• 8 ಸೆಪ್ಟೆಂಬರ್ 2024

ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನ ನಿರ್ಮಾಣಕ್ಕೆ ಜಮೀನು ಮಂಜೂರು

 ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನ ನಿರ್ಮಾಣಕ್ಕೆ ಜಮೀನು ಮಂಜೂರು
Digiqole Ad

ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನ ನಿರ್ಮಾಣಕ್ಕೆ ಜಮೀನು ಮಂಜೂರು

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ನಿರ್ಮಾಣಕ್ಕೆ ಪುತ್ತೂರು ಕಸಬಾ ಗ್ರಾಮದ ಕೋಟೆಚಾ ಸಭಾಂಗಣದ ಹಿಂಭಾಗದಲ್ಲಿರುವ ಮೌಲಾನ ಆಜಾದ್ ಶಾಲೆಯ ಬಳಿ 9 ಸೆನ್ಸ್ ಜಮೀನನ್ನು ಪುತ್ತೂರ ಸಾರ್ವಜನಿಕ ಸ್ನೇಹಿ ಆಯುಕ್ತರೆಂದು ಜನ ಮೆಚ್ಚುಗೆ ಪಡೆದ ಶ್ರೀ ಗಿರೀಶ್ ನಂದನ್ ಅವರು ಜೂನ್ 6 ರಂದು ಆದೇಶ ಮಾಡಿ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಹೆಸರಿನಲ್ಲಿ ಮಂಜುರು ಮಾಡಿದ್ದಾರೆ.2022ರ ಜೂನ್ ತಿಂಗಳಿನಲ್ಲಿ ಪ್ರಾರಂಭ ಮಾಡಿದ ಈ ಪ್ರಕ್ರಿಯೆಯು ವಿವಿಧ ಸರಕಾರಿ ಕಚೇರಿಯ ನಿಯಮಾನುಸಾರ ಕಡತ ಪರಿಶೀಲನೆಗೊಂಡು ಜಮೀನು ಮಂಜೂರಾದ ಅಧಿಕೃತ ಆದೇಶ ಪತ್ರ ಕೈ ಸೇರಿದೆ ಎಂದು ಕನ್ನಡ ಸಾಹಿತ್ಯ ಅಭಿಮಾನಿಗಳಾದ ತಮಗೆ ತಿಳಿಸಲು ಅತೀವ ಸಂತೋಷ ಪಡುತ್ತೇನೆ.

ಈ ಪ್ರಕ್ರಿಯೆಯು ಸಹಾಯಕ ಆಯುಕ್ತರ ಕಚೇರಿ, ತಹಸಿಲ್ದಾರ್ ಕಚೇರಿ, ಭೂಮಾಪನ ಕಚೇರಿ, ನಗರ ಸಭೆ, ಗ್ರಾಮಚಾವಡಿ ಗ್ರಾಮ ಲೆಕ್ಕಿಗರ ಕಚೇರಿಯ ಸಿಬ್ಬಂದಿಗಳು ಯಾ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಲಂಚ ಬೇಡಿಕೆ ಅಥವಾ ಕಡತ ವಿಲೆಯಲ್ಲಿ ಅಸಡ್ಡೆ, ದುರ್ವರ್ತನೆ ತೋರದೆ ನಗುಮೊಗದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಮಂಜೂರಾಗುವಲ್ಲಿ ಸಹಕರಿಸಿ ದ್ದಾರೆ.

ಜಮೀನು ಮಂಜೂರಾದ ಹಿನ್ನೆಲೆ

ಫೆಬ್ರವರಿ 2022 ರಲ್ಲಿ ಸಾಹಿತ್ಯ ಪರಿಷತ್ತಿನ ಪದ ಸ್ವೀಕಾರ ಮಾಡುವ ಸಮಯದಲ್ಲಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಪರಿಷತ್ತಿನ ಸದಸ್ಯರಾದ ಡಾ. ಸುಧಾರಾವ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ವಿಳಾಸ ಇಲ್ಲ ಅದಕ್ಕೊಂದು ಶಾಶ್ವತವಾದ ವಿಳಾಸವನ್ನು ಕಲ್ಪಿಸಿ ಕೊಡುವಂತೆ ಅಂದಿನ ಶಾಸಕರಾದ ಶ್ರೀ ಸಂಜೀವ ಮಠoದೂರು ಅವರ ಗಮನ ಸೆಳೆದಿದ್ದರು ಸ್ಥಳದಲ್ಲಿಯೇ ಸಾಹಿತ್ಯ ಪರಿಷತ್ತಿಗೆ ಸ್ಥಳವನ್ನು ಮಂಜೂರು ಮಾಡುವ ಭರವಸೆಯನ್ನು ಶಾಸಕರು ನೀಡಿ ಸ್ಥಳವನ್ನು ತೋರಿಸಿ ಅಧಿಕಾರಿಗಳಿಗೆ ಜಮೀನು ಮಂಜೂರು ಮಾಡುವಂತೆ ಸೂಚಿಸಿದ್ದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ ಶಿವರಾಮ ಕಾರಂತರ ಕರ್ಮ ಭೂಮಿ ಪುತ್ತೂರಿನಲ್ಲಿ ಕನ್ನಡ ಭಾಷಾ ಸಾಹಿತ್ಯ ಬೆಳವಣಿಗೆಗಾಗಿ ಈಗಾಗಲೇ ಅನೇಕ ಸಾಹಿತಿಗಳು ತಮ್ಮ ತಮ್ಮ ಕೊಡುಗೆಗಳನ್ನು ನೀಡಿ ರಾಜ್ಯ – ರಾಷ್ಟ್ರ ಮಟ್ಟದಲ್ಲಿ ಪುತ್ತೂರಿನ ಹೆಸರನ್ನು ಬೆಳಗುವಂತೆ ಮಾಡಿರುತ್ತಾರೆ.

 

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಸುಮಾರು 30 ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತದೆ. ಶ್ರೀ ವಿಠಲ ಪುತ್ತೂರು, ಡಾ.ತಾಳ್ತಾಜೆ ವಸಂತ್ ಕುಮಾರ್, ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ಪ್ರೊ. ವಿ ಬಿ ಆರ್ತಿಕಜೆ, ಶ್ರೀ ಜಿ.ಎಲ್ ಆಚಾರ್ಯ, ಶ್ರೀ ಎನ್ ಸುಬ್ರಮಣ್ಯಂ, ಡಾ. ವರದರಾಜ ಚಂದ್ರಗಿರಿ, ಬಿ ಐತಪ್ಪ ನಾಯ್ಕ್ ಮುಂತಾದವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಯನ್ನು ನೀಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸಿದ್ದಾರೆ.ಕನ್ನಡ ಭವನಕ್ಕೆ ಸ್ಥಳ ಮಂಜೂರು ಮಾಡುವಲ್ಲಿ ಸಹಕರಿಸಿದ ಸರ್ವರಿಗೂ ಧನ್ಯವಾದಗಳು.ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತಾ.. ವಂದನೆಗಳೊಂದಿಗೆ..

 

ಪುತ್ತೂರು ಉಮೇಶ್ ನಾಯಕ್

ಅಧ್ಯಕ್ಷರು

ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ

Digiqole Ad

NEWS TEAM

ಈ ಸುದ್ದಿಗಳನ್ನೂ ಓದಿ