ಮನೆಗೆ ನುಗ್ಗಿ ಪ್ರೇಯಸಿಯ ಚುಚ್ಚಿ ಕೊಂದ!
ಮನೆಗೆ ನುಗ್ಗಿ ಪ್ರೇಯಸಿಯ ಚುಚ್ಚಿ ಕೊಂದ!
ಹುಬ್ಬಳ್ಳಿ : ಇಂದು ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ಮನೆಗೆ ನುಗ್ಗಿ ಬರ್ಬರವಾಗಿ ಕೊಂದ ಘಟನೆ ಹುಬ್ಬಳ್ಳಿ ವೀರಪುರದಲ್ಲಿ ನಡೆದಿದೆ. ಪ್ರೀತಿ ಪ್ರೇಮ ಎಂದು ಹುಚ್ಚೇದ್ದ ಈ ಪಾತಕ ವಿಶ್ವ ಆಲಿಯಾಸ್ ಗಿರೀಶ್ ಸಾವಂತ (21) ಎಂದು ಗುರುತಿಸಲಾಗಿದೆ.ಈತ ಒಂದು ವರ್ಷದಿಂದ ಅಂಜಲಿ (20) ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆರೋಪಿ ಕುತ್ತಿಗೆ ಮತ್ತು ಹೊಟ್ಟೆ ಭಾಗಕ್ಕೆ ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ SP ಬ್ಯಾಕೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಒಟ್ಟಿನಲ್ಲಿ ಕಳೆದ ಹಲವು ದಿನಗಳಿಂದ ಹುಬ್ಬಳ್ಳಿಯಲ್ಲಿ ಕ್ರೈಂ ರೇಟ್ ಹೆಚ್ಚಳವಾಗುತ್ತಿದ್ದು ಅದರಲ್ಲೂ ಪ್ರೀತಿಯ ವಿಚಾರಕ್ಕೇ ಯುವತಿಯರ ಕೊಲೆ ಆಗುತ್ತಿರೋದು ಜನತೆಯನ್ನು ಆತಂಕಕ್ಕೆ ಎಡೆ ಮಾಡಮಾಡಿ ಕೊಟ್ಟಿದೆ . ಸುದ್ದಿಯನ್ನು ಓದಿದ್ದೀರಾ?ದೇಶದಲ್ಲಿ ಭರ್ಜರಿ ಜಿಎಸ್ಟಿ ಸಂಗ್ರಹ – ಏಪ್ರಿಲ್ನಲ್ಲಿ 2.10 ಲಕ್ಷ ಕೋಟಿ ಸಂಗ್ರಹ –