• 8 ಸೆಪ್ಟೆಂಬರ್ 2024

ಟಿ ತಿಪ್ಪೇಶ್ ರವರ 60ರ ಅಭಿನಂದನಾ ಸಮಿತಿ ನುಡಿ ಸಿಂಗಾರ ಗ್ರಂಥ ಲೋಕಾರ್ಪಣೆ

 ಟಿ ತಿಪ್ಪೇಶ್ ರವರ 60ರ ಅಭಿನಂದನಾ ಸಮಿತಿ ನುಡಿ ಸಿಂಗಾರ ಗ್ರಂಥ ಲೋಕಾರ್ಪಣೆ
Digiqole Ad

ಟಿ ತಿಪ್ಪೇಶ್ ರವರ 60ರ ಅಭಿನಂದನಾ ಸಮಿತಿ ನುಡಿ ಸಿಂಗಾರ ಗ್ರಂಥ ಲೋಕಾರ್ಪಣೆ

 

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ತಿಪ್ಪೇಶವರ 60 ವಸಂತ ತುಂಬಿದ ಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಾಲನಂದ ಮಹಾಸ್ವಾಮಿಗಳು ಪೀಠಾಧ್ಯಕ್ಷರು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠ ಇವರ ದಿವ್ಯ ಸಾನಿಧ್ಯದಲ್ಲಿ ಆಶೀರ್ವಚನ ನಡೆಯಲಿದೆ. ಕಾರ್ಯಕ್ರಮದ ಆಶಿಯ ನುಡಿಯನ್ನು ಪ್ರೊಫೆಸರ್ ಬೋರಲಿಂಗಯ್ಯ ಹಾಗೂ ಘಟನೆಯನ್ನು ನಾಡೋಜ ಡಾ. ಗೋ.ರು ಚೆನ್ನಪ್ಪ ನೆರವೇರಿಸಲಿದ್ದಾರೆ. ನುಡಿ ಸಿಂಗಾರ ಲೋಕಾರ್ಪಣೆಯನ್ನು ನಾ. ಡಾ. ಹಂಪ ನಾಗರಾಜಯ್ಯ ಮಾಡಲಿದ್ದಾರೆ. ಹಾಗೂ ಕಾರ್ಯಕ್ರಮಕ್ಕೆ ಇನ್ನಿತರ ಮುಖ್ಯ ಅತಿಥಿಗಳು ಭಾಗವಹಿಸಿ ಶುಭ ಹಾರೈಸಲಿದ್ದಾರೆ ಕಾರ್ಯಕ್ರಮದ ನಿರೂಪಣೆಯನ್ನು ಭಾನುಮತಿಯವರು ನೆರವೇರಿಸುತ್ತಿದ್ದಾರೆ.

ಜನಪದ ಗಾಯಕ, ರಂಗನಟ, ನಿರೂಪಕ ಸಾಂಸ್ಕೃತಿಕ ಸಂಘಟಕರಾದ ಶ್ರೀಯುತ *ಟಿ. ತಿಮ್ಮೇಶ್* ಅವರಿಗೆ ಅರವತ್ತು ವಸಂತಗಳು ತುಂಬಿದ ಶುಭಸಂದರ್ಭದಲ್ಲಿ, ಅವರ ಸ್ನೇಹಿತರು, ಹಿತೈಷಿಗಳು ಸೇರಿ *ದಿನಾಂಕ 1-3-2024ರಂದು ಮಧ್ಯಾಹ್ನ 3-00ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ *ಅಭಿನಂದನಾ ಸಮಾರಂಭ* ಹಾಗೂ *ನುಡಿ ಸಿಂಗಾರ* ಅಭಿನಂದನಾ ಗ್ರಂಥದ ಲೋಕಾರ್ಪಣೆ ಸಮಾರಂಭವನ್ನು ಆಯೋಜಿಸಿರುತ್ತಾರೆ.

ಈ ಸಮಾರಂಭಕ್ಕೆ  ಕನ್ನಡ ಒಡನಾಡಿಗಳು, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 28 ವಿಧಾನಸಭಾ ಕ್ಷೇತ್ರ ಘಟಕಗಳ ನಿಕಟಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು, ಗೌರವಾನ್ವಿತ ಸದಸ್ಯರುಗಳು ಆಗಮಿಸಿ, ಕಾರ್ಯಕ್ರಮಕ್ಕೆ ಶುಭ ಕೋರಬೇಕೆಂದು ತಿಳಿಸಿರುತ್ತಾರೆ.

 

 

Digiqole Ad

ಈ ಸುದ್ದಿಗಳನ್ನೂ ಓದಿ