• 8 ಸೆಪ್ಟೆಂಬರ್ 2024

ಹೆಂಡತಿ, ಮಕ್ಕಳ ಸ್ಮರಣಾರ್ಥ ಬಡವರಿಗೆ ಮನೆ ನಿರ್ಮಿಸಿ ಕೊಟ್ಟ ಪತಿ!

 ಹೆಂಡತಿ, ಮಕ್ಕಳ ಸ್ಮರಣಾರ್ಥ ಬಡವರಿಗೆ ಮನೆ ನಿರ್ಮಿಸಿ ಕೊಟ್ಟ ಪತಿ!
Digiqole Ad

ಹೆಂಡತಿ, ಮಕ್ಕಳ ಸ್ಮರಣಾರ್ಥ ಬಡವರಿಗೆ ಮನೆ ನಿರ್ಮಿಸಿ ಕೊಟ್ಟ ಪತಿ!

ವರ್ಷಗಳ ಹಿಂದೆ ಕೊಡಗಿನಲ್ಲಿ ಉಂಟಾದ ಭೂ ಕುಸಿತದಲ್ಲಿ ಜೀವಂತ ಸಮಾಧಿಯಾದ ತನ್ನ ಹೆಂಡತಿ ಮಕ್ಕಳ ಸಾವಿನ ಸ್ಮಾರಕವಾಗಿ ಇಲ್ಲೊಬ್ಬ ವ್ಯಕ್ತಿ ಬಡಜನರಿಗೆ ಮನೆಯನ್ನು ನಿರ್ಮಿಸಿಕೊಟ್ಟು ಮಾದರಿ ಆಗಿದ್ದಾನೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ತೋರಾ ಗ್ರಾಮದ ಪ್ರಭುಕುಮಾರ್ ಎಂಬವರೇ ಈ ವ್ಯಕ್ತಿ. ಪ್ರೀತಿಯ ಹೆಂಡತಿ, ಮುದ್ದಾದ ಎರಡು ಮಕ್ಕಳೊಂದಿಗೆ ದಿನಸಿ ವ್ಯಾಪಾರ ಮಾಡಿಕೊಂಡು, ಚಿಕ್ಕ ತೋಟದಲ್ಲಿ ಬರುವ ಆದಾಯದಿಂದ ನೆಮ್ಮದಿ ಬದುಕು ಕಟ್ಟಿಕೊಂಡಿತ್ತು ಆ ಪುಟ್ಟ ಕುಟುಂಬ.

ಆದರೆ, ವಿಧಿಗೆ ಇವರ ಪ್ರೀತಿಯ ಕಂಡು ಅಸೂಯೆ ಹುಟ್ಟಿತ್ತೋ ಏನೋ ಗೊತ್ತಿಲ್ಲ. 2019 ರಲ್ಲಿ ಭೂಕುಸಿತದ ರೂಪದಲ್ಲಿ ಬಂದ ಜವರಾಯ ಮನೆಯ ಯಜಮಾನ ಪ್ರಭುಕುಮಾರ್ ಅವರನ್ನು ಬಿಟ್ಟು ಅವರ ಹೆಂಡತಿ ಅನಸೂಯ, ಮಕ್ಕಳಾದ ಅಮೃತ, ಅದಿತಿಯನ್ನು ಜೀವಂತ ಸಮಾಧಿ ಮಾಡಿಬಿಟ್ಟಿತ್ತು. ಸದಾ ಬಡವರು, ಕೈಲಾಗದವರ ಸಹಾಯಕ್ಕೆ ತುಡಿಯುತ್ತಿದ್ದ ಅನುಸೂಯ ಅವರ ಆಶಯದಂತೆ ಅದೇ ಗ್ರಾಮದ ಬೋಜು, ಬೊಳ್ಳಚ್ಚಿ ಕುಟುಂಬಕ್ಕೆ ಪ್ರಭುಕುಮಾರ್ ಮನೆಯೊಂದನ್ನು ನಿರ್ಮಿಸಿಕೊಟ್ಟು ಆಶ್ರಯವಾಗಿದ್ದಾರೆ. ಈ ಮೂಲಕ ಪತ್ನಿ ಆಶಯದಂತೆ ತೀರಾ ಬಡತನದ ಬೇಗೆಯಲ್ಲಿ ಬದುಕು ದೂಡುತ್ತಿದ್ದ ಕುಟುಂಬಕ್ಕೆ ಬೆಚ್ಚನೆಯ ಸೂರೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಆ ಮೂಲಕ ತಮ್ಮ ಹೆಂಡತಿ ಮಕ್ಕಳ ಆಶಯಗಳನ್ನು ಈಡೇರಿಸಿದ್ದಾರೆ.

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ