• 27 ಜುಲೈ 2024

ಕಾಣಿಯೂರು: ಶ್ರೀ ಸತ್ಯನಾರಾಯಣ ಪೂಜೆ ಉದ್ಯಾಪನೆ, ಏಕಾಹ ಭಜನೆ,ಭಜನಾ ಮಹಾ ಮಂಗಳೋತ್ಸವ- ಧಾರ್ಮಿಕ ಸಭೆ.

 ಕಾಣಿಯೂರು: ಶ್ರೀ ಸತ್ಯನಾರಾಯಣ ಪೂಜೆ ಉದ್ಯಾಪನೆ, ಏಕಾಹ ಭಜನೆ,ಭಜನಾ ಮಹಾ ಮಂಗಳೋತ್ಸವ- ಧಾರ್ಮಿಕ ಸಭೆ.
Digiqole Ad

ಕಾಣಿಯೂರು: ಶ್ರೀ ಸತ್ಯನಾರಾಯಣ ಪೂಜೆ ಉದ್ಯಾಪನೆ, ಏಕಾಹ ಭಜನೆ,ಭಜನಾ ಮಹಾ ಮಂಗಳೋತ್ಸವ- ಧಾರ್ಮಿಕ ಸಭೆ.

ಕಾಣಿಯೂರು:  ಬೆಳಿಗ್ಗೆ ಮತ್ತು ಸಂಜೆಯ ವೇಳೆ ಈ ಎರಡು ಹೊತ್ತು ದೇವರನ್ನು ಭಕ್ತಿಯಿಂದ ಪೂಜಿಸುವುದರಿಂದ ನಮ್ಮ ಮನಸ್ಸನ್ನು ಶುದ್ಧಿಯಾಗಿಸಲು ಸಾಧ್ಯ, ಜೀವನದಲ್ಲಿ ಆತ್ಮಶಾಂತಿಯಿಂದ ಮತ್ತು ನೆಮ್ಮದಿಯಿಂದ ಜೀವನ ಮಾಡುವುದಾದರೆ ಅದು ದೇವತಾರಾಧನೆಯಿಂದ ಮಾತ್ರ ಸಾಧ್ಯ ಎಂದು ಶ್ರೀ ಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.

ಈ ಸುದ್ದಿಯನ್ನು ಓದಿದ್ದೀರಾ.?ಸತೀಶ್ ಬಿಳಿಯೂರು ಇವರಿಗೆ ಮ್ಯಾಕ್ಸ್ ಲೈಪ್ ಇನ್ಸೂರೆನ್ಸ್ ರವರ ಕಲಾರತ್ನ ಬಿರುದು.

ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸುವರ್ಣ ಮಹೋತ್ಸವ ಪ್ರಯುಕ್ತ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ವತಿಯಿಂದ ನಡೆದ ,ಏಕಾಹ ಭಜನೆ ,ಭಜನಾ ಮಹಾ ಮಂಗಳೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಇವತ್ತು ಧಾರ್ಮಿಕತೆಯ ಮಹತ್ವ ಗೊತ್ತಿಲ್ಲದೆ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಭಜನೆಯಿಂದ ಭಕ್ತಿ ಭಾವದ ಆರಾಧನೆಯಿಂದ ಮನಃಶಾಂತಿ ಸಿಗುತ್ತದೆ. ನಮ್ಮಲ್ಲಿರುವ ರಾಜಕೀಯ, ಜಾತಿ ವ್ಯವಸ್ಥೆಯನ್ನು ದೇವಸ್ಥಾನದ ಒಳಗೆ ತರದೆ ನಾವೆಲ್ಲಾ ಒಂದೇ ಎಂಬ ಭಾವನೆಯೊಂದಿಗೆ ದೇವರ ಸ್ಮರಣೆಯ ಪುಣ್ಯ ಕಾರ್ಯದಲ್ಲಿ ಭಾಗಿಯಾದಾಗ ನಮ್ಮ ಸನಾತನ ಹಿಂದು ಧರ್ಮ ಉಳಿಯಲು ಸಾಧ್ಯ. ಜೊತೆಗೆ ದೇಗುಲಗಳಲ್ಲಿ ಸಾನಿಧ್ಯ ವೃದ್ಧಿಯಾಗಲು ಸಾಧ್ಯ. ದೇಗುಲಗಳಲ್ಲಿ ಧರ್ಮ ಶಿಕ್ಷಣ ಅರ್ಥಪೂರ್ಣವಾಗಿ ನಡೆದುಕೊಂಡು ಬರಬೇಕು ಎಂದರು. ಮದ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಅವರು ಮಾತನಾಡಿ, ಹಿರಿಯರ ಸಂಪ್ರದಾಯಗಳು ನಡೆದುಕೊಂಡು ಬಂದ ಹಾಗೇ ಪ್ರತಿ ಮನೆ ಮನೆಗಳಲ್ಲಿಯೂ ನಿತ್ಯ ಭಜನೆ ನಡೆಯಬೇಕು. ಈ ನಿಟ್ಟಿನಲ್ಲಿ ಮುಂದಿನ ಪೀಳಿಗೆ ಭಜನೆಗಳಲ್ಲಿ ಭಾಗವಹಿಸುವಂತೆ ಪೋಷಕರು ಮಾಡಬೇಕು. ನಿತ್ಯ ನಿರಂತರ ಭಜನೆಗಳಲ್ಲಿ ಭಾಗಿಯಾದಾಗ, ಭಕ್ತಿಯಿಂದ ದೇವರನ್ನು ಪೂಜಿಸಿದಾಗ ಸ್ವಾತಿಕ ಬದುಕು ನಿರ್ಮಾಣವಾಗುತ್ತದೆ.

ಈ ಸುದ್ದಿಯನ್ನು ಓದಿದ್ದೀರಾ.?2 ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ

ಭಜಾನ ಮಂಡಳಿಗಳು ಸಮಾಜದ ವಿಕಾಸದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿದೆ. ಅವುಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮುಖೇನ ಸಮಾಜದ ಮೂಲೆ ಮೂಲೆಗೂ ಭಜನೆಯ ಮಹತ್ವದ ಸಂದೇಶ ಸಾರಬೇಕೆಂಬ ಚಿಂತನೆಯನ್ನು ಇಟ್ಟುಕೊಳ್ಳಬೇಕು ಎಂದರು. ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ಪುಟ್ಟಣ್ಣ ಗೌಡ ಮುಗರಂಜ ಅಧ್ಯಕ್ಷತೆ ವಹಿಸಿದರು. ಮಂಡಳಿ ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಕೀರ್ತಿಕುಮಾರ್ ಏಳುವೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ ಸ್ವಾಗತಿಸಿ, ಸುವರ್ಣ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪದ್ಮಯ್ಯ ಗೌಡ ಅನಿಲ ವಂದಿಸಿದರು. ಭಜನಾ ಮಂಡಳಿಯ ಉಪಾಧ್ಯಕ್ಷ ಬಾಬು ಮಾದೋಡಿ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಪರಮೇಶ್ವರ ಅನಿಲ ಸಹಕರಿಸಿದರು.

ಕಾರ್ಯಕ್ರಮಗಳು

ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಮತ್ತು ಸುವರ್ಣ ಮಹೋತ್ಸವ ಸಮಿತಿಯ ವತಿಯಿಂದ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸುವರ್ಣ ಸಂಭ್ರಮದ ಪ್ರಯುಕ್ತ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮ, ಸತ್ಯನಾರಾಯಣ ಪೂಜೆ ಉದ್ಯಾಪನೆ,ಏಕಾಹ ಭಜಾನೆ ,ಭಜನಾ ಮಹಾ ಮಂಗಳೋತ್ಸವವು ಬೆಳಿಗ್ಗೆ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭಗೊಂಡು, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಸಿಕೊಟ್ಟರು. ಮದ್ವಾಧೀಶ ವಿಠಲದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಇವರ ನೇತೃತ್ವದ ತಂಡದಿಂದ ಭಕ್ತಿ ಗಾಯನ ನಡೆಯಿತು. ಸಂಜೆ ಭಜನಾ ಮಹಾ ಮಂಗಳೋತ್ಸವ ನಡೆಯಿತು.

ಈ ಸುದ್ದಿಯನ್ನು ಓದಿದ್ದೀರಾ.?ಝೀ ಕನ್ನಡದ ಮಹಾನಟಿ ರಿಯಾಲಿಟಿ ಶೋ ಗೆ ಆರಾಧನಾ ಭಟ್ ಆಯ್ಕೆ

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ