• 8 ಸೆಪ್ಟೆಂಬರ್ 2024

ಎರಡು ವರ್ಷಗಳ ಹಿಂದೆ ಅಯೋಧ್ಯೆಗೆ ಹೋಗಿದ್ದ ಪುತ್ತೂರಿನ ವ್ಯಕ್ತಿ ಇನ್ನೂ ಬಂದಿಲ್ಲ

 ಎರಡು ವರ್ಷಗಳ ಹಿಂದೆ ಅಯೋಧ್ಯೆಗೆ ಹೋಗಿದ್ದ ಪುತ್ತೂರಿನ ವ್ಯಕ್ತಿ ಇನ್ನೂ ಬಂದಿಲ್ಲ
Digiqole Ad

ಎರಡು ವರ್ಷಗಳ ಹಿಂದೆ ಅಯೋಧ್ಯೆಗೆ ಹೋಗಿದ್ದ ಪುತ್ತೂರಿನ ವ್ಯಕ್ತಿ ಇನ್ನೂ ಬಂದಿಲ್ಲ!


ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ದೇರಾಜೆ ಎಂಬಲ್ಲಿನ ನಿವಾಸಿಯಾದ ಬಾಲಕೃಷ್ಣ ಶೆಟ್ಟಿ (66) ಎಂಬುವರು ಕಳೆದೆರಡು ವರ್ಷಗಳ ಹಿಂದೆ ಅಯೋಧ್ಯೆಗೆ ಹೋಗಿ ಬರುತ್ತೇನೆಂದು ರೈಲಿನಲ್ಲಿ ಹೊರಟು ಆನಂತರ ಪುನಃ ಮರಳಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಅವರ ಕುಟುಂಬದವರು ದೂರು ಸಲ್ಲಿಸಿದ್ದಾರೆ. ಇದೀಗ ಕಾರ್ಯೋನ್ಮುಖರಾಗಿರುವ ಪೊಲೀಸರು ಬಾಲಕೃಷ್ಣ ಪತ್ತೆಗೆ ಸಹಕರಿಸಬೇಕೆಂದು ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಪುತ್ತೂರು  ಅಯೋಧ್ಯೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಎರಡು ವರ್ಷ ಹಿಂದೆ ಪುತ್ತೂರಿನಿಂದ ಹೋಗಿದ್ದ ವ್ಯಕ್ತಿಯೊಬ್ಬರು ಇನ್ನೂ ಕೂಡ ಮನೆಗೆ ಬಂದಿಲ್ಲ. ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ಮಾಹಿತಿಯೂ ಇಲ್ಲ. ಅವರ ಪತ್ತೆಗೆ ಸಹಕರಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ. ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ದೇರಾಜೆ ನಿವಾಸಿ ಬಾಲಕೃಷ್ಣ ಶೆಟ್ಟಿ(66) ನಾಪತ್ತೆಯಾದವರು. ಅಯೋಧ್ಯೆಗೆ ರೈಲಿನಲ್ಲಿ ಹೋಗಿ ಬರುವುದಾಗಿ 2022ರ ಫೆ.3ರಂದು ಮನೆಯಿಂದ ಹೊರಟ ಅವರು ಅಯೋಧ್ಯೆ ತಲುಪಿದ ಮೇಲೆ ಅಳಿಯನಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು.
ಇದಾದ 2 ವಾರಗಳ ಕಾಲ ಮಗಳ ಜತೆ ಆಗಾಗ ದೂರವಾಣಿಯಲ್ಲಿ ಮಾತನಾಡಿದ್ದರು. ಇಲ್ಲಿಫೋನ್‌ ಸಂಪರ್ಕ ಸರಿಯಾಗಿ ಸಿಗುತ್ತಿಲ್ಲಎಂದೂ ಮಗಳಿಗೆ ತಿಳಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಮಗಳು ತಂದೆಯ ಫೋನ್‌ಗೆ ಕರೆ ಮಾಡಿದ್ದು, ಸಂಪರ್ಕ ಸಿಕ್ಕಿರಲಿಲ್ಲ. ಹೀಗಾಗಿ ಪುತ್ತೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಎರಡು ವರ್ಷ ಕಳೆದರೂ ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ ಅವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ