• 27 ಜುಲೈ 2024

ಗಡ್ಡ, ಮೀಸೆ ಬಿಟ್ಟದ್ದ 80 ಉದ್ಯೋಗಿಗಳು, ಕೆಲಸದಿಂದಲೇ ವಜಾಗೊಳಿಸಿದ ಕಂಪನಿ.!

 ಗಡ್ಡ, ಮೀಸೆ ಬಿಟ್ಟದ್ದ 80 ಉದ್ಯೋಗಿಗಳು, ಕೆಲಸದಿಂದಲೇ ವಜಾಗೊಳಿಸಿದ ಕಂಪನಿ.!
Digiqole Ad

ಗಡ್ಡ, ಮೀಸೆ ಬಿಟ್ಟದ್ದ 80 ಉದ್ಯೋಗಿಗಳು, ಕೆಲಸದಿಂದಲೇ ವಜಾಗೊಳಿಸಿದ ಕಂಪನಿ.!

ಹಿಮಾಚಲ ಪ್ರದೇಶ: ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಮೀಸೆ, ಗಡ್ಡ ಬಿಟ್ಟಿದ್ದಾರೆ ಎಂಬ ನೆಪ ಹೇಳಿ ಎಲ್ಲರನ್ನೂ ಹೊರಗೆ ಕಳುಹಿಸಿ ಕೆಲಸದಿಂದ ವಜಾಗೊಳಿಸಿದ ಘಟನೆ ವರದಿಯಾಗಿದೆ. ಹಿಮಾಚಲ ಪ್ರದೇಶದ ಪರ್ವಾನೂ ಇಂಡಸ್ಟ್ರಿಯಲ್ ಏರಿಯಾದ ಕಂಪನಿಯೊಂದಲ್ಲಿ ಈ ಘಟನೆ ಸಂಭವಿಸಿದೆ. ಕಂಪನಿಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವುದರ ಹಿಂದೆ ಬಲವಾದ ಕಾರಣವಿರುತ್ತದೆ. ಆದರೆ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಕಂಪನಿಯೊಂದು ವಿಚಿತ್ರ ಕಾರಣಕ್ಕೆ 80 ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದೆ. ಮೇ 1ರ ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ಈ ವಿಷಾದನೀಯ ಘಟನೆ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಓದಿದ್ದೀರಾ.?ಕೋವಿಶೀಲ್ಡ್ ಲಸಿಕೆಯು ಹೃದಯಾಘಾತಕ್ಕೆ ಕಾರಣವಾಗಬಹುದು : ಅಸ್ಟ್ರಾಜೆನೆಕಾ ಕಂಪನಿ ಹೇಳಿಕೆ.

ಹಿಮಾಚಲ ಪ್ರದೇಶದ ಪರ್ವಾನೂ ಇಂಡಸ್ಟ್ರಿಯಲ್ ಏರಿಯಾದ ಕಂಪನಿಯೊಂದು ಕೆಲವು ವರ್ಷಗಳ ಹಿಂದೆ 80 ಕಾರ್ಮಿಕರನ್ನು ವಜಾಗೊಳಿಸಿತ್ತು. ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಮೀಸೆ, ಗಡ್ಡ ಬಿಟ್ಟಿದ್ದಾರೆ ಎಂಬ ನೆಪ ಹೇಳಿ ಎಲ್ಲರನ್ನೂ ಹೊರಗೆ ಕಳುಹಿಸಿದ್ದಾರೆ. ಕಾರ್ಮಿಕರು ಆಡಳಿತ ಮಂಡಳಿಯೊಂದಿಗೆ ಮಾತನಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ಕಾರ್ಮಿಕರು ಕಂಪನಿ ಎದುರು ಧರಣಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದೆ. ಗಡ್ಡ, ಮೀಸೆ ತೆಗೆದರೆ ಮಾತ್ರ ಡ್ಯೂಟಿಗೆ ಸೇರಿಸಲಾಗುವುದು, ಕ್ಲೀನ್ ಶೇವ್ ಮಾಡಿಕೊಂಡು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕಂಪನಿ ಷರತ್ತು ಹಾಕಿದೆ. ಕಾರ್ಮಿಕರು ಆರಂಭದಲ್ಲಿ ಒಪ್ಪಲಿಲ್ಲ. ಆ ನಂತರ ಮಾಲೀಕರು ಷರತ್ತಿಗೆ ಮಣಿದು ಗಡ್ಡ ಮೀಸೆ ತೆಗೆದಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ತನ್ನ ಕಾರಣಿಕವನ್ನು ಮತ್ತೊಮ್ಮೆ ಸಾಬೀತು ಪಡಿಸಿದ ತಾಯಿ ರಕ್ತೇಶ್ವರಿ

ಸೋಲನ್‌ ಜಿಲ್ಲಾಧಿಕಾರಿ ಮನಮೋಹನ್ ಶರ್ಮಾ ಕಾರ್ಮಿಕರನ್ನು ವಜಾಗೊಳಿಸಿದ ಘಟನೆಯ ಬಗ್ಗೆ ವಿಶೇಷ ಗಮನ ಹರಿಸಿದ್ದರು. ಗಡ್ಡ ಮತ್ತು ಮೀಸೆ ಬೆಳೆಸಿದ್ದಕ್ಕಾಗಿ 80 ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವುದು ಅಮಾನವೀಯ. ಘಟನೆಯ ಬಗ್ಗೆ ತನಿಖೆಗೆ ನಡೆಸಲು ಆದೇಶ ನೀಡಿದ್ದಾರೆ. ಕಾರ್ಮಿಕರನ್ನು ವಜಾಗೊಳಿಸಿರುವುದು ನಿಜವೆಂದು ಕಂಡುಬಂದಲ್ಲಿ ನಿಯಮಾನುಸಾರ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಕಂಪನಿಯು ಕಾರ್ಮಿಕರ ವಿರುದ್ಧ ಏಕೆ ಇಂತಹ ಕ್ರಮ ಕೈಗೊಂಡಿದೆ ಎಂಬುದನ್ನು ತನಿಖೆಯಿಂದ ಬಹಿರಂಗಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ