• 15 ಫೆಬ್ರವರಿ 2025

ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ ಅವರಿಗೆ ತಿರುವನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ದೇಗುಲದ ಮಹಾ ಪ್ರಧಾನ ಅರ್ಚಕ ಸ್ಥಾನ

 ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ ಅವರಿಗೆ ತಿರುವನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ದೇಗುಲದ ಮಹಾ ಪ್ರಧಾನ ಅರ್ಚಕ ಸ್ಥಾನ
Digiqole Ad

ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ ಅವರಿಗೆ ತಿರುವನಂತಪುರ ಶ್ರೀ ಅನಂತ ಪದ್ಮನಾಭಸ್ವಾಮಿ ದೇಗುಲದ ಮಹಾ ಪ್ರಧಾನ ಅರ್ಚಕ ಸ್ಥಾನ

ಬೆಳ್ತಂಗಡಿ: ಕೇರಳದ ಪ್ರಸಿದ್ಧ ತಿರುವನಂತಪುರಂ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಮಹಾ ಪ್ರಧಾನ ಅರ್ಚಕರಾಗಿ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ (45) ಅವರು ನೇಮಕಗೊಂಡಿದ್ದಾರೆ. ಇವರಿಗೆ ಅತಿ ಕಡಿಮೆ ವಯಸ್ಸಿನಲ್ಲಿ ಈ ಗೌರವ ಸ್ಥಾನ ಲಭಿಸಿರುವುದು ವಿಶೇಷ.

ಸತ್ಯನಾರಾಯಣ ತೋಡ್ತಿಲ್ಲಾಯರು ದಿ| ಸುಬ್ರಾಯ ತೋಡ್ತಿಲ್ಲಾಯ ಹಾಗೂ ಶಾರದಾ ದಂಪತಿಯ ಪುತ್ರರಾಗಿದ್ದು, ಕೊಕ್ಕಡದ ಪೌರೋಹಿತ್ಯ ಪರಂಪರೆಯಿಂದ ಬಂದಿದ್ದಾರೆ. ಅವರು 6 ತಿಂಗಳ ಹಿಂದೆ ಪ್ರಧಾನ ಅರ್ಚಕರಾಗಿ ಸೇವೆಗೆ ಸೇರಿದ್ದರು. ಈಗ, ಇವರಿಗೆ ಮಹಾ ಪ್ರಧಾನ ಅರ್ಚಕ (ಪೆರಿಯ ನಂಬಿ) ಹುದ್ದೆ ಲಭಿಸಿದ್ದು, ಇದು ಅಪರೂಪದ ಗೌರವ.

*ಪರಂಪರೆ ಮತ್ತು ವಿಶೇಷತೆ:*

ಈ ಹುದ್ದೆ ಅಕ್ಕರೆ ದೇಶಿ (ಕೊಕ್ಕಡದ 8 ಮನೆತನ) ಹಾಗೂ ಇಕ್ಕರೆ ದೇಶಿ (ಕೇರಳದ 4 ಮನೆತನ)ಗಳಿಗೆ ಸೇರಿದ ಅರ್ಚಕರಿಗೇ ದೊರೆಯುವ ವ್ಯವಸ್ಥೆ ಇದೆ. ಈ ಹಿಂದಿನ ಮಹಾ ಪ್ರಧಾನ ಅರ್ಚಕರಾಗಿ ರಾಜೇಂದ್ರ ಅರೆಮನೆತ್ತಾಯ (ಅಕ್ಕರೆ ದೇಶಿ) ಅವರು 1.4 ವರ್ಷ ಸೇವೆ ಸಲ್ಲಿಸಿದ್ದರು.

ಈ ಹುದ್ದೆಯನ್ನು ಸ್ವೀಕರಿಸಿದ ಬಳಿಕ, ಸತ್ಯನಾರಾಯಣ ತೋಡ್ತಿಲ್ಲಾಯರು ಗೃಹಸ್ಥಾಶ್ರಮ ತೊರೆದು ಸನ್ಯಾಸ ಧರ್ಮ ಅನುಸರಿಸಬೇಕು. ಜೊತೆಗೆ, ದೇವಾಲಯದ ಎಲ್ಲಾ ಉತ್ಸವಗಳಿಗೆ ಅವರೇ ಪ್ರಧಾನ ಪೌರೋಹಿತರಾಗಿರುತ್ತಾರೆ.

ಸತ್ಯನಾರಾಯಣ ತೋಡ್ತಿಲ್ಲಾಯರು ಜನವರಿ 30ರಂದು ಅಧಿಕೃತವಾಗಿ ಹುದ್ದೆ ಸ್ವೀಕರಿಸಲಿದ್ದಾರೆ. ಈ ಮಹತ್ತರ ಸಾಧನೆಗಾಗಿ ಅವರ ಕುಟುಂಬ, ಊರಿನವರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ