ಸಂಸ್ಕಾರದೊಂದಿಗೆ ಸಮಾರಂಭಗಳು ನಡೆದಾಗ ಸಮಾಜಕ್ಕೆ ಸುಂದರ ಸಂದೇಶ ರವಾನೆ.
ಸಂಸ್ಕಾರದೊಂದಿಗೆ ಸಮಾರಂಭಗಳು ನಡೆದಾಗ ಸಮಾಜಕ್ಕೆ ಸುಂದರ ಸಂದೇಶ ರವಾನೆ.
ಮಂಗಳ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾನ್ಯ ಚಂದ್ರಶೇಖರ್ ತಳೂರು..
ಕೊಡಿಯಾಲ ಗ್ರಾಮದ ಕಲ್ಪಡ ನಿವಾಸಿಗಳಾದ ಚಿದಾನಂದ ಉಪಾಧ್ಯಾಯ ಮತ್ತು ಪೂರ್ಣಿಮಾ ಇವರ ಸುಪುತ್ರ ಕಾರ್ತಿಕ್ ಇವರ ವಿವಾಹವು ಶ್ರೀಲಕ್ಷ್ಮಿ ಎಂಬ ವಧುವಿನೊಂದಿಗೆ ಉಡುಪಿಯ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆದಿದ್ದು ಅದರ ಅಂಗವಾಗಿ ವಧುಗೃಹಪ್ರವೇಶವು ಕಲ್ಪಡ ನಿವಾಸದಲ್ಲಿ ನಡೆಯಿತು.
ಸಂಸ್ಕಾರಗಳ ಜೊತೆಗೆ ಸಮಾರಂಭ ಇರಬೇಕೆಂಬ ಯೋಚನೆಯಿಂದ ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ ಕಾಣಿಯೂರು ತಂಡದಿಂದ ಭಜನಾ ಕಾರ್ಯಕ್ರಮ, ಧರ್ಮಶ್ರೀ ಕುಣಿತ ಭಜನಾ ಮಂಡಳಿ ಮೂವಪ್ಪೆ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ಜರಗಿತು..
ಮಂಗಳ ನಿಧಿ ಸಮರ್ಪಣೆ
ಸಮಾರಂಭದಲ್ಲಿ ಕಾರ್ಯಕ್ರಮ ನೀಡಿದ ಲಕ್ಷ್ಮೀ ನರಸಿಂಹ ಭಜನಾ ಮಂಡಳಿಗೆ, ಧರ್ಮಶ್ರೀ ಕುಣಿತ ಭಜನಾ ಮಂಡಳಿಗೆ, ಶಿವಳ್ಳಿ ಸಂಪದ ಬೆಳಂದೂರು ವಲಯಕ್ಕೆ, ಅದೇ ರೀತಿ ಈ ಮನೆಯು ಈ ಮನೆ ಮಂದಿಯು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ದಾಂತದಡಿಯಲ್ಲಿ ಬೆಳೆದು ಬಂದಿದ್ದು ಸಂಘಕ್ಕೆ ಸಮರ್ಪಣೆಯು ಮಂಗಳ ನಿಧಿ ಕಾರ್ಯಕ್ರಮದಲ್ಲಿ ನೀಡಲಾಯಿತು. ಈ ಸಂಧರ್ಭ ಮಾನ್ಯ ತಳೂರು ಚಂದ್ರಶೇಖರ್ ಸಂಘ ಚಾಲಕರು ಸುಳ್ಯ ತಾಲೂಕು ಮತ್ತು ಪ್ರದ್ಯುಮ್ಹ ಉಬರಡ್ಕ ಸಹ ಸಂಘ ಚಾಲಕರು ಸುಳ್ಯ ತಾಲೂಕು ಇವರು ಉಪಸ್ಥಿತರಿದ್ದರು. ಕರುಣಾಕರ ಉಪಾಧ್ಯಾಯ ಮತ್ತು ಇಂದಿರಾ ಬಿ ಕೆ ಕಾರ್ಯಕ್ರಮ ನಿರೂಪಿಸಿದರು.
ಇದನ್ನು ಓದಿದ್ದೀರಾ: ಇಲ್ಲಿ ಎಲ್ಲರಿಗೂ ಖಚಿತ ಬಹುಮಾನ! ಇಂದೇ ನೊಂದಾಯಿಸಿ.
WWW.GOLDFACTORYNEWS.COM
Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.