ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ.
ಬಿಜೆಪಿ ಶಕ್ತಿ ಕೇಂದ್ರ ಸವಣೂರು, ಸವಣೂರು ಬೂತ್ ಸಮಿತಿ 65 ಹಾಗೂ ಮೊಗರು ಬೂತ್ ಸಮಿತಿ 66 ಇದರ ವತಿಯಿಂದ ಭಾರತ ದೇಶದ ಮಾಜಿ ಪ್ರಧಾನಿ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಇವರ ಪುಣ್ಯಸ್ಮರಣೆ ಕಾರ್ಯಕ್ರಮ ಸವಣೂರು ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು. ವಾಜಪೇಯಿ ಅವರ ಜೀವನ ಚರಿತ್ರೆ, ಪಕ್ಷಕ್ಕಾಗಿ ಅವರು ನೀಡಿದಂತಹ ಕೊಡುಗೆ, ಕಾರ್ಯಗಳ ಬಗ್ಗೆ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ರಾಕೇಶ್ ರೈ ಕೆಡೆಂಜಿ ಇವರು ತಿಳಿಸಿದರು.
ಈ ಸುದ್ದಿಯನ್ನು ಓದಿದ್ದೀರಾ.?ಕಾಣಿಯೂರು ಹಾ.ಉ.ಸ.ಸಂಘಕ್ಕೆ ಕೆಎಂಎಫ್ ಅಧಿಕಾರಿಗಳ ಭೇಟಿ,ರೈತರೊಂದಿಗೆ ಮಾತುಕತೆ.
ಈ ಸಂದರ್ಭದಲ್ಲಿ ಸುಳ್ಯ ಎಸ್.ಟಿ ಮೋರ್ಚಾದ ಅಧ್ಯಕ್ಷರಾದ ಗಂಗಾಧರ ಪೆರಿಯಡ್ಕ, ಸವಣೂರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ತಾರಾನಾಥ ಕಾಯರ್ಗ, ಸವಣೂರು ಶಕ್ತಿಕೇಂದ್ರದ ಅಧ್ಯಕ್ಷರಾದ ಚೇತನ್ ಕುಮಾರ್ ಕೊಡಿಬೈಲು, 65 ಬೂತ್ ಅಧ್ಯಕ್ಷರಾದ ತೀರ್ಥರಾಮ ಕೆಡೆಂಜಿ,ಕಾರ್ಯದರ್ಶಿ ಸತೀಶ್ ಬಲ್ಯಾಯ, 66 ಬೂತ್ ಅಧ್ಯಕ್ಷರಾದ ರಾಜೇಶ್ ಇಡ್ಯಾಡಿ, ಕಾರ್ಯದರ್ಶಿ ಹಿತೇಶ್ ಮೆದು, ಶಿವರಾಮ ಗೌಡ ಮೆದು, ಸಂಜೀವ ಪೂಜಾರಿ ಅಗರಿ, ಗಂಗಾಧರ ಸುಣ್ಣಾಜೆ, ರಾಮಕೃಷ್ಣ ಪ್ರಭು, ಶ್ರೀಧರ ಇಡ್ಯಾಡಿ, ಕೀರ್ತನ್ ಕೋಡಿಬೈಲು, ದಯಾನಂದ ಮೆದು, ಜಗದೀಶ್ ಇಡ್ಯಾಡಿ ಉಪಸ್ಥಿತರಿದ್ದರು.
ಈ ಸುದ್ಧಿ ಓದಿದ್ದೀರಾ: ಸಾಮಾನ್ಯರಿಗೂ ಗೆಲ್ಲಬಹುದು ಸ್ವಂತ ಮನೆ!…
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.