• 8 ಸೆಪ್ಟೆಂಬರ್ 2024

ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ; ಪದ್ಮನಾಭ ಹರ್ಲಡ್ಕರಿಂದ ಉಚಿತ ಆಟೋ ಸೇವೆ

 ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ; ಪದ್ಮನಾಭ ಹರ್ಲಡ್ಕರಿಂದ ಉಚಿತ ಆಟೋ ಸೇವೆ
Digiqole Ad

ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ; ಪದ್ಮನಾಭ ಹರ್ಲಡ್ಕರಿಂದ ಉಚಿತ ಆಟೋ ಸೇವೆ

ಸುಳ್ಯ, ಜ.22: ಅಯೋಧ್ಯೆ ಶ್ರೀ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ಹಿನ್ನಲೆಯಲ್ಲಿ ದೇಶಾದ್ಯಂತ ಭಕ್ತರು ವಿವಿಧ ರೀತಿಯಲ್ಲಿ ಆಚರಿಸುತ್ತಾ ಸಂಭ್ರಮಿಸುತ್ತಿರುವಾಗ, ಸುಳ್ಯದ ಆಟೋ ಚಾಲಕರೊಬ್ಬರು ದಿನವಿಡೀ ಉಚಿತ ಆಟೋ ಸೇವೆ ಒದಗಿಸಿ ಗಮನ ಸೆಳೆದಿದ್ದಾರೆ.

ಸುಳ್ಯ ಮುಖ್ಯ ಪೇಟೆಯಲ್ಲಿ ಆಟೋ ಚಾಲಾಯಿಸುತ್ತಿರುವ, ಪದ್ಮನಾಭ ಹರ್ಲಡ್ಕ ಅವರು ಶ್ರೀ ರಾಮನ ಪ್ರತಿಷ್ಠಾಪನಾ ದಿನದ ಪ್ರಯುಕ್ತ ಸುಳ್ಯ ತಾಲೂಕಿನಾದ್ಯಂತ ಉಚಿತ ಆಟೋ ಸೇವೆ ನಡೆಸುತ್ತಿದ್ದಾರೆ. ತನ್ನ ಆಟೋ ರಿಕ್ಷಾದ ಹಿಂಬದಿಯಲ್ಲಿ ‘ ಆಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ, ಉಚಿತ ಪ್ರಯಾಣ’ ಎಂಬ ಬ್ಯಾನರ್ ಅಳವಡಿಸಿದ್ದಾರೆ.

ಶ್ರೀ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ವಿಶೇಷ ದಿನವನ್ನು ಪರಿಗಣಿಸಿ, ದಿನಪೂರ್ತಿ ಉಚಿತ ಆಟೋ ಸೇವೆ ಒದಗಿಸುವ ಮೂಲಕ ಸಂಪನ್ನಗೊಳಿಸುವೆ ಎನ್ನುತ್ತಾರೆ ಆಟೋ ಚಾಲಕರೂ, ಹೋಟೆಲ್ ಮಾಲಕರೂ ಆಗಿರುವ ಪದ್ಮನಾಭ ಹರ್ಲಡ್ಕ.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ