• 7 ಸೆಪ್ಟೆಂಬರ್ 2024

ಮನಸ್ತಾಪದಿಂದ ಮನೆಗೆ ಬೆಂಕಿ ಹಚ್ಚಿದ ಮಹಿಳೆ!

 ಮನಸ್ತಾಪದಿಂದ ಮನೆಗೆ ಬೆಂಕಿ ಹಚ್ಚಿದ ಮಹಿಳೆ!
Digiqole Ad

ಕಾಸರಗೋಡು: ( www.goldfactorynews.com): ಯುವಕನ ಜೊತೆ ವಾಸವಾಗಿದ್ದ ಮಹಿಳೆ ಮನೆಗೆ ಬೆಂಕಿ ಹಚ್ಚಿದ ಘಟನೆ ಪೆರ್ಮುದೆ ಸಮೀಪದ ಮಾಣಿತ್ತಡ್ಕ ಎಂಬಲ್ಲಿ ನಡೆದಿದೆ.

ಮಾಣಿತ್ತಡ್ಕದ ನಯನ ಕುಮಾರ್ ಜೊತೆ ವಾಸವಾಗಿದ್ದ ಉಷಾ ಸೋಮವಾರ ರಾತ್ರಿ ದುಷ್ಕೃತ್ಯ ನಡೆಸಿದ್ದಾಳೆ. ಇಬ್ಬರ ನಡುವೆ ಉಂಟಾದ ವೈಮನಸ್ಸು ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.,ಘಟನೆಗೆ ಸಂಬಂಧಪಟ್ಟಂತೆ ಉಷಾ (35) ಎಂಬಾಕೆಯನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉಷಾ ವಿವಾಹಿತೆಯಾಗಿದ್ದು, ಪತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಒಂದೂವರೆ ವರ್ಷದ ಹಿಂದೆ ತನ್ನ ಪತಿ , ಮಕ್ಕಳ ನ್ನು ತ್ಯಜಿಸಿ ನಯನ ಕುಮಾರ್ ಜೊತೆ ವಾಸವಾಗಿದ್ದಳು. ಸೋಮವಾರ ರಾತ್ರಿ ನಯನ ಕುಮಾರ್ ನ ತಾಯಿ ಮಾತ್ರ ಮನೆಯಲ್ಲಿದ್ದಾಗ  ಸೀಮೆ ಎಣ್ಣೆ ಸುರಿದು ಉಷಾಳು ಮನೆಗೆ ಬೆಂಕಿ ಹಚ್ಚಿದ್ದು, ಮನೆ ಹಾನಿ ಗೊಂಡಿದೆ.

ನಯನ ಕುಮಾರ್ ನ ತಾಯಿ ಮನೆಯಿಂದ ಓಡಿ ಹೋದ ಕಾರಣ ಅಪಾಯ ತಪ್ಪಿದೆ.ಸ್ಥಳಕ್ಕೆ ತಲಪಿದ ಪರಿಸರ ವಾಸಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿ ಸಿದ್ದರು.ನಯನ ಕುಮಾರ್ ನ ತಾಯಿ ನೀಡಿದ ದೂರಿ ನಂತೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಉಷಾಳನ್ನು ಬಂಧಿಸಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ