ಕಡಬ: ಮರ್ದಾಳ ಶೌರ್ಯ ಘಟಕದ ಮಾಸಿಕ ಸಭೆ ಹಾಗೂ ಶಾಲಾ ಆವರಣದಲ್ಲಿ ಶ್ರಮದಾನ..
ಕಡಬ: ಮರ್ದಾಳ ಶೌರ್ಯ ಘಟಕದ ಮಾಸಿಕ ಸಭೆ ಹಾಗೂ ಶಾಲಾ ಆವರಣದಲ್ಲಿ ಶ್ರಮದಾನ..
ಸ್ವಯಂ ಭದ್ರತೆಯೊಂದಿಗೆ ವಿಪತ್ತು ನಿರ್ವಹಿಸಿ ..ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಸಲಹೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಮರ್ದಾಳ ಶೌರ್ಯಘಟಕದ ಮಾಸಿಕ ಸಭೆ ಹಾಗೂ ಶ್ರಮದಾನ ಕಾರ್ಯಕ್ರಮವು ಕರ್ಮಾಯಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಶೌರ್ಯ ಘಟಕದ ಸಾಧನೆಯ ಬಗ್ಗೆ ವಿಮರ್ಶಿಸಿ ಮಾತನಾಡಿ ಸಾಮಾಜಿಕ ಕಳಕಳಿಯ ಉದ್ದೇಶದಿಂದ ಪ್ರಾರಂಭಗೊಂಡಿರುವ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಅನೇಕ ಜನಪರ ಕಾರ್ಯಗಳು ನಡೆಯುತ್ತಿದ್ದು ಮರ್ಧಾಳ ಶೌರ್ಯ ಘಟಕ ದ ಎಲ್ಲಾ ಸ್ವಯಂ ಸೇವಕರು ಸಮಾನ ಮನಸ್ಕರಾಗಿ ಭಾಗವಹಿಸಿ ಘಟಕದ ಹೆಸರನ್ನು ಜನಸಾಮಾನ್ಯರು ಗುರುತಿಸುವಂತೆ ಮಾಡಬೇಕು. ಆಪತ್ತು ಸಂದರ್ಭದಲ್ಲಿ ಸೂಕ್ತ ಭದ್ರತೆಯೊಂದಿಗೆ ಭಾಗವಹಿಸಿ ಆಪತ್ತಿನಲ್ಲಿದ್ದವರಿಗೆ ದೈರ್ಯ ತುಂಬುವ ಸಲುವಾಗಿ ಗ್ರಾಮಾಭಿವೃದ್ಧಿ ಯೋಜನೆಯಿಂದ ತರಬೇತಿಗಳನ್ನು ಕಾಲಾನುಕಾಲಕ್ಕೆ ನೀಡುತ್ತಿದ್ದು ಸ್ವಯಂಸೇವಕರು ಸದುಪಯೋಗಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಹಾಗೂ ಶಾಲಾಭಿವೃಧ್ಧಿ ಸಮಿತಿ ಅಧ್ಶಕ್ಷ ಹರೀಶ್ ಉಪಸ್ಥಿತರಿದ್ದರು.ಸಂಯೋಜಕಿ ಜ್ಞಾನ ಸೆಲ್ವೀ ಸ್ವಾಗತಿಸಿ ಘಟಕ ಪ್ರತಿನಿಧಿ ಭವಾನಿಶಂಕರ ಅಧ್ಯಕ್ಷತೆ ವಹಿಸಿದ್ದರು.ಶಾಲಾ ಆವರಣದಲ್ಲಿ ಅಪಾಯಕಾರಿ ಮರಗಳ ತೆರವು ಹಾಗೂ ಅಡಿಕೆ ಗಿಡಗಳಿಗೆ ಸೊಪ್ಪು ಗೊಬ್ಬರ ಹಾಕುವ ಶ್ರಮದಾನದಲ್ಲಿ ಹದಿನೈದು ಜನ ಸ್ವಯಂ ಸೇವಕರುಗಳು ಭಾಗವಹಿಸಿದರು.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.