• 27 ಜುಲೈ 2024

ಕನ್ನಡವನ್ನು ಇನ್ನಷ್ಟು ಸುಸ್ತಿರಗೊಳಿಸಬೇಕಾಗಿದೆ -ಡಾ.ಪ್ರಭಾಕರ ಶಿಶಿಲ

 ಕನ್ನಡವನ್ನು ಇನ್ನಷ್ಟು ಸುಸ್ತಿರಗೊಳಿಸಬೇಕಾಗಿದೆ -ಡಾ.ಪ್ರಭಾಕರ ಶಿಶಿಲ
Digiqole Ad

ಕನ್ನಡವನ್ನು ಇನ್ನಷ್ಟು ಸುಸ್ತಿರಗೊಳಿಸಬೇಕಾಗಿದೆ – ಡಾ.ಪ್ರಭಾಕರ ಶಿಶಿಲ 

ಇಂಗ್ಲಿಷ್ ಭಾಷೆಯ ಅತಿಯಾದ ಮೋಹ ಮತ್ತು ಇಂಗ್ಲಿಷನ್ನು ಕನ್ನಡದಲ್ಲಿ ಅರ್ಥಮಾಡಿಕೊಳ್ಳದೆ ಇಂಗ್ಲಿಷ್‌ನಲ್ಲೇ ಕಲಿಸಿದ ಕಾರಣ ಕರ್ನಾಟಕದಲ್ಲಿ ಕನ್ನಡಕ್ಕೆ ದುಃಸ್ಥಿತಿ ಒದಗಿದೆ. 10ನೇ ತರಗತಿವರೆಗೆ ಶಿಕ್ಷಣದ ರಾಷ್ಟ್ರೀಕರಣ ಆದರೆ ಈ ಸಮಸ್ಯೆಗೆ ಪರಿಹಾರ ಕಾಣಬಹುದಾಗಿದೆ’ ಎಂದು ಸಾಹಿತಿ ಪ್ರಭಾಕರ ಶಿಶಿಲ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಯೋಜಿಸಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಸಮಾರೋಪ ಭಾಷಣ ಮಾಡಿದ ಅವರು ಏಕರೂಪದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು ಮತ್ತು ಕನ್ನಡದಲ್ಲೇ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ?:ಸೊಸೆಯ ಕತ್ತು ಸೀಳಿ ಬಳಿಕ ಮಾವ ಆತ್ಮಹತ್ಯೆ

ಬ್ರಿಟಿಷರು ಇಂಗ್ಲಿಷ್ ಹೇರದೇ ಇದ್ದಿದ್ದರೆ ಹಿಂದಿ ಮತ್ತು ಸ್ಥಳೀಯ ಭಾಷೆ ನಮ್ಮಲ್ಲಿ ಇರುತ್ತಿತ್ತು. ಕರ್ನಾಟಕದಲ್ಲಿ ಕನ್ನಡವೇ ಮಾಧ್ಯಮ ಆಗಿರುತ್ತಿತ್ತು. ಕನ್ನಡವು ಇಲ್ಲಿ ಮಾಧ್ಯಮವಾಗಿ ಉಳಿಯದೇ ಇದ್ದುದರಿಂದ ಭಾಷೆ ಉಳಿಯುಕೆಗೆ ಕುತ್ತು ಬಂದಿದೆ. ಕನ್ನಡ ಅಳಿಯುತ್ತಿರುವ ಭಾಷೆ ಎಂದು ಯುನೆಸ್ಕೊ ಈಗಾಗಲೇ ಹೇಳಿದೆ. ನಮ್ಮಲ್ಲಿ ಅಸಡ್ಡೆ ಮುಂದುವರಿದರೆ ಆ ಮಾತು ನಿಜವಾಗುವ ಕಾಲ ದೂರ ಇಲ್ಲ ಎಂದು ಪ್ರಭಾಕರ ಶಿಶಿಲ ಆತಂಕ ವ್ಯಕ್ತಪಡಿಸಿದರು.

ಕನ್ನಡಿಗರಲ್ಲಿ ಭಾಷೆಗಿಂತ ಅನ್ಯ ವಿಷಯಗಳು ಆದ್ಯತೆ ಪಡೆದುಕೊಳ್ಳುತ್ತಿವೆ. ಹೀಗಾಗುತ್ತಿದೆ ಎಂಬುದರ ನೋವು ನಮ್ಮನ್ನು ಕಾಡಬೇಕು. ಅಂಥ ಪರಿಸ್ಥಿತಿ ನಿರ್ಮಾಣ ಆದರೆ ಕನ್ನಡದ ಕಾರ್ಯಕ್ರಮಗಳಿಗೆ ಹೆಚ್ಚು ಜನರು ಬರಲು ಸಾಧ್ಯ. ಕನ್ನಡ ಸಂಸ್ಕೃತಿ ಉಳಿಯಬೇಕಾದರೆ ಪುಸ್ತಕ ಸಂಸ್ಕೃತಿ ವಿಸ್ತಾರ ಪಡೆದುಕೊಳ್ಳಬೇಕು. ಆ ಪರಿಪಾಟ ಮನೆಮನೆಗೆ ತಲುಪಬೇಕು ಎಂದ ಅವರು ಸಾಹಿತಿಗಳ ರಚನೆಗೂ ಜೀವನಕ್ಕೂ ಸಂಬಂಧ ಇರಬೇಕು. ಅವೆರಡೂ ಬೇರೆಬೇರೆಯಾದರೆ ಸಾಹಿತಿಯನ್ನು ನಂಬದೇ ಹೋಗುವ ಸಾಧ್ಯತೆ ಇದೆ ಎಂದರು.

ಸಾಹಿತ್ಯಕ್ಕೆ ಸಮಾಜವನ್ನು ಬದಲಿಸುವ ಶಕ್ತಿ ಇದೆ. ಆದರೆ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಇರುವುದರಿಂದ ಮುಕ್ತವಾಗಿ ಬರೆಯಲು ಸಾಧ್ಯ ಆಗುತ್ತಿಲ್ಲ ಎಂದು ವಿಷಾದಿಸಿದ ಅವರು, ತುಳುನಾಡಿನ ಅಸ್ಮಿತೆಯಾದ ಯಕ್ಷಗಾನವನ್ನು ನಮ್ಮ ರಾಜ್ಯ ಕಲೆ ಮಾಡುವಂತೆ ಒತ್ತಡ ಹೇರಬೇಕಾಗಿದೆ ಎಂದರು.

ಸಮ್ಮೇಳನದ ಅಧ್ಯಕ್ಷೆ ಭುವನೇಶ್ವರಿ ಹೆಗಡೆ ಮಾತನಾಡಿ ಬಡತನ ನಿವಾರಣೆಗೆ ಅನೇಕ ಯೋಜನೆಗಳು ಇವೆ. ಆದರೆ ಭಾಷೆ ಬಡವಾಗದಂತೆ ನೋಡಿಕೊಳ್ಳಲು ನಾವೇ ಮುಂದಾಗಬೇಕು. ಭಾಷೆಯನ್ನು ಪ್ರೀತಿಸಿ, ಗೌರವಿಸಿದರೆ ಅಕ್ಷರದ ಅಕ್ಕರೆ ಬೆಳೆದು ಭಾಷೆಯ ಸೌಂದರ್ಯ ಹೆಚ್ಚುತ್ತದೆ ಎಂದರು.ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಆಗುತ್ತಿದೆ ಎಂದರು.

ಶ್ರೀ ಕ್ಷೇತ್ರ ಕಟೀಲಿನ ಕಮಲಾದೇವಿ ಆಸ್ರಣ್ಣ, ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಸೋಮಣ್ಣ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಘಟಕದ ಗೌರವ ಕೋಶಾಧಿಕಾರಿ ಬಿ.ಎಂ. ಪಟೇಲ್ ಪಾಂಡು, ವಿಶ್ವ ದೇವಾಡಿಗ ಸಂಘದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಇದ್ದರು.

ಈ ಸುದ್ದಿ ಓದಿದ್ದೀರಾ?:ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ(ರಿ)ಕಾಣಿಯೂರು

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ