• 8 ಸೆಪ್ಟೆಂಬರ್ 2024

ಕಾಂಗ್ರೆಸ್ ಪಕ್ಷದ ನಾಮಪತ್ರ ರ‍್ಯಾಲಿ ಸಂದರ್ಭದಲ್ಲಿ ಕಾಣದ ಮುಸ್ಲಿಂ ಲೀಗ್ ಧ್ವಜ ವಿವಾದದ ಭಯದಲ್ಲಿದ್ದಾರಾ ರಾಹುಲ್?

 ಕಾಂಗ್ರೆಸ್ ಪಕ್ಷದ ನಾಮಪತ್ರ ರ‍್ಯಾಲಿ ಸಂದರ್ಭದಲ್ಲಿ ಕಾಣದ ಮುಸ್ಲಿಂ ಲೀಗ್ ಧ್ವಜ ವಿವಾದದ ಭಯದಲ್ಲಿದ್ದಾರಾ ರಾಹುಲ್?
Digiqole Ad

ಕಾಂಗ್ರೆಸ್ ಪಕ್ಷದ ನಾಮಪತ್ರ ರ‍್ಯಾಲಿ ಸಂದರ್ಭದಲ್ಲಿ ಕಾಣದ ಮುಸ್ಲಿಂ ಲೀಗ್ ಧ್ವಜ ವಿವಾದದ ಭಯದಲ್ಲಿದ್ದಾರಾ ರಾಹುಲ್?

ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಾಮಪತ್ರ ಸಲ್ಲಿಕೆ  ರ‍್ಯಾಲಿಯ ವೇಳೆ ಮಿತ್ರಪಕ್ಷ ಮುಸ್ಲಿಂ ಲೀಗ್ ಪಕ್ಷ ಧ್ವಜಗಳು ಮಾಯವಾಗಿರುವ ವಿಚಾರ ಇದೀಗ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಲು ಭರ್ಜರಿ ರ‍್ಯಾಲಿಯನ್ನು ವಯನಾಡಿನಲ್ಲಿ ಆಯೋಜಿಸಿದ್ದರು. ಆದರೆ ಈ ವೇಳೆ ಕಾಂಗ್ರೆಸ್ ಪಕ್ಷದ ಧ್ವಜ ಹಾಗೂ ಮಿತ್ರ ಪಕ್ಷ ಮುಸ್ಲಿಂ ಲೀಗ್ ಪಕ್ಷದ ಧ್ವಜಗಳೇ ಇಲ್ಲದಿರುವುದು ಅಚ್ಚರಿ ಮೂಡಿಸಿದೆ.

ಈ ಸುದ್ದಿ ಓದಿದ್ದೀರಾ ?:ಸಹಕಾರ ಸಂಘ, ಬ್ಯಾಂಕ್‌’ಗಳ ಚುನಾವಣೆ ಮುಂದೂಡಿಕೆಗೆ ಆದೇಶ

ಮೂಲಗಳ ಪ್ರಕಾರ, ಕಳೆದ ವರ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮುಸ್ಲಿಂ ಲೀಗ್ ಪಕ್ಷದ ಧ್ವಜವನ್ನು ಪಾಕಿಸ್ತಾನದ ರಾಷ್ಟ್ರೀಯ ಧ್ವಜ ಎಂದು ಸುದ್ದಿ ಮಾಡಲಾಗಿತ್ತು. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಬಾರಿಯೂ ಇದೇ ರೀತಿಯ ಸನ್ನಿವೇಷ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ, ಮಂಜಾಗ್ರತೆ ವಹಿಸಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಅವರ ರ‍್ಯಾಲಿಯ ವೇಳೆ ಮುಸ್ಲಿಂ ಲೀಗ್ ಪಕ್ಷದ ಧ್ವಜಗಳನ್ನು ಬಳಸದಂತೆ ಸೂಚನೆ ನೀಡಿತ್ತು.

ಇದರಿಂದ ಅಸಮಾದಾನಗೊಂಡ ಮುಸ್ಲಿಂ ಲೀಗ್, ನಮ್ಮ ಧ್ವಜಗಳನ್ನು ಬಳಸಬಾರದು ಎಂದಾದರೇ, ನೀವು ಕೂಡಾ ನಿಮ್ಮ ಧ್ವಜಗಳನ್ನು ಬಳಸಬಾರದು ಎಂದು ಷರತ್ತು ಹಾಕಿದ ಹಿನ್ನಲೆ, ರಾಹುಲ್ ನಾಮಪತ್ರ ವೇಳೆ ಎರಡು ಪಕ್ಷಗಳ ಧ್ವಜಗಳು ಮಾಯವಾಗಿದ್ದವು. ಕೇವಲ ರಾಹುಲ್ ಗಾಂಧಿ ಅವರ ಹೆಸರಿರುವ ಫ್ಲೆಕ್ಸ್ಗಳನ್ನು ಹಿಡಿದು, ಎರಡು ಪಕ್ಷಗಳ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ರಾಹುಲ್ ಗಾಂಧಿ ಅವರ ಈ ನಡೆಯನ್ನು ಟೀಕಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ , ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಮತಗಳು ಬೇಕು, ಆದರೆ ಅವರ ಧ್ವಜ ಬೇಡವಾಗಿದೆ. ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಕಳೆದ ಬಾರಿ ಉಂಟಾಗಿರುವ ವಿವಾದದಿಂದ ರಾಹುಲ್ ಗಾಂಧಿ ವಿಚಲಿತರಾಗಿದ್ದಾರೆ ಎಂದಿದ್ದಾರೆ. ಇನ್ನು ಬಿಜೆಪಿ ನಾಯಕಿ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಉತ್ತರ ಭಾರತದಲ್ಲಿ ದೇವಸ್ಥಾನಗಳನ್ನು ಸುತ್ತುತ್ತಾರೆ.

ಆದರೆ ಕೇರಳದಲ್ಲಿ ಮುಸ್ಲಿಂ ಲೀಗ್ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಪಿಎಫ್ಐ ನಂತರ ಕೋಮುವಾದಿ ಸಂಘಟನೆಗಳ ಬೆಂಬಲಕ್ಕೆ ನಿಲ್ಲುತ್ತಾರೆ. ಜನರಿಂದ ಮುಸ್ಲಿಂನೊಂದಿಗೆ ಮಾಡಿಕೊಂಡಿರುವ ಮೈತ್ರಿ ಮುಚ್ಚಿಡಲು ರಾಹುಲ್ ಗಾಂಧಿ ಅವರು, ಮುಸ್ಲಿಂ ಲೀಗ್ ಪಕ್ಷದ ಧ್ವಜಗಳನ್ನೇ ದೂರವಿಟ್ಟಿದ್ದಾರೆ ಎಂದು ಟೀಕಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?:ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹4 ಲಕ್ಷ ಹಣ ವಶ.

www.goldfactorynews.com

Gold Factory News stands out as a key news portal in Karnataka, offering a wide array of news that spans local, national, and international events. It’s a hub for readers seeking updates on various topics including politics, economy, sports, and entertainment. The website’s commitment to journalistic excellence ensures that every story is presented with depth and accuracy. With a user-friendly interface, Gold Factory News makes it easy for readers to navigate through the latest headlines and in-depth articles. The platform not only informs but also engages its audience with interactive features and insightful analysis. As a trusted source of news, it connects Karnataka to the world and brings global perspectives to its readers. Gold Factory News embodies the dynamic nature of today’s media landscape, where information is both instantaneous and influential.

Digiqole Ad

ಈ ಸುದ್ದಿಗಳನ್ನೂ ಓದಿ