• 8 ಸೆಪ್ಟೆಂಬರ್ 2024

ರಾಯರು ಬಂದರು ಮಾವನ ಮನೆಗೆ- ಸಂಗೀತ ನಿರ್ದೇಶಕ ಇನ್ನಿಲ್ಲ

 ರಾಯರು ಬಂದರು ಮಾವನ ಮನೆಗೆ- ಸಂಗೀತ ನಿರ್ದೇಶಕ ಇನ್ನಿಲ್ಲ
Digiqole Ad

ಖ್ಯಾತ ಸಂಗೀತ ನಿರ್ದೇಶಕ ವಿಧಿವಶ.ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ರಾಜ್ ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.  ತೋಟಕೂರ ಸೋಮರಾಜು ಮೂಲ ಹೆಸರಾಗಿದ. ಇವರು ತೆಲುಗು ಚಿತ್ರಗಳಲ್ಲದೆ ಕನ್ನಡದ ‘ರಾಯರು ಬಂದರು ಮಾವನ ಮನೆಗೆ’, ‘ಎದುರು ಮನೇಲಿ ಗಂಡ ಪಕ್ಕದ ಮನೇಲಿ ಹೆಂಡ್ತಿ’, ‘ಸ್ನೇಹದ ಕಡಲಲ್ಲಿ’ ಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿದ್ದರು.ರಾಜ್ ಅವರು ಸಂಗೀತ ನಿರ್ದೇಶಕ ಟಿ.ವಿ.ರಾಜು ಅವರ ಮಗನಾಗಿದ್ದು,ರಾಜ್ ಮತ್ತು ಕೋಟಿ, ಸಂಗೀತ ಜೋಡಿ, ಸಿನಿಮಾ ಸಂಗೀತದಲ್ಲಿ ಗಮನಾರ್ಹ ಪ್ರಭಾವ ಬೀರಿದರು, ಹಲವಾರು ಪುರಸ್ಕಾರಗಳನ್ನು ಗೆದ್ದರು. ಎರಡು ದಶಕಗಳಲ್ಲಿ, ಅವರ ಸಂಗೀತವು ಸಂಗೀತ ಪ್ರೇಮಿಗಳ ಹೃದಯವನ್ನು ಮುಟ್ಟಿತು. ತನ್ನ ಸಂಗಾತಿಯನ್ನು ಕಳೆದುಕೊಂಡಿದ್ದು ಕೋಟಿಗೆ ತೀವ್ರ ದುಃಖ ತಂದಿದೆ. ಹಲವಾರು ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ