• 8 ಸೆಪ್ಟೆಂಬರ್ 2024

ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ವತಿಯಿಂದ ರಕ್ಷಾ ಬಂಧನ ಆಚರಣೆ

Digiqole Ad

ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ವತಿಯಿಂದ ರಕ್ಷಾ ಬಂಧನ ಆಚರಣೆ

ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ವತಿಯಿಂದ ರಕ್ಷಾ ಬಂಧನ ವನ್ನು ವಿಶೇಷವಾಗಿ ಆಚರಣೆ ಮಾಡಲಾಯಿತು.ಹಿಂದೂ ಜಾಗರಣ ವೇದಿಕೆ ಈಶ್ವರ ಮಂಗಳ ಇದರ ನೇತೃತ್ವದಲ್ಲಿ ರಕ್ಷಾಬಂಧನದ ಪ್ರಯುಕ್ತ ಈಶ್ವರಮಂಗಲಪೇಟೆಯಲ್ಲಿ ರಕ್ಷಾ ಬಂಧನ ಆಚರಿಸುವುದರ ಜೊತೆಗೆ ಪ್ರತಿಯೊಬ್ಬರಿಗೂ ರಕ್ಷೆಯನ್ನು ಕಟ್ಟಿ ಸಿಹಿ ನೀಡಿವುದರ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಯಿತು.

 

ಇದರ ಜೊತೆಗೆ ಮುಂಬರುವ ಈಶ್ವರ ಮಂಗಳ ಮೊಸರು ಕುಡಿಕೆ ಉತ್ಸವದ 2023 ರ ಆಮಂತ್ರಣ ಪತ್ರಿಕೆಯನ್ನು ಕೂಡ ಬಿಡುಗಡೆ ಮಾಡಲಾಯಿತು. ಮಾತ್ರವಲ್ಲದೆ ಈಶ್ವರಮಂಗಲದ ಗೌರವಾಧ್ಯಕ್ಷರಾದ ಶ್ರೀ ಕೃಷ್ಣ ಭಟ್ ಮುಂಡ್ಯ ಅವರ ನೇತೃತ್ವದಲ್ಲಿ ವಿಶೇಷವಾಗಿ ರಕ್ಷಾಬಂಧನದ ದಿನವಾದ ಇಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಅತ್ಯಂತ ಬಡ ಕುಟುಂಬಕ್ಕೆ ಸೇರಿದ ವಜ್ರ ಮೂಲೆ ಕಾಲೋನಿಯ ಜಯ ಎಂಬವರಿಗೆ ಸಂಘಟನೆಯಿಂದ ಸಂಗ್ರಹವಾದ ಸೇವ ನಿಧಿ ರೂ 30,000ವನ್ನು ಹಿಂದೂ ಜಾಗರಣ ವೇದಿಕೆ ಯಿಂದ ನೀಡಲಾಯಿತು.

ಸಂಘಟನೆಯ ಪ್ರಾಂತ, ಜಿಲ್ಲೆ, ತಾಲೂಕು ಮತ್ತು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಇದ್ದರು

Digiqole Ad

ದಿಶಾ ಕೆ.ಎಸ್

https://goldfactorynews.com

ಈ ಸುದ್ದಿಗಳನ್ನೂ ಓದಿ