• 26 ಜುಲೈ 2024

ಅಕ್ರಮ ಮರಳುಗಾರಿಕೆ ಮಾಫಿಯಾ ವಿರುದ್ಧ ಕೆರಳಿದ ಗ್ರಾಮಸ್ಥರು..!

 ಅಕ್ರಮ ಮರಳುಗಾರಿಕೆ ಮಾಫಿಯಾ ವಿರುದ್ಧ ಕೆರಳಿದ ಗ್ರಾಮಸ್ಥರು..!
Digiqole Ad

ಅಕ್ರಮ ಮರಳುಗಾರಿಕೆ ಮಾಫಿಯಾ ವಿರುದ್ಧ ಕೆರಳಿದ ಗ್ರಾಮಸ್ಥರು..!


ಕಡಬ : ಅಕ್ರಮ ಮರಳುಗಾರಿಕೆಯ ಮಾಫಿಯಾಗಳು ಕೃಷಿಕರ ನೀರಿಗೆ ಕನ್ನ ಹಾಕಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಾಂತಿಮುಗೇರು ಎಂಬಲ್ಲಿ ನಡೆದಿದ್ದು ಮರಳು ಮಾಫಿಯಾದ ವಿರುದ್ದ ಇಡೀ ಊರಿನ ಜನರು ಕೆರಳಿ ಕೆಂಡವಾಗಿದ್ದಾರೆ. ಶಾಂತಿಮೊಗರಿನಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಕೃಷಿ ತೋಟಕ್ಕೆ ಭರಪೂರ ನೀರು ತುಂಬಿತ್ತು.

ಈ ಸುದ್ದಿಯನ್ನು ಓದಿದ್ದೀರಾ.?₹100ರೂ ಹಳೆಯ ನೋಟು ಹಿಂಪಡೆಯಲು ಆರ್‌ಬಿಐ ಮಹತ್ವದ ನಿರ್ಧಾರ

ಇದನ್ನು ಸ್ಥಳೀಯ ಅಕ್ರಮ ಮರಳುಗಾರಿಕೆ ನಡೆಸುವ ಉದ್ದೇಶದಿಂದ ರಾತ್ರೋ ರಾತ್ರಿ ಕೆಲ ಕಿಡಿಗೇಡಿಗಳು ಅಣೆಕಟ್ಟಿನ ಹಲಗೆಯನ್ನು ಸರಿಸಿದ್ದಾರೆ. ಇದರಿಂದ ಇದ್ದ ನೀರೆಲ್ಲ ಬತ್ತಿ ಹೋಗಿದೆ. ಅಣೆಕಟ್ಟಿನಲ್ಲಿ ಶೇಖರಣೆಗೊಂಡ ನೀರು ಶಾಂತಿಮೊಗರು ಹಾಗು ಇತರ ಎಂಟು ಗ್ರಾಮಗಳ ಕೃಷಿ ತೋಟಗಳಿಗೆ ಇದರಿಂದ ನೀರು ಪೂರೈಕೆಯಾಗುತಿತ್ತು. ಆದರೆ ಮರಳುಗಾರಿಕೆ ನಡೆಸುತ್ತಿದ್ದ ವ್ಯಕ್ತಿಗಳಿಗೆ ಅಣೆಕಟ್ಟಿನ ನೀರು ಸಮಸ್ಯೆಯಾದ ಕಾರಣಕ್ಕೆ ಅಣೆಕಟ್ಟಿನ ಹಲಗೆಯನ್ನು ತೆಗೆದು ನೀರನ್ನು ಖಾಲಿ ಮಾಡಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಎಮರ್ಜಿಂಗ್ ಏಷ್ಯಾಕಪ್: ಭಾರತ ಸೇರಿದಂತೆ 7 ತಂಡಗಳು ಪ್ರಕಟ

ಮರಳುಗಾರಿಕೆ ಮಾಡುತ್ತಿರುವ ವ್ಯಕ್ತಿಗಳು ನದಿ ಪಾತ್ರದಲ್ಲಿ ರಸ್ತೆಯನ್ನು ನಿರ್ಮಿಸಿ ಜೆಸಿಬಿ ಹಾಗು ಪಂಪ್ ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದ್ದರು. ಅಣೆಕಟ್ಟಿನಲ್ಲಿ ನೀರು ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ನಿಂತಿರುವುದು ಮರಳುಗಾರಿಕೆ ನಡೆಸುವವರಿಗೆ ಸಮಸ್ಯೆಯಾದ ಹಿನ್ನಲೆಯಲ್ಲಿ ಬಿರು ಬೇಸಿಗೆಯಲ್ಲಿ ಅಣೆಕಟ್ಟಿನ ನೀರನ್ನು ಬತ್ತಿಸುವ ಮೂಲಕ ಕೃಷಿ ತೋಟಗಳಿಗೆ ನೀರಿಲ್ಲದಂತೆ ಮಾದಿದ್ದರೆ. ಶಾಂತಿಮೊಗರು ಕಿಂಡಿ ಅಣೆಕಟ್ಟಿನ ಹಲಗೆ ಸರಿಸಿರುವ ಬಗ್ಗೆ ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ತಿಳಿದ ಹಿನ್ನಲೆಯಲ್ಲಿ ಮಾದ್ಯಮ ಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ವರದಿ ಮಾಡಿದ್ದರು. ಇದೇ ಸಂದರ್ಭದಲ್ಲಿ ಸ್ಥಳಿಯ ಯುವಕರು ಅಣೆಕಟ್ಟಿನ ಪಕ್ಕದಲ್ಲೇ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆಯೂ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮಾದ್ಯಮ ಪ್ರತಿನಿಧಿಗಳು ಸ್ಥಳದಲ್ಲಿ ಮರಳುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯ ಬಳಿ ಮಾಹಿತಿಯನ್ನೂ ಕೇಳಿ ಪಡೆದಿದ್ದಾರೆ. ಆದರೆ ಸ್ಥಳೀಯರು ಏಕಾಏಕಿ ಮಾಧ್ಯಮಗಳ ಮೇಲೆಯೇ ಹರಿಹಾಯ್ದಿದ್ದಾರೆ. ಮರಳುಗಾರಿಕೆಯ ಜನರೊಂದಿಗೆ ಸೇರಿ ಗ್ರಾಮಸ್ಥರ ಸಮಸ್ಯೆಯ ಬಗ್ಗೆ ವರದಿ ಮಾಡುವುದಿಲ್ಲ ಎಂದು ಸಿಟ್ಟಾಗಿದ್ದಾರೆ.ಹಾಗೂ ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ದಬ್ಬಾಳಿಕೆ ನಡೆಸಿರುದಲ್ಲದೆ, ಸ್ಥಳದಿಂದ ತೆರಳದಂತೆ ತಡೆಯೊಡ್ಡಿದ್ದಾರೆ.

ಈ ಸುದ್ದಿಯನ್ನು ಓದಿದ್ದೀರಾ.?ಸಿಎಎ ನೆರವಿಗೆ ಸಹಾಯವಾಣಿ ಪ್ರಾರಂಭ

ವರದಿ ಸಂಗ್ರಹಿಸಿ ಹೊರಡಯವ ಮೊದಲೇ ಮಾಧ್ಯಮಗಳ ಪ್ರತಿನಿಧಿಗಳು ಮರಳುಗಾರರೊಂದಿಗೆ ಒಪ್ಪಂದ ಮಾಡಿದ್ದಾರೆ ಎನ್ನುವ ಸುಳ್ಳನ್ನು ಸ್ಥಳದಲ್ಲಿದ್ದ ಕೆಲವು ಮರಳುಗಾರಿಕೆಯಲ್ಲೇ ತೊಡಗಿಕೊಂಡಿರುವ ಯುವಕರು ಹಬ್ಬಿಸಿದ್ದಾರೆ, ಆದರೆ ಇದೇ ಸುಳ್ಳನ್ನು ನಂಬಿದ ಗ್ರಾಮಸ್ಥರೂ ಮಾಧ್ಯಮದವರಿಗೆ ದಿಗ್ಧಂಧನ ವಿಧಿಸಿದ ಘಟನೆಯೂ ನಡೆದು ಬಳಿಕ ಇತ್ಯರ್ತಾಗೊಂಡಿದೆ. ನೀರಿಲ್ಲದೇ ಎಲ್ಲೆಡೆ ಸಮಸ್ಯೆ ಉಂಟಾಗಿದ್ದು, ಹತ್ತಾರು ಗ್ರಾಮಸ್ಥರಿಗೆ ಕುಡಿಯಲು, ಕೃಷಿಗೆ ನೀರು ಒದಗಿಸುತ್ತಿದ್ದ ಈ ಪುಚ್ಚಮೊಗರು ಅಣೆಕಟ್ಟಿಗೆ ಭದ್ರತೆ ಒದಗಿಸಿ ಬೆರಳೆಣಿಕೆಯ ಮರಳು ಮಾಫಿಯಾದ ವಿರುದ್ದ ನಿರ್ದಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಸ್ಥಳೀಯ ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged. Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ