• 8 ಸೆಪ್ಟೆಂಬರ್ 2024

ರಷ್ಯಾ ಉಕ್ರೇನ್ ಯುದ್ಧದಲ್ಲಿ ಸಿಲುಕಿದ್ದ ಕೇರಳದ ಯುವಕರಿಬ್ಬರು ಶೀಘ್ರ ತಾಯ್ನಾಡಿಗೆ. 

 ರಷ್ಯಾ ಉಕ್ರೇನ್ ಯುದ್ಧದಲ್ಲಿ ಸಿಲುಕಿದ್ದ ಕೇರಳದ ಯುವಕರಿಬ್ಬರು ಶೀಘ್ರ ತಾಯ್ನಾಡಿಗೆ. 
Digiqole Ad

ರಷ್ಯಾ ಉಕ್ರೇನ್ ಯುದ್ಧದಲ್ಲಿ ಸಿಲುಕಿದ್ದ ಕೇರಳದ ಯುವಕರಿಬ್ಬರು ಶೀಘ್ರ ತಾಯ್ನಾಡಿಗೆ. 

ತಿರುವನಂತಪುರಂ: ಖಾಸಗಿ ಏಜೆನ್ಸಿಗಳಿಂದಾಗಿ ರಷ್ಯಾದ ಸೈನ್ಯಕ್ಕೆ ನೇಮಕಗೊಂಡ ನಂತರ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಟಕ್ಕಿಳಿದಿರುವ ಕೇರಳ ಮೂಲದ ನಾಲ್ವರು ಯುವಕರಲ್ಲಿ ಇಬ್ಬರು ಶೀಘ್ರದಲ್ಲೇ ತಾಯ್ತಾಡಿಗೆ ಮರಳಲಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ರಾಜ್ಯದ ಮುಖ್ಯಮಂತ್ರಿಗೆ ಎಸ್ ನಾರಾಯಣ್ ಬರೆದ ‘ಭಾಗ್ಯರಾಜ ನಮ್ಮ ಮುಖ್ಯಮಂತ್ರಿ’ ಸಾಂಗ್ ರಿಲೀಸ್!

ಮಂಗಳವಾರ ಸಂಜೆಯಿಂದ ಭಾರತದ ರಾಯಭಾರ ಕಚೇರಿಯು ರಷ್ಯಾದಿಂದ ಮರಳಲು ಅವರ ಪ್ರಯಾಣದ ದಾಖಲೆಗಳನ್ನು ತಯಾರಿಮದುತಿದ್ದು, ಅವರು ಶೀಘ್ರದಲ್ಲೇ ಮನೆಗೆ ಮರಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅಟ್ಟಿಂಗಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕೇಂದ್ರ ಸಚಿವ ಮುರಳೀಧರನ್‌ ಸುದ್ದಿಗಾರರಿಗೆ ಹೇಳಿದ್ದಾರೆ.

ಕೇರಳದ ಉಳಿದ ಇಬ್ಬರಿನ್ನೂ ಮರಳಿ ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು. ಅವರು ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ. ರಷ್ಯಾದಲ್ಲಿರುವ ಮೂವರು ಸಂಬಂಧಿಕರ ಪ್ರಕಾರ, 2.5 ಲಕ್ಷ ರೂ. ದೊಡ್ಡ ಸಂಬಳದ ಭರವಸೆಯೊಂದಿಗೆ ನೇಮಕಾತಿ ಏಜೆನ್ಸಿಯಿಂದ ರಷ್ಯಾಕ್ಕೆ ಕರೆದೊಯ್ಯಲಾಗಿದ್ದು. ಲಾಭದಾಯಕ ಉದ್ಯೋಗಗಳ ಭರವಸೆಯೊಂದಿಗೆ ಭಾರತೀಯರನ್ನು ಯುದ್ಧ ಪೀಡಿತ ಉಕ್ರೇನ್‌ಗೆ ಹೋಗಲು ನೇಮಿಸಿದ ಏಜೆನ್ಸಿಗಳ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಮುರಳೀಧರನ್ ಈ ಹಿಂದೆಯೇ ತಿಳಿಸಿದ್ದರು.

ಈ ಸುದ್ದಿಯನ್ನು ಓದಿದ್ದೀರಾ.?ಏನಿದು ಕೊಹಿನೂರ್! ಒಂದು ವಜ್ರದ ಕಥೆ

ಯುದ್ಧ ಭೂಮಿಯಲ್ಲಿ ಸಿಲುಕಿರುವ ಎಲ್ಲ ಭಾರತೀಯರನ್ನು ಮರಳಿ ಕರೆತರಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಅವರನ್ನು ನೇಮಕ ಮಾಡಿದ ಏಜೆನ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ