• 17 ಫೆಬ್ರವರಿ 2025

ಕಾಸರಗೋಡಿನಲ್ಲಿ ಕನ್ನಡವೆಂದೂ ಅಳಿಯದು – ವಿ ಬಿ ಕುಳಮರ್ವ.

 ಕಾಸರಗೋಡಿನಲ್ಲಿ ಕನ್ನಡವೆಂದೂ ಅಳಿಯದು – ವಿ ಬಿ ಕುಳಮರ್ವ.
Digiqole Ad

ಕಾಸರಗೋಡಿನಲ್ಲಿ ಕನ್ನಡವೆಂದೂ ಅಳಿಯದು – ವಿ ಬಿ ಕುಳಮರ್ವ.

ಕಾಸರಗೋಡು: ಕಾಸರಗೋಡಿನಲ್ಲಿ ಕನ್ನಡ ಭಾಷೆಗೆ ದೀರ್ಘ ಇತಿಹಾಸ ಇದೆ. ಅನೇಕ ವಿದ್ವಾಂಸರ ಬೆಂಬಲವಿದೆ. ಹೊಸ ಪೀಳಿಗೆಯೂ ಕೂಡಾ ಕನ್ನಡದ ಪರವಾಗಿಯೇ ಇದೆ. ಆದ್ದರಿಂದ ಕಾಸರಗೋಡಿನಲ್ಲಿ ಕನ್ನಡ ಭಾಷೆಯು ಎಂದಿಗೂ ಅಳಿಯದು’ ಎಂದು ಶಿಕ್ಷಣ ತಜ್ಞ ವಿ. ಬಿ ಕುಳಮರ್ವ ಹೇಳಿದರು. ಅವರು ಈಚೆಗೆ ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದಲ್ಲಿ ಸ್ಪಂದನ ಸಿರಿ ಜಿಲ್ಲಾ ಘಟಕ, ಕನ್ನಡ ಭವನ ಗ್ರಂಥಾಲಯ, ವಿಸ್ಡಮ್ ಇನ್ಸ್ಟಿಟ್ಯೂಟ್ ನೆಟ್ವರ್ಕ್ ಜಂಟಿ ಆಶ್ರಯದಲ್ಲಿ ನಡೆದ ಸ್ಪಂದನ ಸಿರಿ ಕೃಷಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು. ‘ಕಾಸರಗೋಡಿನಲ್ಲಿ ಕನ್ನಡಿಗರ ಭಾಷಾಪ್ರೇಮ ಬದಲಾಗಿಲ್ಲ. ಕನ್ನಡ ಮಾತೃಭಾಷೆಯ ಕುಟುಂಬಗಳು ಕಾಸರಗೋಡಿನಲ್ಲಿ ಇನ್ನೂ ಅನೇಕವಿದೆ. ಕನ್ನಡವೇ ಇಲ್ಲಿನ ಕನ್ನಡಿಗರ ಶಕ್ತಿ’ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ ಆರ್ ಸುಬ್ಬಯ್ಯಕಟ್ಟೆ, ಕನ್ನಡ ಭವನ ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್, ಕನ್ನಡ ಭವನದ ಪ್ರಕಾಶಕಿ ಸಂಧ್ಯಾರಾಣಿ ಟೀಚರ್, ಹಾಸನದ ಸ್ಪಂದನ ಸಿರಿ ಸ್ಥಾಪಕ ಅಧ್ಯಕ್ಷೆ ಜಿ ಎಸ್ ಕಲಾವತಿ ಮಧುಸೂದನ, ಸ್ಪಂದನ ಸಿರಿ ಜಿಲ್ಲಾಧ್ಯಕ್ಷ ವಿರಾಜ್ ಅಡೂರು, ಶಿಕ್ಷಕಿ ಕೆ ಟಿ ಶ್ರೀಮತಿ, ನಿವೃತ್ತ ಪ್ರಾಂಶುಪಾಲ ಶ್ರೀನಾಥ್ ಮೊದಲಾದವರು ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ವಿ ಬಿ ಕುಳಮರ್ವ ಹಾಗೂ ಅವರ ಪತ್ನಿ ಲಲಿತಾಲಕ್ಷ್ಮಿ ಕುಳಮರ್ವರ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು. ನಂತರ ಡಾ.ವಾಣಿಶ್ರೀ ಕಾಸರಗೋಡು ಮತ್ತು ಗುರುರಾಜ್ ಕಾಸರಗೋಡು ಅವರ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಸದಸ್ಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು. ರಮ್ಯಾ ಮೂರ್ನಾಡು ಕೊಡಗು ಸ್ವಾಗತಿಸಿದರು. ಗಿರಿಜಾ ವಂದಿಸಿದರು. ಸುಧಾ ತುಮಕೂರು ಮತ್ತು ಪದ್ಮಾವತಿ ವೆಂಕಟೇಶ್ ಹಾಸನ ನಿರೂಪಿಸಿದರು.

WWW.GOLDFACTORYNEWS.COM

Gold Factory News is a Karnataka-based web news channel. It offers comprehensive coverage of local, national, and international events. Known for its quality journalism, Gold Factory News provides unbiased news and in-depth analysis. The channel’s dedicated team of journalists ensures timely and accurate reporting. Gold Factory News is rapidly gaining recognition for its integrity and excellence in news reporting.

Digiqole Ad

ಈ ಸುದ್ದಿಗಳನ್ನೂ ಓದಿ