ವಿ.ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರುರವರ ಅಪ್ತ ಸಹಾಯಕರಾಗಿ ಜಯಪ್ರಕಾಶ್ ಎಣ್ಣೆಮಜಲು ನೇಮಕ
ವಿ.ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರುರವರ ಅಪ್ತ ಸಹಾಯಕರಾಗಿ ಜಯಪ್ರಕಾಶ್ ಎಣ್ಣೆಮಜಲು ನೇಮಕ
ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ರವರ ಆಪ್ತ ಸಹಾಯಕರಾಗಿ ಜಯಪ್ರಕಾಶ್ ಎಣ್ಣೆಮಜಲು ರವರನ್ನು ನೇಮಕ ಮಾಡಲಾಗಿದೆ . ಇವರು ಡಿ.ವಿ. ಸದಾನಂದ ಗೌಡ ರವರಿಗೆ ಆಪ್ತಸಹಾಯಕರಾಗಿ ಸೇವೆ ಸಲ್ಲಿಸಿದ್ದು ಡಿ.ವಿ ಸದಾನಂದ ಗೌಡರವರು ಬಿಜೆಪಿ ರಾಜ್ಯ ಅಧ್ಯಕ್ಷ ರಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ, ಕೇಂದ್ರ ರೇಲ್ವೇ, ಕಾನೂನು ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾಗಿದ್ದ ಸಮಯದಲ್ಲಿ ಸರ್ಕಾರಿ ಆಪ್ತಸಹಾಯಕರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.ಪ್ರಸ್ತುತ ಕರ್ನಾಟಕ ವಿಧಾನಸಭಾ ಸಚಿವಾಲಯ, ವಿಧಾನಸೌಧದಲ್ಲಿ ಸೇವೆ ಸಲ್ಲಿಸುತ್ತಿದ್ದು ಕಡಬ ತಾಲೂಕು ಬಳ್ಪಗ್ರಾಮದ ಎಣ್ಣೆಮಜಲು ಗಣಪ್ಪಯ್ಯ ಗೌಡ ಮತ್ತು ಶ್ರೀಮತಿ ರೋಹಿಣಿ ದಂಪತಿಗಳ ಪುತ್ರ.