• 8 ಸೆಪ್ಟೆಂಬರ್ 2024

ಸೌಜನ್ಯ ಪ್ರಕರಣದ ಹೈಲೈಟ್ಸ್?ಇಲ್ಲಿದೆ 11ವರ್ಷಗಳ ಕೇಸಿನ ವಿವರ 

 ಸೌಜನ್ಯ ಪ್ರಕರಣದ ಹೈಲೈಟ್ಸ್?ಇಲ್ಲಿದೆ 11ವರ್ಷಗಳ ಕೇಸಿನ ವಿವರ 
Digiqole Ad

ಸೌಜನ್ಯ ಪ್ರಕರಣದ ಹೈಲೈಟ್ಸ್?ಇಲ್ಲಿದೆ 11ವರ್ಷಗಳ ಕೇಸಿನ ವಿವರ 

ಧರ್ಮಸ್ಥಳ:2012ರಲ್ಲಿ ಕಾಲೇಜಿನಿಂದ ಮನೆಗೆ ಬರುತ್ತಿದ್ದ ಸೌಜನ್ಯಾ ಅಕ್ಟೋಬರ್ 9ರಂದು ಅಪಹರಣಕ್ಕೆ ಒಳಗಾಗುತ್ತಾಳೆ. ಅದೇ ದಿನ ರಾತ್ರಿಯೇ ಆಕೆ ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಾಗುತ್ತದೆ. ಅಕ್ಟೋಬರ್ 10ರಂದು ಈ ಬಾಲಕಿ ಶವವಾಗಿ ಧರ್ಮಸ್ಥಳದ ಮಣ್ಣಸಂಖದಲ್ಲಿ ಶವವಾಗಿ ಪತ್ತೆಯಾಗುತ್ತಾಳೆ. ಅತ್ಯಾಚಾರದ ನಂತರ ಈಕೆಯನ್ನು ಕೊಲೆ ಮಾಡಲಾಗಿದೆ ಎಂದು ನಂತರ ಪೊಲೀಸ್ ತನಿಖೆಯಿಂದ ತಿಳಿದು ಬರುತ್ತದೆ.

ಮೊನ್ನೆಯಷ್ಟೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಸಂತೋಷ್ ರಾವ್ ಎನ್ನುವವರನ್ನು ಮಾನ್ಯ ನ್ಯಾಯಾಲಯ ನಿರ್ದೋಷಿ ಎಂದು ಆದೇಶ ನೀಡಿದೆ. ಹಾಗಾಗಿ ಮತ್ತೆ ಸೌಜನ್ಯಾಳ ಸಾವು ಮುನ್ನೆಲೆಗೆ ಬಂದಿದೆ. ಈ ಪ್ರಕರಣವನ್ನು ಮರುತನಿಖೆ ನಡೆಸಬೇಕು ಎಂದು ಆಕೆಯ ಕುಟುಂಬಸ್ಥರೂ ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಸೌಜನ್ಯಾಳ ಕಥೆಯನ್ನು ಸಿನಿಮಾ ಮಾಡಲು ಚಿತ್ರತಂಡ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಸೌಜನ್ಯ ಕೇಸ್ ಇಟ್ಟುಕೊಂಡು ಸಿನಿಮಾ ಮಾಡಲು ಲವ ಎನ್ನುವವರು ಹೊರಟಿದ್ದು, ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ಗಾಗಿ ಅವರು ಅರ್ಜಿ ಸಲ್ಲಿಸಿದ್ದಾರೆ.

ಜಿ.ಕೆ. ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಟೈಟಲ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದು, ‘ಸ್ಟೋರಿ ಆಫ್ ಸೌಜನ್ಯಾ’ (Story of Soujanya) ಶೀರ್ಷಿಕೆಯನ್ನು ಕೊಡುವಂತೆ ಅವರು ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಅರ್ಜಿಯಲ್ಲಿ ಸಲ್ಲಿಕೆಯಾದಂತೆ ಇದೊಂದು ಸಾಮಾಜಿಕ ಕಥಾ ಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.

 

ಇದೀಗ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಸೌಜನ್ಯ ಪ್ರಕರಣದ ಹೈಲೈಟ್ಸ್

  • 9/10/2012 ರಂದು ಸಂಜೆ 4:15 ಕ್ಕೆ ನಾಪತ್ತೆ

 

  •  9/10/2012 ರಂದು ರಾತ್ರಿ 10:30 ಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲು

 

  •  FIR ನಂಬರ್ 250/2012

 

  •  10/10/2012 ರಂದು 12:30 ಕ್ಕೆ ಸೌಜನ್ಯ ಶವ ಧರ್ಮಸ್ಥಳದ ಮಣ್ಣಸಂಖದಲ್ಲಿ ಪತ್ತೆ.

 

  •  ಬೆಳ್ತಂಗಡಿ ಪೊಲೀಸರು ನಾಪತ್ತೆ ಪ್ರಕರಣವನ್ನು ರೇಪ್ & ಮಾರ್ಡರ್ ಅಗಿ 376/302 ಅಡಿಯಲ್ಲಿ ಪ್ರಕರಣ ದಾಖಲಾಯಿಸಿ ಬೆಳ್ತಂಗಡಿ ಕೋರ್ಟ್ ಗೆ ವರದಿ.

 

  •  11/10/2012 ರಂದು ಸಂಜೆ 6:30 – 7 ಗಂಟೆಗೆ ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹೌಸಿಂಗ್ ಕಾಲೋನಿ ನಿವಾಸಿ ಸುಧಾಕರ್ ರಾವ್ ಅವರ ಪುತ್ರ ಸಂತೋಷ್ ರಾವ್(38) ಎಂಬಾತ ಬಾಹುಬಲಿ ಬೆಟ್ಟದ ಗುಡ್ಡದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಬೆಳ್ತಂಗಡಿ ಪೊಲೀಸರ ವಶಕ್ಕೆ.

 

  •  ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಬಾಸ್ಕರ್ ರೈ ಮತ್ತು ಪಿಎಸ್ಐ ಯೋಗೀಶ್ ಕುಮಾರ್ ಬಿಸಿ ತಂಡದಿಂದ ತನಿಖೆ

 

  •  ಆರೋಪಿ ಸಂತೋಷ್ ರಾವ್ ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಮಂಗಳೂರು ಸಬ್ ಜೈಲು ಸೇರುತ್ತಾನೆ.

 

  • ಕೆಲ ಸಮಯ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದರು

 

  • 22/11/2012 ರಂದು ರಾಜ್ಯ ಸರಕಾರ ಆದೇಶ ಸಂಖ್ಯೆ HD343PCB/2012 ಪ್ರಕಾರ CID ತನಿಖೆಗೆ ಆದೇಶ.

 

  •  CID ತನಿಖೆ ಮಾಡುತ್ತಿದ್ದಾಗ 6/11/2013 ರಂದು ರಾಜ್ಯ ಸರಕಾರ ಆದೇಶ ಸಂಖ್ಯೆ HD6COD /2013 ರ ಪ್ರಕಾರ CBI ತನಿಖೆಗೆ ಆದೇಶ.

 

  •  CBI ಅಧಿಕಾರಿಗಳು CC 203/2016 ರ ಎಫ್ಐಆರ್ ಮಾಡಿ ತನಿಖೆ ಆರಂಭ.

 

  •  26/10/2017 ರಂದು CBI ಅಧಿಕಾರಿಗಳು ಆರೋಪಿ ಸಂತೋಷ್ ರಾವ್ ವಿರುದ್ಧ ಕೋರ್ಟ್ ಗೆ ಜಾರ್ಜ್ ಶೀಟ್ ಸಲ್ಲಿಕೆ

 

  •  ಸಿಬಿಐ ಕೋರ್ಟ್ ಒಟ್ಟು 40 ಸಾಕ್ಷಿಗಳ ವಿಚಾರಣೆ.

 

  •  ಎರಡು ವರ್ಷ ಮಂಗಳೂರು ಸೆಷನ್ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ.

 

  •  ನಂತರ ಬೆಂಗಳೂರು 50 ನೇ ಅಡಿಷನಲ್ ಸಿಟಿ ಸಿವಿಲ್& ಸೆಷನ್ ಜಡ್ಜ್ ಕೋರ್ಟ್‌ ನಲ್ಲಿ ವಿಚಾರಣೆ ಮುಂದುವರಿಕೆ‌.

 

  •  ಉದಯ ಜೈನ್ ,ಮಲ್ಲಿಕ್ ಜೈನ್ , ದೀರಜ್ ಜೈನ್ ಮೂವರು CBI ಕೋರ್ಟ್ ಗೆ ವಕೀಲರ ಮೂಲಕ ಹೋಗಿ ಬೇಕಾದ ತನಿಖೆ ಹಾಗೂ ಮಂಪರ್ ಪರೀಕ್ಷೆ , ಪೊಲಿಯೋಗ್ರಾಫಿ ಮುಂತಾದ ಪರೀಕ್ಷೆ ಮಾಡಿ ಆರೋಪದಿಂದ ಮುಕ್ತಿ ನೀಡಲು ಅರ್ಜಿ ಸಲ್ಲಿಕೆ.

 

  •  ಸಿಬಿಐ ಕೋರ್ಟ್ ಮೂವರಿಗೂ ಚೆನೈ ನಲ್ಲಿ ಪೊಲಿಯೋಗ್ರಾಫಿ , ರಕ್ತ ಪರೀಕ್ಷೆ, ಮೊಬೈಲ್ ಡಿಟೈಲ್ಸ್ , ಬ್ರೈನ್ ಮ್ಯಾಪಿಂಗ್ ಮುಂತಾದ ಪರೀಕ್ಷೆ ಮಾಡಲು ಅನುಮತಿ.

 

  • ಕೋರ್ಟ್ ಆದೇಶದಂತೆ ಚೆನೈನಲ್ಲಿ ಪರೀಕ್ಷೆ ಮಾಡಿ ಸಿಬಿಐ ಕೋರ್ಟ್ ಗೆ 25/03/2015 ರಂದು ವರದಿ ಸಲ್ಲಿಕೆ‌‌

 

  •  ಕೊಲೆಯಾದ ಸೌಜನ್ಯಳ ತಂದೆ ಚಂದಪ್ಪ ಗೌಡರು ಮೂರು ಜನರಾದ ದೀರಜ್ ಜೈನ್, ಉದಯ ಜೈನ್ , ಮಲ್ಲಿಕ್ ಜೈನ್ ವಿರುದ್ಧ ಪ್ರಕರಣ ದಾಖಲಾಯಿಸಿ ಸಹ ಆರೋಪಿ ಮಾಡಲು ಸಿಬಿಐ ಕೋರ್ಟ್ ಗೆ 7/2/2017 ರಂದು ವಕೀಲರಾದ ಅಮನ್ ಕೊರಾಯ ಮೂಲಕ ಅರ್ಜಿ ಸಲ್ಲಿಕೆ.

 

  •  ಉದಯ ಜೈನ್ , ಮಲ್ಲಿಕ್ ಜೈನ್ , ದೀರಜ್ ಜೈನ್ ಚಂದಪ್ಪ ಗೌಡರ ಅರ್ಜಿಯ ವಿರುದ್ಧ ಮೂವರ ಪರವಾಗಿ ವಕೀಲ ಪಿಪಿ ಹೆಗ್ಡೆ ಮೂಲಕ CRP ನಂಬರ್ 1928/2017 ನಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಇದು 27/01/2021 ಚಂದಪ್ಪ ಗೌಡರ ಅರ್ಜಿ ವಜಾ.

 

  • ಆರೋಪಿ ಸಂತೋಷ್ ರಾವ್ 6 ಕ್ಕೂ ಹೆಚ್ಚು ಭಾರಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ.

 

  •  16-06-2023 ರಂದು ಪ್ರಕರಣದ ತೀರ್ಪುನ್ನು ಸಿಬಿಐ ಕೋರ್ಟ್ ಪ್ರಕಟಿಸಿದೆ.

#justice for soujany 

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ