• 8 ಸೆಪ್ಟೆಂಬರ್ 2024

ಅಧ್ಯಾಯ -೧,  ಶ್ಲೋಕ 14, ಭಗವದ್ಗೀತೆ,

 ಅಧ್ಯಾಯ -೧,  ಶ್ಲೋಕ 14,  ಭಗವದ್ಗೀತೆ,
Digiqole Ad

 

ಅಧ್ಯಾಯ -೧  ಶ್ಲೋಕ 14

ಭಗವದ್ಗೀತೆ🚩

ತತ: ಶ್ವೇತೈರ್ಹಯೈರ್ಯುಕ್ತೇ ಮಹತಿ ಸೈಂದನೇ ಸ್ಥಿತೌ|

ಮಾಧವ: ಪಾಂಡವಶ್ವೆವ ದಿವ್ಯೌ ಶಂಖೌ ಪ್ರದಧ್ಮತು: |14|

ತತ: ಶ್ವೇತೈ: ಹಯೈ: ಯುಕ್ತೇ ಮಹತಿ ಸೈಂದನೇ ಸ್ಥಿತೌ|

ಸಜ್ಜುಗೊಂಡ ದೊಡ್ಡ ರಥದಲ್ಲಿ ಕುಳಿತ ಶ್ರೀಕೃಷ್ಣ ಮತ್ತು ಅರ್ಜುನ ವೆಗ್ಗಳದ ಶಂಖಗಳನ್ನು ಊದಿದರು.

ಈ ಶ್ಲೋಕದಲ್ಲಿ ಮಾಧವ ಮತ್ತು ಪಾಂಡವ ಎನ್ನುವ ಎರಡು ವಿಶೇಷಣ ಬಳಕೆಯಾಗಿದೆ. ಇಲ್ಲಿ ಭಗವಂತನನ್ನು ಮಾಧವಃ ಎಂದು ಸಂಬೋಧಿಸಿದ್ದಾರೆ. ‘ಮಾ’ ಅಂದರೆ ಮಾತೆ ಲಕ್ಷ್ಮಿ, ಆದ್ದರಿಂದ ಮಾಧವ ಅಂದರೆ ಲಕ್ಷ್ಮೀಪತಿ ಭಗವಂತ-ಶ್ರೀಮನ್ನಾರಾಯಣ, ಇನ್ನು ‘ಮಾ’ ಅಂದರೆ ಜ್ಞಾನ ಕೂಡಾ ಹೌದು. ಭಗವಂತ ಜ್ಞಾನದ ಒಡೆಯ. ಆದ್ದರಿಂದ ಆತ ಮಾಧವ. ಶ್ರೀಕೃಷ್ಣ-ಅವತಾರದಲ್ಲಿ ಮಧುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾಧವ ಎಂದು ಕರೆಯುತ್ತಾರೆ. ವೇದದಲ್ಲಿ ಮಾತೃ ಎನ್ನುವ ಪದವನ್ನು ಮಾತು ಅಥವಾ ವಾಙ್ಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಏಳು ಮಹಾನ್ ಗ್ರಂಥಗಳಾದ ಋಗ್ವದ, ಯಜುರ್ವೇದ, ಸಾಮವೇದ, ಅಥರ್ವವೇದ, ರಾಮಾಯಣ, ಮಹಾಭಾರತ ಹಾಗೂ ಪುರಾಣಗಳನ್ನು ಮಾತೃ ಎನ್ನುತ್ತಾರೆ.ಆದ್ದರಿಂದ ಸಮಸ್ತ ವೈದಿಕ ವಾಙ್ಮಯ ಪ್ರತಿಪಾದನಾದ ಭಗವಂತ ಮಾಧವ. ಇಲ್ಲಿ ಅರ್ಜುನನನ್ನು ‘ಪಾಂಡವ’ ಎಂದು ಸಂಬೋಧಿಸಿದ್ದಾರೆ. ಅರ್ಜುನ ಕುಂತಿಯ ಮೂರು ಮಂದಿ ಮಕ್ಕಳಲ್ಲಿ ಕೊನೆಯವನು. ಸಾಮಾನ್ಯವಾಗಿ ಯಾವಾಗಲೂ ಕೊನೆಯ ಮಗನ ಮೇಲೆ ಪ್ರೀತಿ ಹೆಚ್ಚು. ಅದಕ್ಕಾಗಿ ಆತನನ್ನು ಪಾರ್ಥ, ಕೌಂತೇಯ, ಪಾಂಡವ ಎಂದು ಕರೆಯುತ್ತಿದ್ದರು. ಅರ್ಜುನನಲ್ಲಿ ಭಗವಂತನ ವಿಶೇಷ ಸನ್ನಿಧಾನವಿತ್ತು. ಆತ ನಾರಾಯಣನ ಜೊತೆಗಾರನಾದ ‘ನರನ’ ರೂಪ ಕೂಡಾ ಹೌದು. ನಮ್ಮ ದೇಹ ಕೂಡಾ ಒಂದು ರಥ. ಅಂತಹ ರಥದಲ್ಲಿ ‘ಜೀವ’ನನ್ನು ನಡೆಸುವ ಭಗವಂತನ ಸನ್ನಿಧಾನವಿದೆ. ನಾಲ್ಕು ಕುದುರೆಗಳೆಂದರೆ 4 ವೇದಗಳು. ಬಿಳಿ ಬಣ್ಣ ಸತ್ವಗುಣದ ಸಂಕೇತ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ