• 8 ಸೆಪ್ಟೆಂಬರ್ 2024

ಒಂದು ದೊಡ್ಡ ಕಥೆಯ ಭಾಗವಾಗಿ ನಮ್ಮೆಲ್ಲರೊಳಗೆ ಒಬ್ಬ ಹೀರೋ ಕೌಶಿಕ್ ಗೌಡ.

 ಒಂದು ದೊಡ್ಡ ಕಥೆಯ ಭಾಗವಾಗಿ ನಮ್ಮೆಲ್ಲರೊಳಗೆ ಒಬ್ಬ ಹೀರೋ ಕೌಶಿಕ್ ಗೌಡ.
Digiqole Ad

ಒಂದು ದೊಡ್ಡ ಕಥೆಯ ಭಾಗವಾಗಿ ನಮ್ಮೆಲ್ಲರೊಳಗೆ ಒಬ್ಬ ‘ಹೀರೋ’ ಕೌಶಿಕ್ ಗೌಡ.

ನಿರ್ದೇಶಕ ಕುಲದೀಪ್ ಕಾರಿಯಪ್ಪ ಅವರ ಚಿತ್ರ ‘ನೋಡಿದವರು ಏನಂತಾರೆ’ ಬಿಡುಗಡೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ತಮ್ಮ ಮುಂದಿನ ಚಿತ್ರದ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಹಾಸನದ ಪುಷ್ಪಗಿರಿ ಮಠದ ಶ್ರೀ ಶ್ರೀ ಸೋಮಶೇಖರ ಸ್ವಾಮೀಜಿ ಅವರು ನಟ ಕೌಶಿಕ್ ಗೌಡ ಅವರ ಜನ್ಮದಿನದಂದು ‘Hero’ ಶೀರ್ಷಿಕೆಯ ಪೋಸ್ಟರ್ ಅನ್ನು ಅನಾವರಣಗೊಳಿಸಿ ನಿರ್ದೇಶಕ ಮತ್ತು ನಾಯಕ ಕೌಶಿಕ್ ಗೌಡ ಅವರಿಗೆ ಆಶೀರ್ವದಿಸಿದರು.

ಮೂಲತಃ ಹಾಸನದವರಾದ, ಮಾಡೆಲಿಂಗ್ ಹಾಗು ಸಾಕಷ್ಟು ಕಿರು ಚಿತ್ರಗಳಲ್ಲಿ ಸಕ್ರೀಯರಾಗಿದ್ದ ಕೌಶಿಕ್ ಗೌಡ ಅವರು, ” ‘Hero’ ನ ಬಗ್ಗೆ ನಾವು ಹೆಚ್ಚಾಗಿ ಹೇಳಲು ಇದು ಸಮಯವಲ್ಲ. ನಿರ್ದೇಶಕರು ನಿಮಗೆ ತಕ್ಕ ಮಾಹಿತಿ ನೀಡುತ್ತಾರೆ. ಕುಲದೀಪ್ ಅವರು ಒಂದು ದಿನ ನನಗೆ ಕರೆ ಮಾಡಿ ಭೇಟಿಯಾಗಲು ಹೇಳಿ, ಕಥೆ ಮತ್ತು ಪರಿಕಲ್ಪನೆಯನ್ನು ಹೇಳಿ, ಇದರ ಬಗೆಗೆ ನನ್ನೊಟ್ಟಿಗೆ ಸಾಕಷ್ಟು ಚರ್ಚೆ ನಡೆಸಿದರು. ಆದರೆ ಆ ಪಾತ್ರ ಯಾರು ಮಾಡುತ್ತಾರೆ, ಅಥವಾ ನಾನು ಏನು ಮಾಡುತ್ತೇನೆ ಎಂದು ಹೇಳಲಿಲ್ಲ. ಕಡೆಯಲ್ಲಿ ಅವರು ನನ್ನನ್ನು ‘Hero’ ಆಗಿ ಕಲ್ಪಿಸಿಕೊಂಡಿದ್ದಾರೆಂದು ನನಗೆ ಹೇಳಿದಾಗ ನನಗೆ ಆಶ್ಚರ್ಯ ಮತ್ತು ಸಂತೋಷವಾಯಿತು. ‘Hero’ನ ತಲೆಯೊಳಗೆ ನಾನು ಹೊಕ್ಕಲು ಸಾಕಷ್ಟು workshopಗಳು, ದೇಹದ ರೂಪಾಂತರಗಳು (body transformation) ಮತ್ತು ಮಾನಸಿಕ ಪ್ರಕ್ಷುಬ್ಧತೆಯನ್ನು ಎದುರಿಸಬೇಕಾಯಿತು. ನಾನು 5 ತಿಂಗಳಲ್ಲಿ 15 ಕೆಜಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡು ಪಾತ್ರದ ಭಾವನೆಗಳನ್ನು ಅರ್ಥೈಸಿಕೊಂಡು, ಜೀರ್ಣಿಸಿಕೊಂಡು, ಸ್ವಲ್ಪ ಹೊಸದೆನ್ನಬಹುದಾದ ಆಡುಭಾಷೆಯನ್ನು ಸಹ ಅಭ್ಯಾಸ ಮಾಡಬೇಕಾಯಿತು. ನನ್ನಿಂದ ಸಾಧ್ಯವಾದಷ್ಟು, ನನ್ನ ಶಕ್ತಿ ಮೀರಿ ಶ್ರಮ ಪಟ್ಟು ಉತ್ತಮ ರೀತಿಯಲ್ಲಿ ಈ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ನಂಬಿಕೆ ನನ್ನಲ್ಲಿದೆ. ಇಂತಹ ಪಾತ್ರವನ್ನು ನಾನು ನಿರ್ವಹಿಸಿದ್ದಕ್ಕೆ, ಕುಲದೀಪ್ ಅವರೊಟ್ಟಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದಕ್ಕೆ ನನ್ನಲ್ಲಿ ಅಪರಿಮಿತ ಹೆಮ್ಮೆ ಮತ್ತು ಸಾಕಷ್ಟು ಸಂತೋಷವಿದೆ.” ಎಂದು ತಮ್ಮ ಅನುಭವವನ್ನು ನಮ್ಮೊಟ್ಟಿಗೆ ಹಂಚಿಕೊಂಡಿದ್ದಾರೆ ಕೌಶಿಕ್ ಗೌಡ ಅವರು.

‘Hero’ ಆಗಿ ಶ್ರಮಪಟ್ಟ ಕೌಶಿಕ್ ಗೌಡ ಅವರ ನಟನೆ ಹಾಗು ವೃತಿಪರತೆಯನ್ನು ಶ್ಲಾಘಿಸಿದ ನಿರ್ದೇಶಕ ಕುಲದೀಪ್ ಕಾರಿಯಪ್ಪ ಅವರು, “ಕೌಶಿಕ್ ಅವರು ತಮ್ಮ ಪಾತ್ರದಲ್ಲಿ ಅದ್ಭುತವಾದ ಕೆಲಸವನ್ನು ಮಾಡಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ್ದು ಬಹಳ ಉಲ್ಲಾಸದಾಯಕವಾಗಿತ್ತು. ನಾವು ಹೇಳುತ್ತಿರುವಂತೆ ‘Hero’ ದೊಡ್ಡ ಚಿತ್ರಣ ಒಂದರ ಭಾಗವಾಗಿದೆ. ಆದರೆ ಆ ದೊಡ್ಡ ಚಿತ್ರ ಯಾವುದು- ನಾವು ಈಗ ಹೇಳಲು ಸಾಧ್ಯವಿಲ್ಲ. ಒಂದು ತಂಡವಾಗಿ ಶೀಘ್ರದಲ್ಲೇ ಇದನ್ನು ಅಧಿಕೃತವಾಗಿ ಘೋಷಿಸಿ ನಿಮ್ಮೊಂದಿಗೆ ಮತ್ತಷ್ಟು ಚರ್ಚಿಸುತ್ತೇವೆ. ಸಧ್ಯಕ್ಕೆ ಇಷ್ಟು ಮಾತ್ರ ಹೇಳಬಲ್ಲೆವು. ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿದ್ದೇವೆ. ಅದರ ಸಮಾನವಾಗಿ post production ಕೆಲಸಗಳನ್ನು ಸಹ ನಡೆಸಿಕೊಂಡು ಬಂದಿದ್ದೇವೆ. ‘ನೋಡಿದವರು ಏನಂತರೆ’ ಚಿತ್ರದಲ್ಲಿ ನನ್ನೊಂದಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಅಶ್ವಿನ್ ಕೆನಡಿ ಇಲ್ಲಿಯೂ ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದಾರೆ. ಗಂಟುಮೂಟೆ ಖ್ಯಾತಿಯ ಅಪರಾಜಿತ್ ಸ್ರಿಸ್ ಸಂಗೀತ ಸಂಯೋಜಿಸಿದ್ದು, ಆದಿತ್ಯ ಲೋಕನಾಥ ಸಂಕಲನಕಾರರಾಗಿದ್ದಾರೆ. ‘ನೋಡಿದವರು ಏನಂತರೆ ‘ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ ಮತ್ತು ಶೀಘ್ರದಲ್ಲೇ ಸೆನ್ಸಾರ್‌ಗೆ ಹೋಗಲಿದೆ.” ಎಂದ ನಿರ್ದೇಶಕ ಕುಲದೀಪ್ ಕಾರಿಯಪ್ಪ ತಮ್ಮ ನಾಯಕ ಕೌಶಿಕ್ ಗೌಡ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ