• 8 ಸೆಪ್ಟೆಂಬರ್ 2024

ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ದಂಪತಿಗಳಿಗೆ ಅಚೀವ್ಮೆಂಟ್ ಅವಾರ್ಡ್.

 ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ದಂಪತಿಗಳಿಗೆ ಅಚೀವ್ಮೆಂಟ್ ಅವಾರ್ಡ್.
Digiqole Ad

ವಾಮನ್ ರಾವ್ ಬೇಕಲ್, ಸಂದ್ಯಾ ರಾಣಿ ದಂಪತಿಗಳಿಗೆ
ಅಚೀವ್ಮೆಂಟ್ ಅವಾರ್ಡ್.

ವಿಸ್ಡಮ್ ಇನ್ಸ್ಟಿಟ್ಯೂಟ್ಸ್ ನೆಟ್ವರ್ಕ್ ವತಿಯಿಂದ, ಮಂಗಳೂರಿನ ಓಸಿಯಾನ್ ಪೆರ್ಲ್ ಹೋಟೆಲ್ ಸಭಾಂಗಣದಲ್ಲಿ ನಡೆದ “ಗುರುವಂದನಾ “ಅದ್ದೂರಿ ಕಾರ್ಯಕ್ರಮದಲ್ಲಿ ಕಾಸರಗೋಡು ಕನ್ನಡ ಭವನದ ರೂವಾರಿಗಳಾದ ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ದಂಪತಿಗಳ ಅಕ್ಷರ ಲೋಕದ ಸರ್ವತೋಮುಖ ಸಾಧನೆ, ಸೇವೆಗಾಗಿ “ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ “ನೀಡಿ ಗೌರವಿಸಲಾಯಿತು.
ವಿಸ್ಡಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಫ್ರಾನ್ಸಿಸ್ಕ್ಯಾ ತೇಜ್ ಅಧ್ಯಕ್ಷತೆ ವಹಿಸಿದರು. ಮುಖ್ಯ ಅಥಿತಿಗಳಾಗಿ ಸಿ ಎ ಗೌತಮ್ ಪೈ ಚಾರ್ಟ್ರರ್ಡ್ ಅಕೌಂಟೆಂನ್ಸ್ ಒಫ್ ಇಂಡಿಯಾ ಮಂಗಳೂರು ಶಾಖೆಯ ಅಧ್ಯಕ್ಷರು, ಡಾ ದಶರಥ ರಾಜ್ ಕೆ ಶೆಟ್ಟಿ ಅಸೋಸಿಯೇಟೆಡ್ ಪ್ರೊಫೆಸರ್ ಎಂ ಐ ಟಿ ಮಣಿಪಾಲ್, ಎಂ ಡಿ ಗಾಂಗ್ಲಿಯಾ ಟೆಕ್ನೊಳಜಿಸ್, ಸಿ ಎ ಗೋಪಾಲಕೃಷ್ಣ ಭಟ್ ಸಂಸ್ಥಾಪಕರು ತ್ರಿಷಾ ಸಮೂಹ ಸಂಸ್ಥೆ ಮುಖ್ಯ ಅಥಿತಿಗಳಾಗಿದ್ದರು. ವಿಸ್ಡಮ್ ಸಂಸ್ಥೆಯ ಸಿ ಎ ಓ ಗುರುತೇಜ್ ಹಾಗೂ ಸಿ ಇ ಓ ಅಭಿಲಾಷ್ ಕ್ಷತ್ರಿಯ ಕಾರ್ಯಕ್ರಮ ನಿರೂಪಿಸಿ ನೇತೃತ್ವ ನೀಡಿದರು. ವಿಸ್ಡಮ್ ಸಂಸ್ಥೆಯ ಮಂಗಳೂರು ಉಡುಪಿ, ಮಣಿಪಾಲ, ಹಾಸನ, ಶಿವಮೊಗ್ಗ, ಪುತ್ತೂರು, ಮೂಡುಬಿದಿರೆ, ಬೆಂಗಳೂರು, ಜೈಪುರ, ಯು ಎ ಇ ಯ ದುಬಾಯ್ ಶಾಖೆಗಳ ವ್ಯವಸ್ಥಾಪಕರೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ