ಕಡಬ: ವರ್ಗಾವಣೆಗೊಂಡ ಮೇಲ್ವಿಚಾರಕರಿಗೆ ಕಡಬ ಶೌರ್ಯ ಘಟಕದಿಂದ ಬೀಳ್ಕೋಡುಗೆ.
ಕಡಬ: ವರ್ಗಾವಣೆಗೊಂಡ ಮೇಲ್ವಿಚಾರಕರಿಗೆ ಕಡಬ ಶೌರ್ಯ ಘಟಕದಿಂದ ಬೀಳ್ಕೋಡುಗೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದಲ್ಲಿ ಕಳೆದ ಮೂರು ವರ್ಷದಿಂದ ಮೇಲ್ವೀಚಾರಕರಾಗಿ ಕೆಲಸ ನಿರ್ವಹಿಸಿ ಬಿಳಿನೆಲೆ ವಲಯಕ್ಕೆ ವರ್ಗಾವಣೆಗೊಂಡ ರವಿಪ್ರಸಾದ್ ಆಲಾಜೆಯವರಿಗೆ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಕಡಬ ಘಟಕದ ವತಿಯಿಂದ ಬೀಳ್ಕೋಡುಗೆ ಕಾರ್ಯಕ್ರಮವು ಕಡಬ ಯೋಜನಾ ಕಛೇರಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನಜಾಗೃತಿ ವೇದಿಕೆಯ ಕಡಬ ವಲಯದ ಅಧ್ಯಕ್ಷರಾದ ಕರುಣಾಕರ ಗೋಖಟೆಯವರು ಮಾತನಾಡಿ ಪ್ರಾಕೃತಿಕ ವಿಕೋಪ ಹಾಗೂ ಅವಘಡಗಳ ಸಂದರ್ಭ ಅಪಾಯದಲ್ಲಿರುವವರಿಗೆ ಧೈರ್ಯ ತುಂಬುವ ದೃಷ್ಟಿಯಿಂದ ರಚನೆ ಮಾಡಿರುವ ಶೌರ್ಯ ಘಟಕವು ಪೂಜ್ಯ ವೀರೇಂದ್ರ ಹೆಗ್ಗಡೆಯವರ ದೂರ ದೃಷ್ಟಿತ್ಪ ಸಂಕೇತ.
ಕಡಬ ಶೌರ್ಯ ಘಟಕಕ್ಕೆ ಯುವಕರನ್ನು ಸಂಘಟಿಸಿ ರಾಜ್ಯದಲ್ಲಿಯೇ ಮಾದರಿ ಘಟಕವಾಗಿಸಿ ಜಿಲ್ಲಾ ಮಟ್ಟದಲ್ಲಿ ತಾಲೂಕು ಮಟ್ಟದಲ್ಲಿ ಗುರುತಿಸಲ್ಪಡುವ ಘಟಕವನ್ನಾಗಿಸಲು ಶ್ರಮಿಸಿದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ರವರ ಶ್ರಮಕ್ಕೆ ಅಭಿನಂದನೆ ಸಲ್ಲಿಸುವ ಶೌರ್ಯ ಘಟಕದ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಕಡಬ ಶೌರ್ಯ ಘಟಕದ ಘಟಕ ಪ್ರತಿನಿಧಿ ಹಾಗೂ ತಾಲೂಕು ಶೌರ್ಯ ಘಟಕದ ಮಾಸ್ಟರ್ ಪ್ರಶಾಂತ್ ಎನ್ ಎಸ್, ˌಕಡಬ ಘಟಕದ ಸಂಯೋಜಕಿ ನಳಿನಿ ಹಾಗೂ ಘಟಕದ ಸ್ವಯಂ ಸೇವಕರುಗಳು ಹಾಗೂ ಕಡಬ ವಲಯಕ್ಕೆ ನೂತನ ಮೇಲ್ವೀಚಾರಕರಾಗಿ ಬಂದಿರುವ ವಿಜೇಶ್ ಜೈನ್ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.