• 8 ಸೆಪ್ಟೆಂಬರ್ 2024

ಮಂಗಳೂರು-ಬೆಂಗಳೂರು ರೈಲು ಸೇವೆ ಪೂರ್ಣ ಬಂದ್‌

 ಮಂಗಳೂರು-ಬೆಂಗಳೂರು ರೈಲು ಸೇವೆ ಪೂರ್ಣ ಬಂದ್‌
Digiqole Ad

ಮಂಗಳೂರು-ಬೆಂಗಳೂರು ರೈಲು ಸೇವೆ ಪೂರ್ಣ ಬಂದ್‌

ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿರುವ ಪರಿಣಾಮ ಸಕಲೇಶಪುರ ತಾಲೂಕಿನ ಕಡಗರವಳ್ಳಿ-ಯಡಕುಮೇರಿ ನಡುವಿನ ರೈಲು ಹಳಿ ಮೇಲೆ ಮಣ್ಣು ಕುಸಿದು ಬೆಂಗಳೂರು-ಮಂಗಳೂರು ಮಾರ್ಗದ ಎಂಟು ರೈಲುಗಳ ಸಂಚಾರ ರದ್ದುಗೊಂಡಿದೆ. ಜತೆಗೆ ಬೆಂಗಳೂರು-ಹಾಸನ-ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ಈಗ ಸ್ಥಗಿತಗೊಂಡಿದೆ. ಈಗಾಗಲೇ ಶಿರಾಡಿ ಘಾಟಿ ಹಾಗೂ ಸಂಪಾಜೆ ಹೆದ್ದಾರಿಯಲ್ಲಿಯೂ ಭೂಕುಸಿತವಾಗುತ್ತಿರುವ ಕಾರಣ ಕರಾವಳಿ ಭಾಗದ ಜನರಿಗೆ ಬೆಂಗಳೂರು ಪ್ರಯಾಣ ಮತ್ತಷ್ಟು ದುಸ್ತರವಾಗುತ್ತಿದೆ. ಚಾರ್ಮಾಡಿ ಘಾಟಿ ಮಾತ್ರ ಸದ್ಯಕ್ಕೆ ಸುರಕ್ಷಿತವಾಗಿರುವ ಏಕೈಕ ಮಾರ್ಗವಾಗಿದೆ.

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ