• 27 ಜುಲೈ 2024

ಕರ್ನಾಟಕದ ಮಂಕಿ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಬಂಧನ

 ಕರ್ನಾಟಕದ ಮಂಕಿ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಬಂಧನ
Digiqole Ad

ಕರ್ನಾಟಕದ ಮಂಕಿ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಬಂಧನ

ಕರ್ನಾಟಕದ ಮಂಕಿಮ್ಯಾನ್ ಎಂದೇ ಖ್ಯಾತಿಯಾಗಿರುವ ಚಿತ್ರದುರ್ಗದ ಜ್ಯೋತಿ ರಾಜ್ ಅವರು ದೊಡ್ಡ ದೊಡ್ಡ ಏಕಶಿಲಾ ಬೆಟ್ಟಗಳನ್ನು ಹತ್ತಿ ಸಾಧನೆ ಮಾಡಿದ್ದಾರೆ.
ಜ್ಯೋತಿರಾಜ್ ರಾಮನಗರ ಜಿಲ್ಲೆಯ 560 ಮೀ.
ಎತ್ತರವಿರುವ ಹಂದಿಗೊಂದಿ ಬೆಟ್ಟವನ್ನು ಹತ್ತಿದ್ದಕ್ಕೆ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ… ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸುತ್ತಿರುವ ಬ್ರಿಜೇಶ್ ಚೌಟ

ಯಾವುದೇ ಬೆಟ್ಟವನ್ನು ಹತ್ತುವಾಗಲೂ ಅಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ ಅಥವಾ ಅರಣ್ಯದಲ್ಲಿದ್ದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಆಗಿರುತ್ತದೆ.

ರಾಮನಗರ ಜಿಲ್ಲೆಯಲ್ಲಿರುವ ಹಂದಿಗುಂದಿ ಬೆಟ್ಟವನ್ನು ಹತ್ತುವುದಕ್ಕೆ ಚಿತ್ರದುರ್ಗದಿಂದ ಬಂದು ಅರಣ್ಯ ಇಲಾಖೆಯಿಂದ ಅನುಮತಿ ಕೇಳಿದ್ದಾರೆ. ಆದರೆ, ಅರಣ್ಯ ಇಲಾಖೆಯ ಯಾವುದೇ ಅಧಿಕಾರಿಗಳು ಈತನ ಒಂದು ಮಾತನ್ನೂ ಕಿವಿಗೊಡದೆ ಒಂದು ವಾರಗಳ ಕಾಲ ವಿವಿಧ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡರೂ ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಪ್ರತಿನಿಧಿಗಳೂ ಇವರಿಗೆ ಸಿಕ್ಕಿಲ್ಲ. ಆದ್ದರಿಂದ ಬೆಟ್ಟ ಹತ್ತಲು ಅನುಮತಿಗಾಗಿ ಒಂದು ವಾರ ಕಾದರೂ ಅನುಮತಿ ಸಿಗದೇ ಬೇಸರಗೊಂಡಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಜ್ಯೋತಿರಾಜ್ ಗುರುವಾರ ಬೆಳಗ್ಗೆ ಸುಮಾರು 540 ಮೀ. ಎತ್ತರವಿರುವ ಹಂದಿಗುಂದಿ ಬೆಟ್ಟವನ್ನು ಹತ್ತಲು ಆರಂಭಿಸಿದ್ದಾರೆ. ಆಗ, ಯಾರೋ ಚಾರಣ ಮಾಡುತ್ತಿದ್ದಾರೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಗ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಆತನನ್ನು ಬೆಟ್ಟ ಹತ್ತಲೂ ಬಿಡದೇ ಆತನ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಆದರೆ, ಮುಕ್ಕಾಲುಭಾಗ ಬೆಟ್ಟ ಹತ್ತಿದ ನಂತರ ಇಳಿಯುವುದಕ್ಕೆ ಆಗುವುದಿಲ್ಲವೆಂದು ಜ್ಯೋತಿರಾಜ್ ಪೂರ್ಣ ಬೆಟ್ಟವನ್ನು ಹತ್ತಿ ತನ್ನ ಗುರಿಯನ್ನು ಸಾಧಿಸಿದ್ದಾನೆ. ನಂತರ, ಆತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

ಜೊತೆಗೆ ಅರಣ್ಯ ಇಲಾಖೆ ಅನುಮತಿ ಪಡೆಯದೇ ಬೆಟ್ಟ ಹತ್ತಿದ್ದರಿಂದ ನಿನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳಿಸುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರಂತೆ. ಈ ಎಲ್ಲ ವಿವರವನ್ನು ಜ್ಯೋತಿರಾಜ್ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ… ಕಾಂಗ್ರೆಸ್‌ 2 ನೇ ಪಟ್ಟಿ ಪ್ರಕಟ,ಕರ್ನಾಟಕದ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ

ಅರಣ್ಯ ಇಲಾಖೆ ಅಧಿಕಾರಿಗಳು ಜ್ಯೋತಿ ರಾಜ್ ಅವರನ್ನು ವಶಕ್ಕೆ ಪಡೆದ ಕೂಡಲೇ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬೆಟ್ಟ ಹತ್ತಿದ್ದ ಬಗ್ಗೆ ಅರಣ್ಯ ಇಲಾಖೆಗಳು ಬೆದರಿಕೆ ಹಾಕಿದ್ದ ಬಗ್ಗೆ ಹಾಗೂ ಬಂಧನ ಮಾಡುವ ಬಗ್ಗೆ ಹೇಳಿದ ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಆದರೆ, ಬೆಟ್ಟ ಹತ್ತಿದ ಸಾಧನೆಯನ್ನು ಮರೆಯಲಾಗದೇ ಉಳಿಸಿಕೊಳ್ಳುವುದಕ್ಕೆ ದಾಖಲೆಯೇ ಇಲ್ಲದಂತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

www.goldfactorynews.com
Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಪ್ರವೀಣ ಕಾಸರಗೋಡು

https://goldfactorynews.com

ಈ ಸುದ್ದಿಗಳನ್ನೂ ಓದಿ