• 8 ಸೆಪ್ಟೆಂಬರ್ 2024

ವಿಭಿನ್ನ ಪ್ರಯತ್ನದ ರವಿಕೆ ಪ್ರಸಂಗ ಈ ವಾರ ತೆರೆಗೆ

 ವಿಭಿನ್ನ ಪ್ರಯತ್ನದ ರವಿಕೆ ಪ್ರಸಂಗ ಈ ವಾರ ತೆರೆಗೆ
Digiqole Ad

ವಿಭಿನ್ನ ಪ್ರಯತ್ನದ ರವಿಕೆ ಪ್ರಸಂಗ ಈ ವಾರ ತೆರೆಗೆ

ಸಿನೆಮಾಸ್ಯಾಂಡಲ್ ವುಡ್ ವಿಭಿನ್ನ ಪ್ರಯತ್ನದ ಕಥಾಹಂದರದ ರವಿಕೆ ಪ್ರಸಂಗ ಚಿತ್ರ ಮುಂದಿನವಾರ ತೆರೆಗೆ ಬರಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರ ಪ್ರಚಾರದ ಕಾರ್ಯ ಬಿರುಸುಗೊಂಡಿದೆ. ರವಿಕೆ ಪ್ರಸಂಗ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಸುಳ್ಯ ಮೂಲದ ನಿವೃತ್ತ ಪ್ರಾಂಶುಪಾಲರಾಗಿರುವ ಮತ್ತು ಪ್ರಸ್ತುತ ಸುಳ್ಯ ನಗರ ಪಂಚಾಯತ್ ನ ವಿಪಕ್ಷ ನಾಯಕರು ಆಗಿರುವ ಬಾಲಕೃಷ್ಣ ಭಟ್ ಕೊಡಂಕೇರಿ ಇವರ ಪುತ್ರ ರಾಗಿರುವ ನಿರ್ದೇಶಕ ಸಂತೋಷ್ ಕೊಡೆಂಕೇರಿ ಮತ್ತು ಸೊಸೆ ಕಥೆಗಾರ್ತಿ ಮತ್ತು ಸಂಭಾಷಣಾಗಾರ್ತಿ ಪಾವನ ಸಂತೋಷ್, ಚಿತ್ರದ ನಾಯಕಿ ಗೀತಾಭಾರತಿ ಭಟ್, ಪದ್ಮಜಾರಾವ್, ಅಭಿನಯದ ಚಲನಚಿತ್ರವು ಈ ತಿಂಗಳ ಫೆಬ್ರವರಿ 16ರಂದು ಬಿಡುಗಡೆಯಾಗಲಿದೆ.

ರಾಜ್ಯದ ಅತ್ಯತ್ತಮ ಟೈಲರ್ ಗುರುತಿಸುವ ಸ್ಪರ್ದೆಗೆ ಚಾಲನೆ ನೀಡಲಾಯಿತು. ಉತ್ತಮ ಟ್ರೈಲರ್ ಗುರುತಿಸಿ ವಿಶೇಷ ಬಹುಮಾನ ನೀಡುವ ಯೋಜನೆ ಸಂತೋಷ್ ಅವರದು.

ನಿರ್ದೇಶಕ ಸಂತೋಷ್ ಕೋಂಡಕೇರಿ ಮಾತನಾಡಿ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದೆ. ಚಿತ್ರವೂ ವಿಶೇಷ ಕಥಾಹಂದರ ಹೊಂದಿದ್ದು, ಒಂದು ರವಿಕೆಗೆ ಹುಕ್ ಹೇಗೆ ಮುಖ್ಯವೋ ಹಾಗೇ ಜೀವನದ ಕೆಲವು ಸಂಘರ್ಷಗಳು, ಸಂಬಂಧಗಳು ಅತೀ ಮುಖ್ಯವಾಗುತ್ತವೆ. ರವಿಕೆಯ ಒಂದು ಸಣ್ಣ ವಿಚಾರ ನ್ಯಾಷನಲ್ ಇಶ್ಯೂ ಆಗುವತ್ತ ಹೋಗುವ ಮತ್ತು ಜೀವನದ ಮೌಲ್ಯಗಳ ಅರ್ಥವನ್ನು ರವಿಕೆ ಪ್ರಸಂಗ ಚಿತ್ರದ ಮೂಲಕ ನಿಮ್ಮ ಮುಂದೆ ಇಡಲಿದೆ ಎಂದಿದ್ದಾರೆ‌.

ಸ್ಪರ್ದೆ ವಿಜೇತರಾದವರಿಗೆ, ಹೊಲಿಗೆ ಯಂತ್ರ, ಮೊಬೈಲ್ ಫೋನ್ ಹಾಗೂ ಸಿನೇಮಾ ಟಿಕೆಟ್ ನೀಡಲಾಗುವುದು.

ರಾಜ್ಯದ್ಯಾಂತ 7ಸಾವಿರಕ್ಕೂ ಹೆಚ್ಚಿನ ಆಟೋ ಪಬ್ಲಿಸಿಟಿ ಮಾಡುತ್ತಿರುವ ರವಿಕೆಪ್ರಸಂಗ ಚಿತ್ರತಂಡ ಆಟೋ ಡ್ರೈವರ್ ಗಳೊಂದಿಗೆ ಒಂದಷ್ಟು ಸಿನಿಮಾದ ಬಗ್ಗೆ ಚರ್ಚಿಸಿ ಗೀತಾಭಾರತಿಭಟ್ ಅವರು ಅನೇಕ ಆಟೋಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ