ಯಾರು ಅರ್ಹರು?

ಬೀದಿ ಬದಿಯಲ್ಲಿ ಹಣ್ಣು ವ್ಯಾಪಾರ ಮಾಡುವವರು, ತರಕಾರಿ ವ್ಯಾಪಾರ ಮಾಡುವವರು, ಇಸ್ತ್ರಿ ಅಂಗಡಿ ಇಟ್ಟುಕೊಂಡಿರುವವರು, ಹಾಲು ವ್ಯಾಪಾರ ಮಾಡುವವರು, ಹೂವು ವ್ಯಾಪಾರ ಮಾಡುವವರು, ಶವ್ರಿಕ ಅಂಗಡಿ, ಪಾನ್ ಶಾಪ್ ಗಳು ಮೊದಲಾದ ವ್ಯಾಪಾರಸ್ಥರು ಪ್ರಯೋಜನ ಪಡೆಯಬಹುದಾಗಿದೆ.

  • ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
  • ಮತದಾರರ ಗುರುತಿನ ಚೀಟಿ
  • ಆಧಾರ್ ಕಾರ್ಡ್
  • ಬ್ಯಾಂಕ ಖಾತೆಯ ವಿವರ
  • ಪಾಸ್ಪೋರ್ಟ್ ಅಳತೆಯ ಫೋಟೋ
  • ವ್ಯಾಪಾರದ ಬಗ್ಗೆ ವಿವರ

ಈ ಮೇಲಿನ ಎಲ್ಲ ವ್ಯಾಪಾರಸ್ಥರು ತಮ್ಮ ಸಣ್ಣ ಉದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳಲು ಬೇಕಾಗಿರುವ ಬಂಡವಾಳವನ್ನು ಸರ್ಕಾರದಿಂದ ಪಡೆಯಬಹುದು. ಇದಕ್ಕಾಗಿ ಯಾವುದೇ ರೀತಿಯ ಅಡಮಾನ ಇಡುವಾಗ ಅಗತ್ಯವಿಲ್ಲ. ಇನ್ನು ಸಾಲವನ್ನು ಸಹಕಾರಿ ಬ್ಯಾಂಕ್ ಗಳು, ಸಣ್ಣ ಫೈನಾನ್ಸ್ ಬ್ಯಾಂಕ್ ಗಳು, NBFC ಹಾಗೂ ಪ್ರಮುಖ ವಾಣಿಜ್ಯ ಬ್ಯಾಂಕ್ ಗಳಲ್ಲಿ ಪಡೆಯಬಹುದು.

ಅರ್ಜಿ ಸಲ್ಲಿಸುವುದು ಹೇಗೆ?https://pmsvanidhi.mohua.gov.in/login ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಿ. ಆರಂಭದಲ್ಲಿ ಕಾಣುವ 10,000 ಹಾಗೂ 50,000 ಈ ಮೂರು ಮೊತ್ತದಲ್ಲಿ ಯಾವ ಮೊತ್ತದ ಸಾಲವನ್ನು ಪಡೆದುಕೊಳ್ಳಲು ಬಯಸುತ್ತೀರಿ ಎಂದು ಕ್ಲಿಕ್ ಮಾಡಿ. ನಂತರ ಅಗತ್ಯ ಇರುವ ದಾಖಲೆ ಮತ್ತು ಮಾಹಿತಿ ಭರ್ತಿ ಮಾಡಿ ಯೋಜನೆಯ ಸಾಲ ಸೌಲಭ್ಯ (Loan) ಪಡೆಯಬಹುದು.

ಈ ಸುದ್ದಿ ಓದಿದ್ದೀರಾ?:ಚಂದನ ಸಾಹಿತ್ಯ ವೇದಿಕೆ, ಸುಳ್ಯ ಇದರ ನೇತೃತ್ವದಲ್ಲಿ ಕಡಲ ಕವಿಗೋಷ್ಠಿ

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ