• 8 ಸೆಪ್ಟೆಂಬರ್ 2024

ಶಿರೂರು ಗುಡ್ಡ ಕುಸಿತದಲ್ಲಿ  ಎಂಟು ಮೃತ ದೇಹ ಪತ್ತೆ. 

 ಶಿರೂರು ಗುಡ್ಡ ಕುಸಿತದಲ್ಲಿ  ಎಂಟು ಮೃತ ದೇಹ ಪತ್ತೆ. 
Digiqole Ad

ಶಿರೂರು ಗುಡ್ಡ ಕುಸಿತದಲ್ಲಿ  ಎಂಟು ಮೃತ ದೇಹ ಪತ್ತೆ.

ಶಿರೂರು ಬಳಿ ಗುಡ್ಡ ಕುಸಿತ ಮಣ್ಣಿನಡಿಯಲ್ಲಿ  ಸಿಲುಕಿದವರ  ಪತ್ತೆಗಾಗಿ  ಪ್ರಕ್ರಿಯೆ ಮುಂದುವರಿದೆ.  ಇಂದಿಗೆ   ಹತ್ತು ದಿನಗಳು ಕಳೆದಿದ್ದು, ಇನ್ನೂಬ್ಬ ಲಾರಿ ಚಾಲಕರು ಕಾಣೆಯಾಗಿರುವ ಬಗ್ಗೆ ವಿಷಯವು ಕೇಳಿಬರುತ್ತಿದೆ. ಹುಡುಕಾಟದ ಬೃಹತ್ ಕಾರ್ಯಾಚರಣೆಯಲ್ಲಿ ಸದ್ಯ  ಎಂಟು ಜನರ ಮೃತದೇಹ ಪತ್ತೆಯಾಗಿದ್ದು. ಇನ್ನುಳಿದ ಮೂವರಿಗಾಗಿ ಕಾರ್ಯಾಚರಣೆ ನಡೆಸಲಾಗಿದೆ.,  ಆದರೆ ಸಧ್ಯದಲ್ಲಿ ತಮಿಳುನಾಡಿನ ಲಾರಿ ಚಾಲಕ ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಶಿರೂರು ಗುಡ್ಡ ಕುಸಿತದ ದಿನವೇ ಶರಣವರ ಎಂಬವರು ಕಾಣೆಯಾಗಿದ್ದಾರೆ ಎಂದು ಅಂಕೋಲ್ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು.  ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಗಂಗಾವಳಿ ನದಿಯಲ್ಲಿ ಇರುವುದು ನಿನ್ನೆ ಖಚಿತವಾಗಿದ್ದು, ಬೂಮ್ ಫೋಕ್ಲೀನ್ ಮೂಲಕ ಹುಡುಕಾಟ ಮುಂದುವರಿದಿದೆ.  ಇನ್ನು ನಾಪತ್ತೆಯಾದ ನಾಲ್ವರ ಪತ್ತೆ ಆಗಬೇಕಿದ್ದು ಕೇರಳದ ಲಾರಿ ಚಾಲಕ ಅರ್ಜುನ್, ತಮಿಳುನಾಡು ಎಲ್‌ಪಿಜಿ ಗ್ಯಾಸ್‌ ಟ್ಯಾಂಕ‌ರ್ ಚಾಲಕ ಶರವಣನ್, ಗಂಗೆಕೊಳ ಗ್ರಾಮದ ಯುವಕ ಜಗನ್ನಾಥ್ ಹಾಗೂ ಲೋಕೇಶ್ ನಾಯ್ಕ ಎಂಬುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. 

 

Digiqole Ad

ಈ ಸುದ್ದಿಗಳನ್ನೂ ಓದಿ