ಕೋಟಿ ಒಡೆಯ ಮಲೆ ಮಹದ್ವೇಶರ!

ಕೋಟಿ ಒಡೆಯ ಮಲೆ ಮಹದ್ವೇಶರ!
ಚಾಮರಾಜನಗರ: ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಪ್ರಸಿದ್ಧ ಪ್ರಾಚೀನ,ಪವಿತ್ರ ದೇವಾಲಯ ಹಾಗೂ ಯಾತ್ರಸ್ಥಳವಾದ ಮಲೆ ಮಹದೇಶ್ವರ ಮತ್ತೆ ಕೋಟಿ ಒಡೆಯನಾಗಿದ್ದಾನೆ. ಇದೀಗ ಇಲ್ಲಿ ಹುಂಡಿ ಕಾಣಿಕೆ ಎಣಿಕೆ ನಡೆಸಲಾಯಿತು,1.94 ರೂ. ಕಾಣಿಕೆ ಸಂಗ್ರಹವಾಗಿದೆ. ಕಳೆದ 28 ದಿನಗಳ ಅವಧಿಯಲ್ಲಿ 1.94 ಕೋಟಿ ರೂ. ಭಕ್ತರಿಂದ ಕಾಣಿಕೆ ರೂಪದಲ್ಲಿ ಹರಿದು ಬಂದಿದೆ.
ನಗದು ಹಣದ ಜೊತೆಗೆ 63 ಗ್ರಾಂ ಚಿನ್ನ ಮತ್ತು ಒಂದು ಕೆಜಿ 510 ಗ್ರಾಂ ಬೆಳ್ಳಿಯ ಆಭರಣಗಳನ್ನು ಸಹ ಭಕ್ತರು ಮಲೆ ಮಹದೇಶ್ವರನಿಗೆ ಸಮರ್ಪಿಸಿದ್ದಾರೆ, ಮತ್ತು 11 ವಿದೇಶಿ ನೋಟು, 2000 ಮುಖಬೆಲೆಯ ನೋಟುಗಳನ್ನು ಕೂಡ ಭಕ್ತರು ಸಮರ್ಪಿಸಿದ್ದಾರೆ.