• 8 ಸೆಪ್ಟೆಂಬರ್ 2024

ಚಿನ್ನದ ಸರ ಮಾಯ…ಪ್ರಯಾಣಿಕರ ಸಮೇತ ಬಸ್ ಠಾಣೆಗೆ!

 ಚಿನ್ನದ ಸರ ಮಾಯ…ಪ್ರಯಾಣಿಕರ ಸಮೇತ ಬಸ್ ಠಾಣೆಗೆ!
Digiqole Ad

 

ಚಿನ್ನದ ಸರ ಮಾಯ…ಪ್ರಯಾಣಿಕರ ಸಮೇತ ಬಸ್ ಠಾಣೆಗೆ!

ಬ್ಯಾಗ್‌ನಲ್ಲಿಟ್ಟಿದ್ದ 50 ಗ್ರಾಂನ ಎರಡು ಚಿನ್ನದ ಸರಗಳನ್ನು ಕಳವು ಮಾಡಲಾಗಿದ್ದ ಕಾರಣ ಬಸ್ಸನ್ನೇ ನೇರವಾಗಿ ಠಾಣೆಗೆ ತಂದು ತಪಾಸಣೆ ನಡೆಸಲಾಗಿದೆ.

ಹೌದು, ಇಂತಹದೊಂದು ವಿಚಿತ್ರ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ನಡೆದಿದೆ. ಮಹಿಳೆಯೊಬ್ಬರು ಬಳ್ಳಾರಿಯಿಂದ ತಿಂಥಣಿ ಬ್ರಿಜ್ ಮೂಲಕ ದೇವದುರ್ಗಕ್ಕೆ ಬರುತ್ತಿರುವ ಸಮಯದಲ್ಲಿ ಬ್ಯಾಗ್‌ನಲ್ಲಿಟ್ಟಿದ್ದ 50 ಗ್ರಾಂನ ಎರಡು ಚಿನ್ನದ ಸರಗಳನ್ನು ಕಳವು ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಹಿಳೆ ಹಾಗೆ ಹೇಳುತ್ತಿದ್ದಂತೆ ಚಾಲಕ ಬಸ್‌ನ್ನು ಪೊಲೀಸ್‌ ಠಾಣೆಗೆ ತಂದು ನಿಲ್ಲಿಸಿದ್ದಾರೆ. ನಂತರ ಪೊಲೀಸರು ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರ ಬ್ಯಾಗ್‌ಗಳನ್ನು ಪರಿಶೀಲಿಸಿದರೂ ಚಿನ್ನದ ಸರಗಳು ಸಿಕ್ಕಿಲ್ಲ. ಯಾರೋ ಕಳುವು ಮಾಡಿ ಹಿಂದಿನ ಸ್ಟಾಪ್‌ನಲ್ಲೇ ಇಳಿದಿರಬೇಕು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ