• 8 ಸೆಪ್ಟೆಂಬರ್ 2024

”ಬೆರಿಯೆ ಬರ್ಪೆರ್” ನೂತನ ತುಳು ಹಾಸ್ಯಮಯ ನಾಟಕ ಸದ್ಯದಲ್ಲೇ ನಿಮ್ಮ ಮುಂದೆ!

 ”ಬೆರಿಯೆ ಬರ್ಪೆರ್” ನೂತನ ತುಳು ಹಾಸ್ಯಮಯ ನಾಟಕ ಸದ್ಯದಲ್ಲೇ ನಿಮ್ಮ ಮುಂದೆ!
Digiqole Ad

”ಬೆರಿಯೆ ಬರ್ಪೆರ್” ನೂತನ ತುಳು ಹಾಸ್ಯಮಯ ನಾಟಕ ಸದ್ಯದಲ್ಲೇ ನಿಮ್ಮ ಮುಂದೆ!

ಸತತ 13 ವರ್ಷಗಳಿಂದ ರಂಗಭೂಮಿಗೆ ಸಾಮಾಜಿಕ ,ಪೌರಾಣಿಕ,ಜನಪದ ನಾಟಕಗಳನ್ನು ಒಂದೇ ತಂಡದ ಮೂಲಕ ನೀಡುತ್ತಾ ಬಂದಿರುವ ಶ್ರೀ ಪ್ರಾಪ್ತಿ ಕಲಾವಿದೆರ್ ಕುಡ್ಲ ಇವರ ನೂತನ ಹಾಸ್ಯಮಯ ತುಳು ಸಾಮಾಜಿಕ ನಾಟಕ “ಬೆರಿಯೆ ಬರ್ಪೆರ್” ಇದರ ಮುಹೂರ್ತ ಇಂದು ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನೆರವೇರಿತು . ಕಲಾರತ್ನ ಮುಕೇಶ್ ಶೆಟ್ಟಿ ಆಕಾಶ್ ಭವನ ರಚನೆಯಲ್ಲಿ ಕಲಾಸವ್ಯಸಾಚಿ/ ರಂಗೊದ ಬಿರ್ಸೆ ಲ.ಪ್ರಶಾಂತ್ ಸಿ.ಕೆ ದಕ್ಷ ನಿರ್ದೇಶನ ಈ ನಾಟಕಕ್ಕೆಇದ್ದು , ಕುಂದೇಶ್ವರ ಪ್ರತಿಷ್ಠಾನದ ಅಧ್ಯಕ್ಷರರು ಹಿರಿಯ ಪತ್ರಕರ್ತರಾದ ಶ್ರೀ ಜಿತೇಂದ್ರ ಕುಂದೇಶ್ವರ, ರಂಗೊದ ಬಿರ್ಸೆ ಜೆ.ಕೆ ರೈ ಪಿಲಾರ್, ಖ್ಯಾತ ನೃತ್ಯಪಟು ನಿರ್ದೇಶಕ ಸುಹಾನ್ ಕುಲಾಯಿ, ಶ್ರೀ ಸಾಯಿ ಲೈಟ್ಸ್ ಅಂಡ್ ಸೌಂಡ್ಸ್ನ ಮಾಲಕರಾದ ಶ್ರೀ ಕಾಂತ್ ಮಾಡೂರು , ಸಾಹಿತಿ ಕಲಾವಿದರಾದ ವಿಜೇಶ್ ಮಂಗಳಾದೇವಿ, ಕಾಮಿಡಿರಾಜೆ ಖ್ಯಾತಿಯ ಯುವ ಹಾಸ್ಯಕಲಾವಿದ ವಿನ್ಯಾಸ ವಾಮಂಜೂರು ಉಪಸ್ಥಿತರಿದ್ದರು. ಪ್ರಸ್ತುತ ಸಮಾಜದ ಸಾಮಾಜಿಕ ವ್ಯವಸ್ಥೆಯ ಕಥಾವಸ್ತುವನ್ನು ಹೊಂದಿದ್ದು ಹಾಸ್ಯದೊಂದಿಗೆ ಪ್ರಸ್ತುತಪಡಿಸುವ ವಿಭಿನ್ನ ಪ್ರಯತ್ನ ಇದಾಗಿದ್ದು ಅತಿಶೀಘ್ರದಲ್ಲಿ ಪ್ರದರ್ಶನ ಕಾಣಲಿದೆಯೆಂದು ನಿರ್ದೇಶಕರು ತಿಳಿಸಿದರು

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ