• 8 ಸೆಪ್ಟೆಂಬರ್ 2024

ಹದಗೆಟ್ಟ ರಸ್ತೆಯನ್ನು ಸ್ವತಃ ಸರಿ ಪಡಿಸಿದ ಗ್ರಾಮಸ್ಥರು

 ಹದಗೆಟ್ಟ ರಸ್ತೆಯನ್ನು ಸ್ವತಃ ಸರಿ ಪಡಿಸಿದ ಗ್ರಾಮಸ್ಥರು
Digiqole Ad

ಮೂವಪ್ಪೆ-ಕಾಣಿಯೂರು ಹದಗೆಟ್ಟ ರಸ್ತೆಯ ದುರಸ್ತಿ ಕಾರ್ಯವನ್ನು ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ (ರಿ.) ಕಲ್ಪಡ ಕೊಡಿಯಾಲ ವತಿಯಿಂದ ಸತತ ಎರಡು ದಿನಗಳ ಕಾಲ ಶ್ರಮದಾನದ ಮೂಲಕ ಮಾಡಲಾಯಿತು.

ಕಳೆದ ಬೇಸಿಗೆಯಲ್ಲಿ ಗ್ರಾಮ ಪಂಚಾಯತ್ ನಿಂದ ರಸ್ತೆ ಮಣ್ಣು ಸುರಿದ ಪರಿಣಾಮವಾಗಿ ಮಳೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದನ್ನು ಮನಗಂಡು

ಸ್ಥಳೀಯರು ಗ್ರಾಮಪಂಚಾಯತ್ ಗೆ ರಸ್ತೆಯನ್ನು ಸರಿಮಾಡುವಂತೆ ಮನವಿ ಸಲ್ಲಿಸಿದ್ದರು ಅದರೆ ಯಾವುದೇ ರೀತಿಯ ಸ್ಪಂದನೆ ದೊರೆಯದೆ ಇದ್ದಾಗ ಊರವರೇ ಸ್ವತಃ ಸತತ 2ದಿನಗಳಿಂದ ರಸ್ತೆಯನ್ನು ದುರಸ್ತಿ ಮಾಡಿದರು.

ಶ್ರಮದಾನದಲ್ಲಿ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ನ ಸದಸ್ಯರುಗಳಾದ

ಸುಬ್ರಹ್ಮಣ್ಯ ಕೆ.ಎಂ., ಹರ್ಷನ್ ಕೆ.ಟಿ., ಅಶ್ವಿನ್ ಕುಮಾರ್ ನಟ್ಟಿಹಿತ್ಲು, ಚೆನ್ನಪ್ಪ ಗೌಡ ಕಲ್ಪಡ, ಪುನೀತ್ ಅಂಗಾರಡ್ಕ, ಗಣೇಶ ಪೆರ್ಲೊಡಿ, ನವೀನ್ ಕೊಡೆಂಕಿರಿ, ಆನಂದ ಗೌಡ ಕಲ್ಪಡ, ಮನೋಹರ ಕಲ್ಪಡ, ಭರತ್ ಕಟ್ಟತ್ತಾರು, ದೇವಿಪ್ರಸಾದ್ ಗುತ್ತು, ಪದ್ಮನಾಭ ಗುತ್ತು, ದೀಕ್ಷಿತ್ ಗುತ್ತು, ಶ್ರೀಧರ ಕಲ್ಪಡ, ಮೋಹನ್ ಕೆ.ಟಿ., ಬಾಬು ಪೂಜಾರಿ, ತಾರನಾಥ ಕಲ್ಪಡ, ಜಯರಾಮ ಪೊಟ್ರೆ, ವಿಜಯ ಕುಮಾರಿ ಪೊಟ್ರೆ ಸಹಕರಿಸಿದರು.

Digiqole Ad

ಗಣೇಶ್ ಪುತ್ತೂರು

https://goldfactorynews.com

ಈ ಸುದ್ದಿಗಳನ್ನೂ ಓದಿ