• 27 ಜುಲೈ 2024

ಹೊಟ್ಟೆಯೊಳಗೆ ಜೀವಂತ ಮೀನು!!!

 ಹೊಟ್ಟೆಯೊಳಗೆ ಜೀವಂತ ಮೀನು!!!
Digiqole Ad

ಹೊಟ್ಟೆಯೊಳಗೆ ಜೀವಂತ ಮೀನು!!!

ಕೆಲವು ಬಾರಿ ಎಷ್ಟು ವಿಚಿತ್ರ ಘಟನೆಗಳು ನಮ್ಮ ನಡುವೆ ನಡೆಯುತ್ತವೆ ಅಂದ್ರೆ ನಾವದನ್ನು ನಂಬಲು ಸಾಧ್ಯವಾಗುವುದಿಲ್ಲ. ನಮ್ಮ ದೇಹದಲ್ಲಿ ವಿಚಿತ್ರ ವಸ್ತುಗಳು ಸಿಗುವುದು. ವೈದ್ಯರು ಎಕ್ಸ್‌ರೇ ಮೂಲಕ ತಿಳಿದು ಅದನ್ನು ಹೊರತೆಗೆಯುವುದು ನಡೆಯುತ್ತಲೇ ಇದೆ. ಈಗಲೂ ಇಂತಹ ವಿಚಿತ್ರ ಘಟನೆಯೊಂದು ನಡೆದಿದೆ.

ಈ ಸುದ್ದಿ ಓದಿದ್ದೀರಾ?:ತುಮಕೂರಿನಲ್ಲಿ ಸುಟ್ಟು ಕರಕಲಾದ ಕಾರು ಪತ್ತೆ; ದಕ್ಷಿಣ ಕನ್ನಡಕ್ಕೆ ಸೇರಿರಬಹುದು ಎಂಬ ಬಿಗು ಅನುಮಾನ!

ವಿಯೆಟ್ನಾಂ ದೇಶದ ಉತ್ತರದ ಕ್ವಾಂಗ್ ನಿನ್ಹ್ ಪ್ರಾಂತ್ಯದಲ್ಲಿ 34 ವರ್ಷದ ವ್ಯಕ್ತಿಯೊಬ್ಬರು ತೀವ್ರವಾದ ಹೊಟ್ಟೆ ನೋವು ಎದುರಿಸಿದ್ದರು. ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷೆಗೊಳಪಡಿಸಿದಾಗ ಅಚ್ಚರಿಗೊಳಗಾದರು. ಹೈ ಹಾ ಜಿಲ್ಲೆಯ ವೈದ್ಯಕೀಯ ಕೇಂದ್ರದ ವೈದಯರು ಎಕ್‌ರೇ ಮೂಲಕ ಪರೀಕ್ಷೆ ನಡೆಸಿದಾಗ ಆತನ ದೇಹದೊಳಗೆ 30 ಸೆಂ.ಮೀಟರ್‌ ಉದ್ದದ ಜೀವಂತ ನೀರಿನಲ್ಲಿ ವಾಸಿಸುವ ಒಂದು ಜಾತಿಯ ಮೀನು ಕಂಡುಬಂದಿದೆ. ಹೌದು ನೀವು ನಂಬಲು ಸಾಧ್ಯವಿಲ್ಲದ ಘಟನೆ ಇದು. ಈಲ್ ಜಾತಿ ಮೀನುಗಳು ಮನುಷ್ಯರಿಗೆ ಸಾವು ಸಹ ತರಬಹುದು. ಇವು ಪೆರಿಟೋನಿಟಿಸ್ ಎಂಬ ಮಾರಣಾಂತಿಕ ಸ್ಥಿತಿಯನ್ನು ಉಂಟುಮಾಡುತ್ತವೆ. ಹೀಗಾಗಿ ಆತನಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವುದು ಅನಿವಾರ್ಯವಾಗಿತ್ತು.

ಈ ಮೀನನ್ನು ತೆಗೆದುಹಾಕಲು ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮನುಷ್ಯನ ಹೊಟ್ಟೆಯೊಳಗೆ ಸುಮಾರು 30 ಸೆಂ.ಮೀ ಉದ್ದದ ಜೀವಂತ ಮೀನು ಇರುವುದು ಕಂಡು ವೈದ್ಯರು ಆಶ್ಚರ್ಯಚಕಿತರಾದರು. ಮೀನು ಆತನ ಗುದನಾಳದ ಮೂಲಕ ಪ್ರವೇಶಿಸಿರಬಹುದು ಮತ್ತು ಅವನ ಕರುಳಿನ ಮೂಲಕ ಪ್ರಯಾಣಿಸಿದೆ ಎಂದು ನಂಬಲಾಗಿದೆ, ಇದು ಕರುಳಿನಲ್ಲಿ ರಂದ್ರವನ್ನು ಉಂಟುಮಾಡಿದೆ.

ಮೀನು ಇರುವುರು ತಿಳಿಯುತ್ತಿದ್ದಂತೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಆತ ಆಸ್ಪತ್ರೆಗೆ ಬರುವ ಮುನ್ನ ಆರೋಗ್ಯದಲ್ಲಾದ ಬದಲಾವಣೆ ಗುರುತಿಸಿದ್ದಾನೆ. ಉದರದಲ್ಲಿ ಸಹಿಸಲಾಗಷ್ಟು ನೋವು ಕಂಡುಬಂದಿದೆ. ಇದು ಕರುಳಿನಲ್ಲಿ ಆಗಿರುವ ರಂಧ್ರವೂ ಕಾರಣವಾಗಿದೆ. ಹೀಗಾಗಿ ಶಸ್ತ್ರ ಚಿಕಿತ್ಸೆಯ ವೇಳೆ ಕರುಳಿನಲ್ಲಾದ ಗಾಯದ ಭಾಗವನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ. ಇದಲ್ಲದಿದ್ದರೆ ಈ ಸೋಂಕು ಇಡೀ ಕರುಳಿಗೆ ಹರಡಿ ಬಹು ಬೇಗ ಆತನಿಗೆ ಸಾವು ಸಹ ತರುವ ಸಂಭವವಿರುತ್ತದೆ.

ಒಂದು ವಿಶೇಷ ಜಾತಿಯ ಮೀನು (ಈಲ್‌ಗಳು) ನೀರಿನಲ್ಲಿ ವಾಸಿಸುವ ಜೀವಿಗಳು, ಈ ಜಾತಿಯಲ್ಲಿ ವಿದ್ಯುತ್‌ ಉತ್ಪಾದಿಸುವ ಈಲ್‌ಗಳು ಸಹ ಇವೆ. ಆದರೆ ಅವು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಆದರೆ ಈತನ ದೇಹದೊಳಗೆ ಈಲ್ ಹೇಗೆ ಸೇರಿಕೊಂಡಿತು ಎಂಬುದೇ ನಿಗೂಢವಾಗಿ ಉಳಿದಿದೆ. ಆತನಿಗೂ ಸಹ ಈ ಬಗ್ಗೆ ಅರಿವಿಲ್ಲ. ಆದರೆ ಗುದದ್ವಾರದ ಮೂಲಕ ಸೇರಿರುವ ಸಾಧ್ಯತೆಯೇ ಹೆಚ್ಚಾಗಿದೆ. ಇನ್ನೂ ಅಚ್ಚರಿ ಎಂದರೆ ಅದು ಆತನ ದೇಹದೊಳಗೆ ಇದ್ದರೂ ಹೊರತೆಗೆಯುವಾಗ ಜೀವಂತವಾಗಿತ್ತು.

ಸದ್ಯ ಆತ ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾನೆ. ಇದೊಂದು ಅಸಾಧಾರಣ ಪ್ರಕರಣವಾಗಿದೆ ಎಂದು ಸ್ಥಳೀಯ ಮಾಧ್ಯಮಗಳಿಗೆ ಡಾ. ಫಾಮ್ ಮಾನ್ ಹಂಗ್ ಹೇಳಿದ್ದಾರೆ. ‘ಗುದನಾಳವು ಹೆಚ್ಚು ಸೂಕ್ಷ್ಮ ಅಂಗವಾಗಿದೆ. ಈ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸಬೇಕಿದೆ. ಆತನಿಗೆ ಮಾಡಿರುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ?:ಸೊಸೆಯ ಕತ್ತು ಸೀಳಿ ಬಳಿಕ ಮಾವ ಆತ್ಮಹತ್ಯೆ

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ