• 8 ಸೆಪ್ಟೆಂಬರ್ 2024

ಖಾಲಿ ಜಾಗದಲ್ಲಿ ಕಸವಿಟ್ಟಿದ್ದಕ್ಕೆ ಕಿರುತೆರೆ ನಟನ ಮೇಲೆ ಹಲ್ಲೆ

 ಖಾಲಿ ಜಾಗದಲ್ಲಿ ಕಸವಿಟ್ಟಿದ್ದಕ್ಕೆ ಕಿರುತೆರೆ ನಟನ ಮೇಲೆ ಹಲ್ಲೆ
Digiqole Ad

ಖಾಲಿ ಜಾಗದಲ್ಲಿ ಕಸವಿಟ್ಟಿದ್ದಕ್ಕೆ ಕಿರುತೆರೆ ನಟನ ಮೇಲೆ ಹಲ್ಲೆ

 

ಬೆಂಗಳೂರು: ಶೂಟಿಂಗ್ ವೇಳೆ ಖಾಲಿ ಜಾಗದಲ್ಲಿ ಕಸವಿಟ್ಟು ಹೋಗಿದ್ದಕ್ಕೆ ನಟನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆಯಿತು.

ಅನ್ನಪೂರ್ಣೇಶ್ವರಿ ನಗರದ ಡಿ ಗ್ರೂಪ್‌ ಲೇಔಟ್ ನ ಕಿರುತೆರೆ ನಟ ಬಾಳಪ್ಪ ಎಂಬವರ ಮೇಲೆ ಪಕ್ಕದ ಮನೆಯ ಚರಿತ್ ಹಲ್ಲೆ ನಡೆಸಿದ್ದಾನೆ.

ಶೂಟಿಂಗ್ ಹೋಗುವಾಗ ಖಾಲಿ ಜಾಗದಲ್ಲಿ ಕಸವಿಟ್ಟಿದ್ದ ಎಂದು ಹೇಳಲಾಗುತ್ತಿದೆ. ಕಿರುತೆರೆ ನಟನನ್ನು ಚರಿತ್ ಪ್ರಶ್ನಿಸಿದ್ದಾನೆ. ನಂತರ ಇಬ್ಬರ ನಡುವೆ ತೀವ್ರ ವಾಗ್ವಾದ ಶುರುವಾಗಿ ಗಲಾಟೆ ನಡೆದಿದೆ.  ಗಲಾಟೆ ವಿಕೋಪಕ್ಕೆ ಹೋಗಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ಗೈದಿರುವುದಾಗಿ ಆರೋಪ ಕೇಳಿ ಬಂದಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Digiqole Ad

ಪ್ರವೀಣ ಕಾಸರಗೋಡು

https://goldfactorynews.com

ಈ ಸುದ್ದಿಗಳನ್ನೂ ಓದಿ