• 8 ಸೆಪ್ಟೆಂಬರ್ 2024

ಹಾವು ಕಚ್ಚಿ ಮೃತಪಟ್ಟ ಯುವಕನ ಶವವನ್ನು ಗಂಗೆಯಲ್ಲಿ ಮುಳುಗಿಸಿಟ್ಟ ಪೋಷಕರು.!

 ಹಾವು ಕಚ್ಚಿ ಮೃತಪಟ್ಟ ಯುವಕನ ಶವವನ್ನು ಗಂಗೆಯಲ್ಲಿ ಮುಳುಗಿಸಿಟ್ಟ ಪೋಷಕರು.!
Digiqole Ad

ಹಾವು ಕಚ್ಚಿ ಮೃತಪಟ್ಟ ಯುವಕನ ಶವವನ್ನು ಗಂಗೆಯಲ್ಲಿ ಮುಳುಗಿಸಿಟ್ಟ ಪೋಷಕರು.!

ಬುಲಂದ್‌ಶಹ‌ರ್ ಮೇ.04: ಹಾವು ಕಚ್ಚಿ ಮೃತಪಟ್ಟ ವ್ಯಕ್ತಿಯ ಶವವನ್ನು ಪೋಷಕರು ಶವವನ್ನು ಗಂಗೆಯಲ್ಲಿ ಎರಡು ದಿನಗಳ ಕಾಲ ಮುಳುಗಿಸಿಟ್ಟ ವಿಚಿತ್ರ ಘಟನೆ ಬುಲಂದಶಹರ್‌ನಲ್ಲಿ ವರದಿಯಾಗಿದೆ. ಮೋಹಿತ್ ಕುಮಾರ್ ಎಂಬ 22 ವರ್ಷದ ಯುವಕ ಬುಲೆಂದ್‌ಶಹರ್ನ ಅನುಪ್‌ಶಹರ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬರುವ ಜೈರಾಮಪುರ ಕುದೆನಾ ಗ್ರಾಮದ ನಿವಾಸಿಯಾಗಿದ್ದು,

ಈ ಸುದ್ದಿಯನ್ನು ಓದಿದ್ದೀರಾ.,?ಮಲಯಾಳಂ ಚಿತ್ರರಂಗದ ಸಂಗೀತ ನಿರ್ದೇಶಕ ಕೆ.ಜಿ. ಜಯನ್ ನಿಧನ

ಏಪ್ರಿಲ್ 26 ರಂದು ಲೋಕಸಭಾ ಚುನಾವಣೆಗೆಂದು ಬಂದಿದ್ದ ಈತ ಮತ ಚಲಾಯಿಸಿದ ಬಳಿಕ ಸಂಜೆ ವೇಳೆ ಮನೆ ಸಮೀಪದ ಪಾರ್ಕೊಂದರ ಬಳಿ ಹೋಗಿ ಕುಳಿತಿದ್ದಾಗ ಆತನಿಗೆ ಹಾವು ಕಚ್ಚಿತ್ತು, ಕೂಡಲೇ ಗ್ರಾಮಸ್ಥರು ವಿಷ ದೇಹದ ಬೇರೆ ಭಾಗಕ್ಕೆ ಹೋಗದಿರಲು ಹಾವು ಕಚ್ಚಿದ ಜಾಗದ ಪಕ್ಕದಲ್ಲಿ ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಮಾರ್ಗಮಧ್ಯೆ ಯುವಕ ಮಾತು ನಿಲ್ಲಿಸಿದ್ದ, ಆತನನ್ನು ನಗರದ ರಾಣಾ ಆಸ್ಪತ್ರೆಗೆ ಕರೆದೊಯ್ದವು. ಆದರೆ ಅಲ್ಲಿ ವೈದ್ಯರು ಆತನನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದು, ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ಯುವಕ ಉಸಿರು ನಿಲ್ಲಿಸಿದ್ದಾನೆ ಎಂದು ಯುವಕನ ಸಂಬಂಧಿಕರೊಬ್ಬರು ಹೇಳಿದ್ದಾಗಿ ತಿಳಿದು ಬಂದಿದೆ. ಇದಾದ ನಂತರ ಯುವಕನ ಸಂಬಂಧಿಕರು ಆತನನ್ನು ಹಳ್ಳಿಮದ್ದು ನೀಡುವವರ ಬಳಿ ಕರೆದೊಯ್ದಿದ್ದಾರೆ. ಆದರೆ ಅಲ್ಲೂ ಅವರು ಯುವಕ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಜೊತೆಗೆ ಅವರು ಶವವನ್ನು ಗಂಗಾನದಿಗೆ ಹಾಕಿದರೆ ವಿಷ ಹೊರಟು ಹೋಗುತ್ತದೆ ಎಂದು ಹೇಳಿದ್ದರು.

 ಈ ಸುದ್ದಿಯನ್ನು ಓದಿದ್ದೀರಾ.,? ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಾರ್ಚ್‌ 31ರಿಂದ ಮಳೆಯಾಗುವ ಸಂಭವ; ಹವಾಮಾನ ಇಲಾಖೆ ಮುನ್ಸೂಚನೆ

ಅದರಂತೆ ನಾವು ಶವವನ್ನು ಗಂಗಾನದಿಯಲ್ಲಿ ಇಟ್ಟಿದ್ದೇವೆ ಎಂದು ಮೃತನ ಸಂಬಂಧಿಯೊಬ್ಬರು ವಿವರಿಸಿದ್ದಾರೆ. ಪವಾಡವಾಗಿ ಮಗ ಬದುಕಿ ಬರುವನೋ ಎಂಬ ನಂಬಿಕೆಯಲ್ಲಿ ಯುವಕ ಮೋಹಿತ್ ಶವವನ್ನು ಗಂಗಾ ನದಿಯ ತೀರದಲ್ಲಿದ್ದ ಕಬ್ಬಿಣದ ಬೇಲಿಯ ಸರಳುಗಳಿಗೆ ಕಟ್ಟಿ ನೀರಿನೊಳಗೆ ಮುಳುಗಿಸಿಟ್ಟಿದ್ದಾರೆ. ಆದರೆ ಯುವಕನ ದೇಹದಲ್ಲಿ ಯಾವುದೇ ಬದಲಾವಣೆ ಕಾಣದೇ ಹೋದಾಗ ಪೋಷಕರು ಆತನ ದೇಹವನ್ನು ನೀರಿನಿಂದ ಮೇಲೇತ್ತಿ ಶವ ಸಂಸ್ಕಾರ ನಡೆಸಿದ್ದಾರೆ ಎಂದು ಹೇಳಲಾಗಿದೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ