ಅಧ್ಯಾಪಕರು ಅಧ್ಯಯನ ಶೀಲರಾಗಬೇಕು :ವಾಮನ್ ರಾವ್ ಬೇಕಲ್
ಅಧ್ಯಾಪಕರು ಅಧ್ಯಯನ ಶೀಲರಾಗಬೇಕು :ವಾಮನ್ ರಾವ್ ಬೇಕಲ್
ಕಾಸರಗೋಡು ಜಿಲ್ಲೆಯ ಆಯ್ದ ವಿವಿಧ ಶಿಕ್ಷಣ ಕೇಂದ್ರದ ಶಿಕ್ಷಕರು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯ, ವಾಚನಾಲಯಕ್ಕೆ ಭೇಟಿ ನೀಡಿ ಸಾವಿರಾರು ಸಂಖ್ಯೆಯ ಪುಸ್ತಕಗಳೊಂದಿಗೆ ಮುಖಾಮುಕಿಯಾದರು. ವಿವಿಧ ಮೌಲಿಕ ಪುಸ್ತಕಗಳನ್ನು ಅಧ್ಯಯನಕ್ಕಾಗಿ ಪಡೆದುಕೊಂಡರು. ಕಾರ್ಯಕ್ರಮ ಸಂಘಟಕರಾದ ನಿವ್ರಿತ್ತ ಶಿಕ್ಷಕರು, ಲೇಖಕರಾದ ಕನ್ನಡ ಭವನದ ನಿರ್ದೇಶಕರೂ ಆದ ವಿಶಾಲಾಕ್ಷ ಪುತ್ರಕಳ ಅಧ್ಯಾಪಕರುಗಳು ಓದಲೇ ಬೇಕಾದ ಪುಸ್ತಕಗಳ ಬಗ್ಗೆ ವಿವರಣೆ ನೀಡಿದರು.
ಸುಮಾರು ಐವತ್ತು ಮೌಲಿಕ ಕೃತಿಗಳನ್ನು ಓದಲು ಪಡೆದುಕೊಂಡ ಅಧ್ಯಾಪಕರುಗಳಿಗೆ ಕನ್ನಡ ಭವನ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಹಾಗೂ ಗ್ರಂಥಾಲಯ ಸಂಚಾಲಕಿ ಸಂದ್ಯಾ ರಾಣಿ ಟೀಚರ್ ಕನ್ನಡ ಭವನದ ಅಭಿನಂದನಾ ಪತ್ರ ಹಾಗೂ ಸಮಾಜ ಸಂಪದ ಕೃತಿಯನ್ನು ನೀಡಿ ಅಭಿನಂದಿಸಿದರು.
ಅಧ್ಯಾಪಕರುಗಳಾದ ಶರ್ಮಿಳಾ ಎ ಮಂಗಲ್ಪಾಡಿ, ಡಾ ಶ್ರೀಶ ಕುಮಾರ್ ಪಿ ಜಿ ವಿ ಎಚ್ ಎಸ್ ಎಸ್ ಕಾರಡ್ಕ, ಪ್ರಶಾಂತ್ ಹೊಳ್ಳ ನಿರಾಳ ಸಿರಿಬಾಗಿಲು, ಎಸ್ ಡಿ ಪಿ ಎಚ್ ಎಸ್ ಎಸ್ ಧರ್ಮತಡ್ಕ, ರೋಹಿತಾಕ್ಷಿ ಕೆ ಬಿ, ಬಿ ಇ ಎಂ ಎಚ್ ಎಸ್ ಎಸ್ ಕಾಸರಗೋಡು, ರಾಜೇಶ್ ಚಂದ್ರ ಕೆ ಪಿ ಪ್ರಾಂಶುಪಾಲರು ಬಿ ಇ ಎಂ ಎಚ್ ಎಸ್ ಎಸ್ ಕಾಸರಗೋಡು, ಗೀತಾ ಸಾವಿತ್ರಿ ಕೆ, ಜಿ ವಿ ಎಚ್ ಎಸ್ ಎಸ್ ಮುಳ್ಳೇರಿಯ, ಶ್ರೀ ಲತಾ ಕೆ, ಎಸ್ ಜಿ ಕೆ ಎಚ್ ಎಸ್ ಎಸ್ ಕೂಡ್ಲು, ಕಲಾವತಿ ಬಿ, ಎಸ್ ಎ ಪಿ ಎಚ್ ಎಸ್ ಎಸ್ ಆಗಲ್ಪಾಡಿ ಸರ್ವಮಂಗಳಾ ವಿ ನವಜೀವನ ಪ್ರೌಢ ಶಾಲೆ ಪೆರಡಾಲ, ವೀಣಾ ಕೆ ನಿವ್ರಿತ್ತ ಮುಕ್ಯೋಪಾಧ್ಯಾಯನಿ ಜಿ ಎಚ್ ಎಸ್ ಬಂದಡ್ಕ, ಸೀಮಾ ಸುವರ್ಣ, ಜ್ಯೋತಿ ಏನ್, ಅನಿಲ್ ಕುಮಾರ್ ಎಂ, ಇವರುಗಳು ಪುಸ್ತಕಗಳೊಂದಿಗೆ ಇಡೀ ದಿನ ಕಳೆದರು. ಗ್ರಂಥಾಲಯ, ವಾಚನಾಲಯದ ಬಗ್ಗೆ ಅನಿಸಿಕೆ ಭಾಷಣದಲ್ಲಿ ಸಂತೋಷ ವ್ಯಕ್ತಪಡಿಸಿದರು. ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಸಂಧ್ಯಾರಾಣಿ ಟೀಚರ್ ವಂದಿಸಿದರು. ಕನ್ನಡ ಭವನ ನಿರ್ದೇಶಕರಾದ ಲೇಖಕ, ಸಂಘಟಕ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.