ಅಮೈ ಮಾಣಿಬೆಟ್ಟು ಶ್ರೀ ಧರ್ಮದೈವ ರುದ್ರಚಾಮುಂಡಿ ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ
ಅಮೈ ಮಾಣಿಬೆಟ್ಟು ಶ್ರೀ ಧರ್ಮದೈವ ರುದ್ರಚಾಮುಂಡಿ ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವ
ತಾರೀಕು 09-03-2024ನೇ ಶನಿವಾರ ಮತ್ತು ತಾರೀಕು 10-03-2024ನೇ ಆದಿತ್ಯವಾರದಂದು ಉಬರಡ್ಕ ಮಿತ್ತೂರು ಗ್ರಾಮದ ಅಮೈ-ಮಾಣಿಬೆಟ್ಟು ಎಂಬಲ್ಲಿ ನಿರ್ಮಿಸಿದ ದೈವಸ್ಥಾನದಲ್ಲಿ ಶ್ರೀ ಧರ್ಮದೈವ ರುದ್ರಚಾಮುಂಡಿ ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ನೇಮೋತ್ಸವವು ನಡೆಯಲಿದೆ ತಾರೀಕು 09-03-2024ನೇ ಶನಿವಾರ ಪೂರ್ವಾಹ್ನ ಗಂಟೆ 8.00ಕ್ಕೆ ಶ್ರೀ ಗಣಪತಿ ಹೋಮ ಮತ್ತು ಮುಡಿಪು ಪೂಜೆ, ಪ್ರಸಾದ ವಿತರಣೆಯ ವಿತರಣೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ .
ಅಪರಾಹ್ನ ಗಂಟೆ 7.00ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು,ರಾತ್ರಿ ಗಂಟೆ 8.00ರಿಂದ ವರ್ಣಾರ ಪಂಜುರ್ಲಿ,ಕುಪ್ಪೆ ಪಂಜುರ್ಲಿ ದೈವಗಳಿಗೆ ನೇಮೋತ್ಸವ ನಡೆಯಲಿದೆ .ತಾರೀಕು 10-03-2024ನೇ ಆದಿತ್ಯವಾರಬೆಳಿಗ್ಗೆ ಗಂಟೆ 9.00ಕ್ಕೆ ಶ್ರೀ ಧರ್ಮದೈವ ಮತ್ತು ರುದ್ರಚಾಮುಂಡಿ ನೇಮೋತ್ಸವ ನಡೆಯುವುದು ನಂತರ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ .
ರಾತ್ರಿ ಗಂಟೆ 8.00ಕ್ಕೆ ಗುಳಿಗ ಮತ್ತು ಪಾಷಾಣಮೂರ್ತಿ ದೈವಗಳು ನಡೆಯಲಿದೆ. ನಂತರ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಭಕ್ತಭಿಮಾನಿಗಳೆಲ್ಲರೂ ಭಾಗವಹಿಸಿ ಶ್ರೀ ದೈವಗಳ ಸಿರಿಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗ ಬೇಕೆಂದು ಅಮೈ-ಮಾಣಿಬೆಟ್ಟು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ