• 8 ಸೆಪ್ಟೆಂಬರ್ 2024

ಕಂಬಳ ಲೋಕದ ಉಸೇನ್‌ ಬೋಲ್ಟ್‌ ಸಾಧನೆ ಈಗ ಕೃತಿಯ ರೂಪದಲ್ಲಿ!

 ಕಂಬಳ ಲೋಕದ ಉಸೇನ್‌ ಬೋಲ್ಟ್‌ ಸಾಧನೆ ಈಗ ಕೃತಿಯ ರೂಪದಲ್ಲಿ!
Digiqole Ad

ಕಂಬಳ ಲೋಕದ ಉಸೇನ್‌ ಬೋಲ್ಟ್‌ ಸಾಧನೆ ಈಗ ಕೃತಿಯ ರೂಪದಲ್ಲಿ!

ಕರಾವಳಿಯ ಕ್ರೀಡೆ ಕಂಬಳದ ಕೋಣಗಳ ಓಟಗಾರನ ಸಾಧನೆ ಕುರಿತ ಚೊಚ್ಚಲ ಕೃತಿ ‘ಕಂಬಳ ಶ್ರೀ’ ಹೊರ ಬಂದಿದೆ.

ಕಂಬಳದ ಉಸೇನ್‌ ಬೋಲ್ಟ್‌ ಎಂದೇ ಹೆಸರಾದ ಮಿಜಾರು ಅಶ್ವತ್ಥಪುರದ ಶ್ರೀನಿವಾಸ್‌ ಗೌಡ (Mijar Srinivas Gowda) ಈಗ ಪುಸ್ತಕ ರೂಪದಲ್ಲಿ ಓದುಗರಿಗೆ ತಲುಪಲಿದ್ದಾರೆ. ಕಂಬಳ ಓಟದಲ್ಲಿ ವಿನೂತನ ದಾಖಲೆ ಮೂಲಕ ರಾಷ್ಟ್ರೀಯ ಮಧ್ಯಮಗಳಲ್ಲಿ ಚರ್ಚಾ ಕೇಂದ್ರ ಬಿಂದುವಾಗಿದ್ದ ಶ್ರೀನಿವಾಸ್‌ ಗೌಡ, ಕಂಬಳ (Kambala) ಕ್ರೀಡೆಗೂ ಹೊಸ ಭಾಷ್ಯ ಬರೆಯುವಂತೆ ಮಾಡಿದ್ದರು. ಇದೀಗ ಶ್ರೀನಿವಾಸ್‌ ಗೌಡ ಅವರ ಕಂಬಳ ಸಾಧನೆ ಆಧರಿಸಿದ ‘ಕಂಬಳ ಶ್ರೀ’ (Kambala Sri) ಅನ್ನೋ ಪುಸ್ತಕ ಬಿಡುಗಡೆ ಕಂಡಿದೆ.

ಪತ್ರಕರ್ತೆ ಬರೆದ ಪ್ರಥಮ ಕೃತಿ!

‘ಕಂಬಳ ಶ್ರೀ’ ಕೃತಿಯು ಪತ್ರಕರ್ತೆ, ಮೂಡುಬಿದಿರೆಯ ಪ್ರೇಮಶ್ರೀ ಕಲ್ಲಬೆಟ್ಟು ಅವರ ಚೊಚ್ಚಲ ಕೃತಿಯೂ ಆಗಿದೆ. ಈ ಪುಸ್ತಕದ ಕೇಂದ್ರ ಬಿಂದು ಶ್ರೀನಿವಾಸ್ ಗೌಡ ಅವರ 34 ವರ್ಷದ ಹುಟ್ಟುಹಬ್ಬದ ದಿನವೇ ಈ ಕೃತಿಯನ್ನ ಬಿಡುಗಡೆಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪುಸ್ತಕವು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಪ್ರಥಮ ಪುಸ್ತಕ

ಮೊಟ್ಟ ಮೊದಲ ಬಾರಿಗೆ ಕಂಬಳದ ಕೋಣಗಳ ಓಟಗಾರ ಕೃತಿ ಬಿಡುಗಡೆ ಆಗಿದೆ. ಈ ಕೃತಿಯಲ್ಲಿ ಮಿಜಾರು ಶ್ರೀನಿವಾಸ್‌ ಗೌಡ ಅವರ ಪರಿಶ್ರಮ ಹಾಗೂ ಜೀವನ ಶೈಲಿಯನ್ನು ಓದುಗರ ಮುಂದಿಡಲಾಗಿದೆ. ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತರೂ ಆಗಿರುವ ಮಿಜಾರು ಶ್ರೀನಿವಾಸ್‌ ಗೌಡ ಅವರು, ಈ ಹಿಂದೆ ಆಭರಣ ಮಳಿಗೆಯ ರೂಪದರ್ಶಿ ಆಗಿಯೂ ಗಮನ ಸೆಳೆದಿದ್ದರು.

Digiqole Ad

ಈ ಸುದ್ದಿಗಳನ್ನೂ ಓದಿ