ಇದಕ್ಕೆ ಯಾರು ಕಾರಣ?
ದಕ್ಷಿಣ ಕನ್ನಡ:ಕೆಲವು ಕೆಲಸಗಳನ್ನು ಜನ ಸಾಮಾನ್ಯರು ಮಾಡಿದರೆ ಅಪರಾಧವು ಅಪಾಯವು ಆಗಬಹುದಂತ್ತ ಕೆಲಸವೇ ವಿದ್ಯುತ್ಗೆ ಸಂಬಂಧ ಪಟ್ಟ ಕೆಲಸಗಳು.. ಅದಕ್ಕೆಂದೇ ಅದರದೇ ಆದ ಕೆಲಸಗಾರಿರುತ್ತಾರೆ.. ಈಗ ಮಳೆಗಾಲ ಪ್ರಾರಂಭವಾಗಿದೆ.. ಗಾಳಿ ಮಳೆಗೆ ಮರ ಉರಳಿ ಕರೆಂಟ್ ಕಂಬಗಳು ತುಂಡಾಗಿ ಬೀಳಬಹುದು.. ತಂತಿ ಕಡಿದು ಬಿದ್ದಿರ ಬಹುದು ಇಂತಹ ಅನೇಕ ಘಟನೆಗಳು ಆಗ ಬಹುದು..
ಆಗ ನಾವು ಫವರ್ ಮ್ಯಾನ್ಗಳಿಗೆ ಅಥವ ಜೆ.ಇ ಅವರಿಗೆ ವಿಷಯ ತಿಳಿಸಬೇಕು.. ತಿಳಿಸದೆ ಇದ್ದರೆ ನಮ್ಮದೇ ಬೇಜವಾಬ್ದಾರಿ ಆಗಿಬಿಡುತ್ತದೆ… ಈ ಇಲಾಖೆಯವರೇ ಬೇಜಾವಾಬ್ದಾರಿಯಿಂದ ನಡದು ಕೊಂಡರೆ…
ಯಾರು ಕಾರಣ..?
ಈಶ್ವರಮಂಗಲದ ನೆಟ್ಟನಿಗೆ ಮೂಡ್ನೂರು ಗ್ರಾ.ಪಂಚಾಯತಿನ ಎದುರು ಭಾಗದಲ್ಲಿ ಇರುವ ಈ ಕಂಬಗಳನ್ನು ನೋಡಿ.. ಸುತ್ತಲೂ ಪೊದೆ ತುಂಬಿ ಕಾಡು ಬಳ್ಳಿಗಳು ಕರೆಂಟ್ ತಂತಿಗಳಿಗೆ ಸುತ್ತಿಕೊಂಡಿತ್ತು.. ಅದನ್ನು ಸ್ವಲ್ಪ ತೆಗೆದು ಇನ್ನೂ ಸ್ವಲ್ಪ ಹಾಗೆ ಉಳಿಸಿ ಹೋಗಿದ್ದಾರೆ.. ಮಳೆಗಾಲದಲ್ಲಿ ನೀರಿನಲ್ಲೂ ಕರೆಂಟ್ ಪಾಸಾಗುವ ಸಾಧ್ಯತೆ ಇರುವಾಗ ಈ ತಂತಿಗಳಿಂದ ಹರಿಯುವ ಕರೆಂಟ್ ಹಸಿ ಬಳ್ಳಿಗಳ ಮೂಲಕ ನೆಲಕ್ಕೆ ಬರಹುದೇ..? ಎಂಬ ಪ್ರಶ್ನೆ.. ಎಲ್ಲಿಯಾದರು ಬಂದರೆ. ಅಲ್ಲಿ ನಡೆದಾಡೊರಿಗೆ ಅಪಾಯ ಆಗ ಬಹುದೇ..? ಪೊದೆ ಬಳ್ಳಿಗಳನ್ನು ಕಡಿದು ಸ್ವಚ್ಛ ಮಾಡುವಾಗ ಈ ನೇತಾಡಿ ಕೊಂಡಿರೊದನ್ನು ಕಡಿದು ತೆಗೆದಿದ್ದರೆ. ಉತ್ತಮ ಕೆಲಸವಾಗುತಿತ್ತು.. ಕೆಲವು ಸಲ ನಮ್ಮ ಅಸಡ್ಡೆ ಉದಾಸಿನಗಳಿಂದ ಎಷ್ಟೋ ಅನಾಹುತಗಳು ನಡೆಯುತ್ತವೆ .. ಅನಾಹುತ ನಡೆದ ಮೇಲೆ ಚಿಂತಿಸುವುದು ಕ್ಕಿಂತ. ಅನಾಹುತ ಬರದಂತೆ ನಡೆದು ಕೊಳ್ಳುವುದು ಉತ್ತಮವಲ್ಲವೇ..? ದೊಡ್ಡ ಹಡಗನ್ನು ಮುಳುಗಿಸಲು ಸಣ್ಣ ತೂತು ಸಾಕು. ಹಾಗೇನೆ ಸಣ್ಣ ತಪ್ಪುಗಳಿಂದ ಮುಂದೆ ದೊಡ್ಡ ಅನಾಹುತವು ಆಗಬಹುದು… ಅದಕ್ಕಾಗಿ ಇದಕ್ಕೆ ಸಂಬಧಪಟ್ಟವರು ಈ ತಂತಿಗಳಲ್ಲಿ ಜೋತಾಡುತ್ತಿರುವ ಪೊದೆ ಬಲ್ಲಿಗಳನ್ನು ತೆಗಿಸಿ ಅಪಾಯು ಬಾರದಂತೆ ನೋಡುಕೊಳ್ಳುವಿರಿ ಎಂದು ಗೋಲ್ಡ್ ನ್ಯೂಸ್ ಫ್ಯಾಕ್ಟರಿಯ ಆಶಯ..