ಚಾಮರಾಜನಗರ: ಫಾರೆಸ್ಟ್ ವಾಚರ್ ನಿಂದಲೇ ಆನೆ ದಂತ ಸಾಗಾಟ
ಚಾಮರಾಜನಗರ: ಫಾರೆಸ್ಟ್ ವಾಚರ್ ನಿಂದಲೇ ಆನೆ ದಂತ ಸಾಗಾಟ
ಚಾಮರಾಜನಗರ: ಫಾರೆಸ್ಟ್ ವಾಚರ್ ಮತ್ತು ಆತನ ಸಂಬಂಧಿ ಆನೆ ದಂತವನ್ನು ಸಾಗಾಟ ಮಾಡಿರುವ ಘಟನೆ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದೆ.
ಅರಣ್ಯ ವೀಕ್ಷಕರೊಬ್ಬರು ತನ್ನ ಸಂಬಂಧಿಕರೊಂದಿಗೆ ಆನೆ ದಂತ ಸಾಗಿಸುತ್ತಿದ್ದ, ಈ ವೇಳೆ ಸಂಚಾರಿ ಅರಣ್ಯ ದಳ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೈಕ್ ನಲ್ಲಿ ಆನೆ ದಂತ ಸಾಗಿಸುತ್ತಿದ್ದ ವೇಳೆ ಮಾಲು ಸಮೇತ ಖದೀಮರು ಸಿಕ್ಕಿಬಿದ್ದಿದ್ದಾರೆ. ಫಾರೆಸ್ಟ್ ವಾಚರ್ ಚಂದ್ರಶೇಖರ್ ಮತ್ತು ಆತನ ಸಂಬಂಧಿ ಬಸವರಾಜ್ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಪುಟ್ಟಸ್ವಾಮಿ ಪರಾರಿಯಾಗಿದ್ದಾನೆ.
ಅರಣ್ಯ ಸಂಚಾರಿ ದಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.