• 8 ಸೆಪ್ಟೆಂಬರ್ 2024

ಪುತ್ತೂರು ತಾಲೂಕು ಚಿಕ್ಕಮುಡ್ನೂರಿನ ಅಡ್ಲಿ ಮಜಲಿನಲ್ಲಿ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ

 ಪುತ್ತೂರು ತಾಲೂಕು ಚಿಕ್ಕಮುಡ್ನೂರಿನ ಅಡ್ಲಿ ಮಜಲಿನಲ್ಲಿ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ
Digiqole Ad

ಪುತ್ತೂರು ತಾಲೂಕು ಚಿಕ್ಕಮುಡ್ನೂರಿನ ಅಡ್ಲಿ ಮಜಲಿನಲ್ಲಿ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ

ಶ್ರೀಮತಿ ಸಂಧ್ಯಾರಾಣಿ ಮತ್ತು ಶ್ರೀ ರಾಜು ಶೆಟ್ಟಿ ,ಕು. ಸಾಯಿಲಕ್ಷ್ಮಿ ಇವರ ಆತಿಥ್ಯದಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ 30ನೇ ವರ್ಷದ ಸೇವಾರ್ಥವಾಗಿ *ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ* ಯಕ್ಷಗಾನ ಬಯಲಾಟವನ್ನು (ಕಾಲಮಿತಿ)ಆಡಿ ತೋರಿಸಲಿರುವರು

ದಿನಾಂಕ : 26-02-2024ನೇ ಸೋಮವಾರ ಸಂಜೆ ಗಂಟೆ 5.45 ರಿಂದ ರಾತ್ರಿ ಗಂಟೆ 12.00ರ ವರೆಗೆ ಪುತ್ತೂರು ತಾಲೂಕು ಚಿಕ್ಕ ಮುಡ್ನೂರು ಗ್ರಾಮದ ಅಡ್ಲಿಮಜಲು ಎಂಬಲ್ಲಿ ಅಲಂಕರಿಸಿರುವ ವಿದ್ಯುದ್ದೀಪಾಲಂಕೃತವಾದ ಭವ್ಯ ರಂಗ ಮಂಟಪದಲ್ಲಿ ವತಿಯಿಂದ ಸೇವಾ ಯಕ್ಷಗಾನ ಬಯಲಾಟ ನಡೆಯಲಿದೆ ಸಂಜೆ ಗಂಟೆ 5.30ಕ್ಕೆ ಚೌಕಿಯಲ್ಲಿ ನಡೆಯುವ ಶ್ರೀದೇವಿಯ ನಂತರ ರಾತ್ರಿ ಗಂಟೆ 8:00ಕ್ಕೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ಆ ಪ್ರಯುಕ್ತ ತಾವೆಲ್ಲರೂ ಆಗಮಿಸಿ ಶ್ರೀ ದೇವಿಯ ಸಿರಿಪುಡಿ ಗಂಧಪ್ರಸಾದವನ್ನು ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಬೇಕೆಂದು ಸೇವಾದಾರರಾದಾ ಶ್ರೀಮತಿ ಸಂಧ್ಯಾರಾಣಿ ಮತ್ತು ಶ್ರೀ ರಾಜು ಶೆಟ್ಟಿ,ಕು.ಸಾಯಿಲಕ್ಷ್ಮಿ ಇವರುಗಳು ವಿನಂತಿಸಿಕೊಂಡಿದ್ದಾರೆ . ಸಂಜೆ ಗಂಟೆ 5.30ಕ್ಕೆ ಚೌಕಿಯಲ್ಲಿ ನಡೆಯುವ ಶ್ರೀದೇವಿಯ ಪೂಜೆಗೆ ಹೂ ಮತ್ತು ಹಣ್ಣುಕಾಯಿಗಳನ್ನು ಒಪ್ಪಿಸಲು ಭಕ್ತಾದಿಗಳಿಗೆ ಅವಕಾಶವಿರುತ್ತದೆ ಸೇವಾರ್ಥಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Digiqole Ad

ಈ ಸುದ್ದಿಗಳನ್ನೂ ಓದಿ