ಕಾಸರಗೋಡು ದಸರಾ ಸಾಹಿತ್ಯ ಸಾಂಸ್ಕೃತಿಕೋತ್ಸವ ಅ.6ರಂದು
ಕಾಸರಗೋಡು ದಸರಾ ಸಾಹಿತ್ಯ ಸಾಂಸ್ಕೃತಿಕೋತ್ಸವ ಅ.6ರಂದು
ಕಾಸರಗೋಡು : ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಸಾಂಸ್ಕೃತಿಕ ಘಟಕ, ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಗ್ರಂಥಾಲಯ, ವಿಜ್ಡಮ್ ಇನ್ಸ್ಟಿಟ್ಯೂಟ್ ನೆಟ್ವರ್ಕ್ ಹಾಗೂ ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಜಂಟಿ ಆಶ್ರಯದಲ್ಲಿ ಆ.6ರಂದು ಅಪರಾಹ್ನ 1.30ರಿಂದ ಪಾಂಗೋಡು ಕ್ಷೇತ್ರದ ‘ಶ್ರೀ ದುರ್ಗಾಂಬಾ ವೇದಿಕೆ’ಯಲ್ಲಿ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ-2024 ನಡೆಯಲಿದೆ. ಅಪರಾಹ್ನ 1.30ರಿಂದ ಶಾಂತಾ ಕುಂಠಿನಿ ಸಾರಥ್ಯದ ಉಪ್ಪಿನಂಗಡಿಯ ಸತ್ಯ ಶಾಂತ ಪ್ರತಿಷ್ಠಾನದ ಸದಸ್ಯರಿಂದ ‘ಗಾನಲಹರಿ’ ನಡೆಯಲಿದೆ. 2.15ರಿಂದ ನಡೆಯುವ ಕಾಸರಗೋಡು ದಸರಾ ಕವಿಗೋಷ್ಟಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಕವಿ ವಿ ಬಿ ಕುಳಮರ್ವ ವಹಿಸಲಿದ್ದಾರೆ. ಅಡೂರಿನ ಶಿವಗಿರಿ ಸಾಹಿತ್ಯ ವೇದಿಕೆಯ ಸ್ಥಾಪಕ ಅಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡುವರು. ಕವಿ ವೆಂಕಟ್ ಭಟ್ ಎಡನೀರು, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಲಲಿತಾಲಕ್ಷ್ಮೀ ಕುಳಮರ್ವ, ಕೆ. ಪಿ ಪ್ರಕಾಶ್ಚಂದ್ರ, ಕೆ. ವಾಮನ್ ರಾವ್ ಬೇಕಲ್, ವಿಶಾಲಾಕ್ಷ ಪುತ್ರಕಳ, ವಸಂತ ಕೆರೆಮನೆ ಭಾಗವಹಿಸುವರು. ಈ ಸಂದರ್ಭದಲ್ಲಿ ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ ಸಮಿತಿಯಿಂದ ವಿ ಬಿ ಕುಳಮರ್ವ- ಲಲಿತಾಲಕ್ಷ್ಮೀ ಕುಳಮರ್ವ ದಂಪತಿಗೆ ‘ಕಾಸರಗೋಡು ದಸರಾ ಸನ್ಮಾನ’ ನಡೆಯಲಿದೆ. ನಾಡಿನ ಖ್ಯಾತ ಸಾಹಿತಿಗಳಾದ
ಡಾ. ಕೆ. ಜಿ. ವೆಂಕಟೇಶ್ ಶಿವಮೊಗ್ಗ , ಡಾ. ಕೊಳಚಪ್ಪೆ ಗೋವಿಂದ ಭಟ್, ಪಿ. ವಿ. ಪ್ರದೀಪ್ ಕುಮಾರ್, ಮಂಗಳೂರು, ರಾಧಾಕೃಷ್ಣ ಕೆ ಉಳಿಯತ್ತಡ್ಕ , ಲಕ್ಷ್ಮಿ ವಿ ಭಟ್, ಜಯಾನಂದ ಪೆರಾಜೆ, ನಾಟಕ ಭಾರ್ಗವ ಕೆಂಪರಾಜು, ವಿರಾಜ್ ಅಡೂರು, ಸೀತಾಲಕ್ಷ್ಮಿ ವರ್ಮ ವಿಟ್ಲ, ಶಾಂತಾ ಪುತ್ತೂರು, ರತ್ನಾ ಕೆ ಭಟ್, ತಲಂಜೇರಿ, ಶ್ರೀಹರಿ ಭಟ್ ಪೆಲ್ತಾಜೆ, ಇವರಿಗೆ ಕಾಸರಗೋಡು ದಸರಾ “ಕವಿ ಶ್ರೇಷ್ಠ ಪ್ರಶಸ್ತಿ 2024 ಪ್ರದಾನ ಮಾಡಲಾಗುವುದು. ಬಳಿಕ ನಡೆಯುವ ಭಕ್ತಿಪ್ರಧಾನ ಕವಿಗೋಷ್ಟಿಯಲ್ಲಿ
ರೇಖಾ ಸುದೇಶ್ ರಾವ್, ಅನ್ನಪೂರ್ಣ ಎನ್ ಕುತ್ತಾಜೆ, ಕುಸುಮಾಕರ ಅಂಬೆಕಲ್ಲು, ರವೀಂದ್ರನ್ ಪಾಡಿ
, ವಿದ್ಯಾ ರಕ್ಷಿತ್ ಪುತ್ತೂರು, ರೇಖಾ ರೋಶನ್ ಮಲ್ಲಿಗೆಮಾಡು, ಚಂಚಲಾಕ್ಷಿ ಶ್ಯಾಮಪ್ರಸಾದ್ ಕಾಸರಗೋಡು, ಮೇಘ ಶಿವರಾಜ್ ಬೀರಂತಬೈಲ್, ಅನಿತಾ ಶೆಣೈ, ನಿರ್ಮಲಾ ಶೇಷಪ್ಪ ಕುಲಾಲ್ ಖಂಡಿಗೆ, ಶುಭಾಷಿಣಿ ಚಂದ್ರ ಬೇಕೂರು, ಶಿವಾನಿ ಕೆ ಪೈವಳಿಕೆ
,ಪ್ರಿಯಾ ಬಾಯಾರು, ಸುಜಿತ್ ಕುಮಾರ್ ಬೇಕೂರು, ಕಲಾವತಿ ಟೀಚರ್ ಕುಂಬಳೆ, ಹಿತೇಶ್ ಕುಮಾರ ನೀರ್ಚಾಲ್, ಗಿರೀಶ್ ಪಿ ಎಂ ಚಿತ್ತಾರಿ, ಸುಶೀಲಾ ಕೆ ಪದ್ಯಾಣ, ಸಂಧ್ಯಾಗೀತ ಬಾಯಾರು, ಗಾಯತ್ರಿ ಪಳ್ಳತ್ತಡ್ಕ, ಗಿರೀಶ್ ಪೆರಿಯಡ್ಕ ಉಪ್ಪಿ ಅಂಗಡಿ, ಶ್ವೇತಾ ಡಿ ಬಂಟ್ವಾಳ ಭಾಗವಹಿಸುವರು. ಕಾಸರಗೋಡು ಜಿಲ್ಲೆಯ ಪದವಿ ಕಾಲೇಜಿನ ಆಯ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಭರವಸೆಯ ಬೆಳಕು 2024 ಗೌರವ ಪ್ರದಾನ ನಡೆಯಲಿದೆ. ವಿಜ್ಡಮ್ ಇನ್ಸ್ಟಿಟ್ಯೂಟ್ ನೆಟ್ವರ್ಕ್ ಮುಖ್ಯಸ್ಥ ಅಭಿಲಾಷ್ ಕ್ಷತ್ರಿಯ ಗೌರವ ಪ್ರದಾನ ಮಾಡುವರು. ಪ್ರಾಂಶುಪಾಲ ಕೆ ಪಿ ರಾಜೇಶ್ಚಂದ್ರ, ಸಂಧ್ಯಾರಾಣಿ ಟೀಚರ್ ಭಾಗವಹಿಸುವರು.