• 8 ಸೆಪ್ಟೆಂಬರ್ 2024

ಖ್ಯಾತ ಕಣ್ಣಿನ ತಜ್ಞ ಡಾ.ವೆಂಕಟರಮಣ ಭಟ್ ಕಾನಾವು ವಿಧಿವಶ!

 ಖ್ಯಾತ ಕಣ್ಣಿನ ತಜ್ಞ ಡಾ.ವೆಂಕಟರಮಣ ಭಟ್ ಕಾನಾವು ವಿಧಿವಶ!
Digiqole Ad

ಖ್ಯಾತ ಕಣ್ಣಿನ ತಜ್ಞ ಡಾ.ವೆಂಕಟರಮಣ ಭಟ್ ಕಾನಾವು ವಿಧಿವಶ!

ಮುಕ್ಕೂರು, ಜ.28 : ಖ್ಯಾತ ಕಣ್ಣಿನ ತಜ್ಞ, ಪೆರುವಾಜೆ ಗ್ರಾಮ ಕಾನಾವಿನ ಡಾ.ವೆಂಕಟರಮಣ ಭಟ್ ಕಾನಾವು ( 75) ಇಂದು ಮಧ್ಯಾಹ್ನ ನಿಧನ ಹೊಂದಿದರು. ಮೃತರು ಪತ್ನಿ ಸುಮತಿ ವಿ.ಭಟ್, ಪುತ್ರಿ ಧನ್ಯ, ಪುತ್ರ ಡಾ. ಅರವಿಂದ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರು ಕೇರಳದ ಕಣ್ಣೂರಿನಲ್ಲಿ ಕಳೆದ 45 ವರ್ಷಗಳಿಗಿಂತ ಅಧಿಕ ಕಾಲ ಕಣ್ಣಿನ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಕಣ್ಣೂರು ಅಶೋಕ್ ಆಸ್ಪತ್ರೆಯನ್ನು ಮುನ್ನಡೆಸುತ್ತಿದ್ದ ಡಾ.ವೆಂಕಟರಮಣ ಭಟ್ ಜನಪ್ರಿಯ ವೈದ್ಯರಾಗಿ ಕೇರಳ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ್ದರು.ಮೃತರ ಪಾರ್ಥಿವ ಶರೀರದ ಅಂತಿಮ ವಿಧಿ ವಿಧಾನ ಕಾರ್ಯ ಜ.29 ರಂದು ಕಾನಾವು ಮೇಲಿನ ಮನೆಯಲ್ಲಿ ನಡೆಯಲಿದೆ. ಬೆಳಗ್ಗೆ 8 ರಿಂದ 8.30 ರ ತನಕ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Digiqole Ad

ಶಿವಪ್ರಸಾದ್ ಮಣಿಯೂರು

https://goldfactorynews.com

ಈ ಸುದ್ದಿಗಳನ್ನೂ ಓದಿ