ಗಾಳಿ ಮಳೆಗೆ ಮರಬಿದ್ದು ಮಹಿಳೆ ಸಾವು.
ಗಾಳಿ ಮಳೆಗೆ ಮರಬಿದ್ದು ಮಹಿಳೆ ಸಾವು.
ಉಡುಪಿ: ರವಿವಾರ ಸಂಜೆ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಮರ ಬಿದ್ದು ಮಹಿಳೆ ಹಾಗು ಅವರು ಮನೆಗೆ ಕರೆತರುತ್ತಿದ್ದ ದನವೊಂದು ಮರದಡಿಗೆ ಸಿಲುಕಿ ಮೃತಪಟ್ಟ ಧಾರುಣ ಘಟನೆಯೊಂದು ನಿನ್ನೆ ನಡೆದಿದೆ. ಉಡುಪಿ ಜಿಲ್ಲೆಯ ವಂಡ್ಸೆ ಕೆಂಚನೂರು ಗ್ರಾಮದ ಮಲ್ಲಾರಿ ಎಂಬಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. 53 ವರ್ಷದ ಸುಜಾತ ಆಚಾರ್ತಿ ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಸುಮಾರು 5:30 ರ ವೇಳೆಗೆ ಮಳೆ ಸುರಿಯ ತೊಡಗಿದ್ದು ಸುಜಾತ ಅವರು ಸಮೀಪದಲ್ಲೇ ಮೇಯಲು ಕಟ್ಟಿ ಹಾಕಿದ್ದ ದನವನ್ನು ಬಿಡಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಅತಿಯಾದ ಗಾಳಿಯಿಂದಾಗಿ 2-3 ಮರಗಳು ಒಟ್ಟಿಗೆ ಅವರ ಮೈಮೇಲೆ ಬಿದ್ದಿದೆ ಎನ್ನಲಾಗಿದೆ. ಜೊತೆಯಲ್ಲಿದ್ದ ದನದ ಮೇಲು ಮರಬಿದ್ದ ಕಾರಣ ದನವು ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳೀಯರು ಕೂಡಲೇ ಸುಜಾತರವರನ್ನು ಕುಂದಾಪುರ ಆಸ್ಪತ್ರೆಗೆ ಕರೆ ತಂದರು, ಅದಾಗಲೇ ಅವರು ಮೃತ ಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಮೃತರು ಪತಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.