• 8 ಸೆಪ್ಟೆಂಬರ್ 2024

ನುಡಿದಂತೆ ನಡೆಯುವ,ಇಲ್ಲೊಬ್ಬ ದಕ್ಷ ಯುವ ರಾಜಕಾರಣಿ!

 ನುಡಿದಂತೆ ನಡೆಯುವ,ಇಲ್ಲೊಬ್ಬ ದಕ್ಷ ಯುವ ರಾಜಕಾರಣಿ!
Digiqole Ad

ನುಡಿದಂತೆ ನಡೆಯುವ ಇಲ್ಲೊಬ್ಬ ದಕ್ಷ ಯುವರಾಜಕಾರಣಿ!

ಈ ಸುದ್ದಿ ಪ್ರಚಾರಕ್ಕಾಗಿ ಅಲ್ಲ ,ಪ್ರೇರಣೆ ಗಾಗಿ, ಸಾಮಾನ್ಯವಾಗಿ ವೋಟು ಕೇಳಲು ಬಂದು ,ಗೆದ್ದ ಮೇಲೆ ಸತಾಯಿಸುವ ರಾಜಕಾರಣಿಗಳನ್ನು ಪ್ರಜ್ಞಾವಂತ ಮತದಾರರು ಶಪಿಸುವುದು ಇದ್ದೇ ಇದೆ,ಗೆದ್ದ ಮೇಲೆ ಬಂದ ದಾರಿಯನ್ನೇ ಮರೆಯುವ ರಾಜ ಕಾರಣಿಗಳೇಶ್ಟು,ಇವತ್ತಿನ ವರೆಗೂ ಮಾತು ಕೊಟ್ಟು, ಭರವಸೆ ನೀಡಿ, ಸರಿಯಾದ ರೀತಿಯಲ್ಲಿ ಸೌಲಭ್ಯ ಒದಗಿಸಿದ ಉದಾಹರಣೆ ಇದೆಯಾ ,ಖಂಡಿತ ಇಲ್ಲ,

ಆದರೆ ಅದಕ್ಕೆ ತದ್ವಿರುದ್ಧವಾಗಿ ಇಲ್ಲೊಬ್ಬ ನುಡಿದಂತೆ ನಡೆಯುವ ರಾಜಕಾರಣಿ ಇದ್ದಾರೆ ಎಂದರೆ ನಂಬುವಿರಾ?

ಹೌದು,

ಈಶ್ವರಮಂಗಲ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಹಾಸ ಈಶ್ವರಮಂಗಲ ಇವರು ತನ್ನ ಗ್ರಾಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವರ್ಗದ ಜನರಿಗೂ ಹೆಚ್ಚು ಕಮ್ಮಿ 200 ಕ್ಕಿಂತಲೂ ಅಧಿಕ ಜನರಿಗೆ ಪಿಂಚಣಿ ಸೌಲಭ್ಯ ,ಗ್ಯಾಸ್ ಕನೆಕ್ಷನ್,ಮುಂತಾದ ಸರಕಾರಿ ಸೌಲಭ್ಯಗಳನ್ನು ಯಾವುದೇ ರೀತಿಯ ಪ್ರತಿಫಲಾಪೇಕ್ಷೆ ಬಯಸದೆ ಮಾಡಿಕೊಟ್ಟಿದ್ದಾರೆ ಎನ್ನುವುದು ಗ್ರಾಮಸ್ಥರ ಸಮರ್ಥ ನಿಲುವು.

ಇನ್ನು ಈ ಯುವ ರಾಜಕಾರಣಿಯ ಬಗ್ಗೆ ಹೇಳುತ್ತಾ ಹೋದರೆ, ಇವರು ದಾಮೋದರ ಪಾಟಾಳಿಯವರ ಇಬ್ಬರು ಪುತ್ರರಲ್ಲಿ ಮೊದಲಿಗನು ಹಾಗೆಯೇ ವೃತ್ತಿಯಲ್ಲಿ ವಕೀಲ,Chandrahasa ishwaramangala ಗ್ರಾಮಸ್ಥರ ಸೇವೆಯಲ್ಲಿಯೆ ಸದಾ ತನ್ನನ್ನು ತಾನು ತೊಡಗಿಕೊಂಡಿರುವ ಇವರು,

ನನ್ನ ಗ್ರಾಮದ ಜನರು ಸರಕಾರದ ಯಾವುದೇ ರೀತಿಯ ಸವಲತ್ತುಗಳಿಂದ ವಂಚಿತರಾಗಿರಬಾರದು ,ಎಲ್ಲಾ ರೀತಿಯ ಸವಲತ್ತುಗಳನ್ನು ಆಯಾ ಕಾಲಕ್ಕೆ ಒದಗಿಸುತ್ತಾ ಬಂದಿದ್ದೇನೆ,ಕೆಲವು ಜನರಿಗೆ ಕೆಲವು ಸವಲತ್ತುಗಳು ಇರುವುದು ಗೊತ್ತಿರುವುದಿಲ್ಲ ಹಾಗಾಗಿ ಅವಕಾಶ ವಂಚಿತರಾಗಬಾರದು,ಮತ ಕೇಳಲು ಬರುವಾಗ ಮಾತ್ರ ರಾಜಕಾರಣಿ ಅಲ್ಲ ,ಜನರ ಆಶೋತ್ತರಗಳಿಗೆ ಸ್ಪಂದಿಸುವ ಗುಣವೆ ನಿಜವಾದ ರಾಜಕಾರಣ ಎನ್ನುವುದೇ, ಈ ಮಹಾತ್ಮನ ಮಾತುಗಳು.

ಇಂತಹ ಯುವ ರಾಜಕಾರಣಿಗಳು ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲಿ ಇದ್ದರೆ ನನ್ನ ದೇಶ ರಾಮ ರಾಜ್ಯವಾಗುದರಲ್ಲಿ ಸಂಶಯವಿಲ್ಲ, ಎಂಬುದೇ ನಮ್ಮ ಆಶಯ..

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ