• 8 ಸೆಪ್ಟೆಂಬರ್ 2024

ಉಗ್ರ ಹೋರಾಟಕ್ಕೆ ಕಲಾವಿದರ ಸಂಘ ತೀರ್ಮಾನ

 ಉಗ್ರ ಹೋರಾಟಕ್ಕೆ ಕಲಾವಿದರ ಸಂಘ ತೀರ್ಮಾನ
Digiqole Ad

ಉಗ್ರ ಹೋರಾಟಕ್ಕೆ ಕಲಾವಿದರ ಸಂಘ ತೀರ್ಮಾನ

ದೈವ-ದೇವರ ನಿಂದನೆ ಮಾಡುತ್ತಿದ್ದಾರೆ! ಎಂದು ಆರೋಪಿಸಿ. ರಂಗಭೂಮಿ, ಯಕ್ಷಗಾನ ಮತ್ತು ಸಿನಿಮಾ ಕಲಾವಿದರ ಮೇಲೆ ಹೆದರಿಸುವ ಕೆಲಸ ನಡೆಯುತ್ತಿದೆ ಎಂದು. ಕಲಾವಿದರು ಸೋಮವಾರ ನಡೆಸಿದ ಸಭೆಯಲ್ಲಿ ಮತ್ತಷ್ಟು ಉಗ್ರ ಹೋರಾಟ ಮಾಡುವುದಾಗಿ ಕಲಾವಿದರ ಸಂಘದ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ. ವಿಜಯಕುಮಾ‌ರ್ ಕೊಡಿಯಾಲ್‌ಬೈಲ್ ತುಳು ರಂಗಭೂಮಿಯ ಖ್ಯಾತ ನಟ ನಿರ್ದೇಶಕರಾದ ಕೊಡಿಯಾಲ್ ಬೈಲ್ಮತ್ತು ದೇವದಾಸ್ ಕಾಪಿಕಾಡ್, ಖ್ಯಾತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಮತ್ತಿತರರ ನೇತೃತ್ವದಲ್ಲಿ .ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದವರೆಲ್ಲರೂ, ದೌರ್ಜನ್ಯವನ್ನು ಖಂಡಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ ಎಂದರು.

ಈ ಸುದ್ದಿ ಓದಿದ್ದೀರಾ?:ಇಂದಿನಿಂದ ಒನ್‌ಪ್ಲಸ್ 11R 5G ಸ್ಮಾರ್ಟ್ ಫೋನ್ ಲಭ್ಯ

ಸಭೆಯ ನಂತರ ಮಾಧ್ಯಮದವರ ಜೊತೆ ಮಾತನಾಡಿದ ತುಳು ರಂಗಭೂಮಿ ನಿರ್ದೇಶಕ ವಿಜಯಕುಮಾ‌ರ್ ಕೊಡಿಯಾಲ್‌ಬೈಲ್ “ಕಲಾವಿದರ ಮೇಲೆ ಆಗುತ್ತಿರುವ! ದಬ್ಬಾಳಿಕೆ ವಿರುದ್ಧ ಈಗಾಗಲೇ ಪ್ರತಿರೋಧ ಆರಂಭವಾಗಿದೆ. ಸಭೆಯು ಕಲಾವಿದರಿಗೆ ಇನ್ನಷ್ಟು ಶಕ್ತಿ ತುಂಬಿದೆ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ” ಅವರು ತಿಳಿಸಿದರು.

ಮತ್ತೊರ್ವ ತುಳು ರಂಗಭೂಮಿಯ ಖ್ಯಾತ ನಟ ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ.ಕಲೆ ಮತ್ತು ಕಲಾವಿದರಿಂದ ನಾಡಿಗೆ ಗೌರವ ಬಂದಿದೆ . ದೈವ ಮತ್ತು ದೇವರನ್ನು ಅವಹೇಳನ ಮಾಡುತ್ತಾರೆ! ಎಂಬ ಆರೋಪದ ಹಿನ್ನೆಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ . ಯಾವುದೇ ವಿಚಾರದಲ್ಲಿ ಮುಕ್ತವಾಗಿ ಮನಸು ಬೆಚ್ಚಿ ಮಾತನಾಡಲು ಅವಕಾಶವೇ ಇಲ್ಲದಂತಾಗಿದೆ. ಹೀಗಾಗಿ ಹೋರಾಟ ಮಾಡಲೇಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಅವರು ತಿಳಿಸಿದರು. ಕಲಾವಿದರ ಕಷ್ಟ ಕೇಳುವವರು ಯಾರೂ ಇಲ್ಲದoತಾಗಿದೆ. ತುಳುನಾಡಿನ ಕಲೆ, ಸಂಸ್ಕೃತಿ ಉಳಿಸುವಲ್ಲಿ ಕಲಾವಿದರ ಬಹು ಮುಖ್ಯ ಪಾತ್ರವಿದೆ . ಕಲಾವಿದರು ಕೂಡ ದೇವರು-ದೈವವನ್ನು ಆರಾಧಿಸಿಕೊಂಡು ಬಂದವರು . ಆದ್ದರಿಂದ ನಿಂದನೆ ಮಾಡಲು ಸಾಧ್ಯವಿಲ್ಲ. ದೈವವನ್ನು ಅವಹೇಳನ ಮಾಡಿಕೊಂಡು ಬಂದಲ್ಲಿ ದೈವ ಯಾವ ರೀತಿ ಉತ್ತರ ನೀಡಬಲ್ಲದು! ಎಂದು ಕಲಾವಿದರು ತಿಳಿದವರಾಗಿದ್ದಾರೆ! ಎಂದು ಅವರು ಹೇಳಿದರು.

ಈಗ ರಂಗಚಟುವಟಿಕೆ ಮೇಲೆ ತೂಗುಗತ್ತಿ ನಿಂತಿದೆ. ಅದನ್ನು ಸೌಹಾರ್ದಯುತವಾಗಿ ಶಾಂತಿಯಿಂದ ಪರಿಹರಿಸುವ ಪ್ರಯತ್ನ ನಡೆಯುತ್ತಿದೆ. ಇನ್ನೂ ಕಲಾವಿದರ ಸುದ್ದಿಗೆ ಬಂದರೆ ದೊಡ್ಡ ಸಮ್ಮೇಳನ ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಅವರು ಉಗ್ರ ಹೋರಾಟದ ಬಗ್ಗೆ ಸುಳಿವನ್ನು ನೀಡಿದರು. ಜಿ.ಕೆ.ಗಟ್ಟಿ, ಜಗನ್ ಪವಾರ್ ಬೇಕಲ್, ಪ್ರಕಾಶ್, ಪುಷ್ಪಾ, ಶರತ್ ಶೆಟ್ಟಿ ಕಿನ್ನಿಗೋಳಿ, ಮಧು ಬಂಗೇರ, ಕಿಶೋ‌ರ್ ಶೆಟ್ಟಿ ಮತ್ತಿತರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಓದಿದ್ದೀರಾ?:ಚೈತ್ರಾ ವಂಚನೆ ಪ್ರಕರಣ: ವಜ್ರದೇಹಿ ಸ್ವಾಮೀಜಿಗೆ ಸಿಸಿಬಿ ಪೊಲೀಸರಿಂದ ನೋಟಿಸ್‌

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ