• 8 ಸೆಪ್ಟೆಂಬರ್ 2024

ಕಡಬ: ಯೋಜನೆಯ ಸಿಬ್ಬಂದಿಗಳು ಜೇನು ನೊಣದಂತೆ ಕೆಲಸ ನಿರ್ವಹಿಸಬೇಕು: ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಅಭಿಪ್ರಾಯ.

 ಕಡಬ: ಯೋಜನೆಯ ಸಿಬ್ಬಂದಿಗಳು ಜೇನು ನೊಣದಂತೆ ಕೆಲಸ ನಿರ್ವಹಿಸಬೇಕು: ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಅಭಿಪ್ರಾಯ.
Digiqole Ad

ಕಡಬ: ಯೋಜನೆಯ ಸಿಬ್ಬಂದಿಗಳು ಜೇನು ನೊಣದಂತೆ ಕೆಲಸ ನಿರ್ವಹಿಸಬೇಕು: ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಅಭಿಪ್ರಾಯ.

ಕಡಬ ಮೇ.28:   ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕಿನ ಸೇವಾ ಪ್ರತಿನಿಧಿಗಳ ಪ್ರಗತಿ ಪರಿಶೀಲನೆ ಹಾಗೂ ಅಭಿನಂದನಾ ಕಾರ್ಯಕ್ರಮವು ಕಡಬ ಯೋಜನಾ ಕಛೇರಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉಧ್ಘಾಟಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ಕಛೇರಿಯ ಉಡುಪಿ ಪ್ರಾದೇಶಿಕ ನಿರ್ದೇಶಕರು ದುಗ್ಗೇಗೌಡರವರು ಮಾತನಾಡಿ, ಪೂಜ್ಶ ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಗ್ರಾಮಮಟ್ಟದಲ್ಲಿ ಅನುಷ್ಟಾನಗೊಳಿಸುವಲ್ಲಿ ಯೋಜನೆಯ ಕಾರ್ಯಕರ್ತರುಗಳು ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಜೇನು ನೊಣದಂತೆ ಪ್ರತೀ ಕುಟುಂಬದ ಸದಸ್ಯರೊಂದಿಗೆ ಅವಿನಾಭಾವ ಸಂಬಂಧಗಳನ್ನು ಹೆಚ್ಚುಗೊಳಿಸಿ ದುರ್ಬಲರನ್ನು ಸಬಲರನ್ನಾಗಿಸಲು ಕೆಲಸ ನಿರ್ವಹಿಸಬೇಕು..ಸಾಧನೆಗೆ ಅಡೆತಡೆಗಳು ಬರುವುದು ಸಹಜ ಅದನ್ನು ಮುಂದಿನ ಸಾಧನೆಗೆ ದಾರಿ ದೀಪವಾಗಿಸಿಕೊಂಡಲ್ಲಿ ಸಾಧನೆಯೊಂದಿಗೆ ತಮ್ಮ ಹೆಸರು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತದೆ ಎಂದರು.

ತಾಲೂಕಿನಲ್ಲಿ 2023-24ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಸಾಧನೆ ಮಾಡಿದ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ತಾಲೂಕಿನ ಆರು ವಲಯಗಳಲ್ಲಿ ಪ್ರಥಮ ಸ್ಥಾನವನ್ನು ನೆಲ್ಯಾಡಿ ವಲಯದ ಮೇಲ್ವೀಚಾರಕ ವಿಜೇಶ್ ಜೈನ್ ಹಾಗೂ ವಲಯದ ಸೇವಾಪ್ರತಿನಿಧಿಗಳು ಹಾಗೂ ದ್ವಿತೀಯ ಸ್ಥಾನವನ್ನು ಕಡಬ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಹಾಗೂ ಸೇವಾಪ್ರತಿನಿಧಿಗಳು ಪಡೆದುಕೊಂಡರು.

ತಾಲೂಕಿನ ಸೇವಾಪ್ರತಿನಿಧಿಗಳಲ್ಲಿ ಪ್ರಥಮ ಸ್ಥಾನವನ್ನು ಗೊಳಿತೊಟ್ಟು ವಲಯದ ಸೇವಾಪ್ರತಿನಿಧಿ ಜಯಶ್ರೀ ಹಾಗೂ ದ್ವೀತೀಯ ಸ್ಥಾನವನ್ನು ಕಡಬ ವಲಯದ ಸೇವಾಪ್ರತಿನಿಧಿ ಜಯಲಕ್ಷ್ಮೀಯವರು ಪಡೆದುಕೊಂಡರು. ಶೌರ್ಯಘಟಕದ ನಿರ್ವಹಣೆಯಲ್ಲಿ ಪ್ರಥಮ ಸ್ಥಾನವನ್ನು ಕಡಬ ವಲಯದ ಸಂಯೋಜಕಿ ನಳಿನಿ ಹಾಗೂ ದ್ವಿತೀಯ ಸ್ಥಾನವನ್ನು ಆಲಂಕಾರು ವಲಯದ ಸಂಯೋಜಕಿ ಸವಿತಾ ರವರು ಪಡೆದುಕೊಂಡರು.

ಈ ಸುದ್ದಿಯನ್ನು ಓದಿದ್ದೀರಾ.?ದೇಶದಲ್ಲಿ ಭರ್ಜರಿ ಜಿಎಸ್‌ಟಿ ಸಂಗ್ರಹ – ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ಸಂಗ್ರಹ –

ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು ಸಾಧನೆ ಮಾಡಿದ ತಾಲೂಕಿನ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸಿದರು. ಬಾರತೀಯ ವಿಮಾ ವಿಭಾಗದ ಜನರಲ್ ಮ್ಯಾನೇಜರ್ ದಿನೇಶ್ ಪ್ರಭುರವರು ವಿಮಾ ಪಾಲಿಸಿ ನೊಂದಾವಣೆಯಲ್ಲಿ ಸಾಧನೆ ಮಾಡಿದವರನ್ನು ಸ್ಮರಣಿಕೆ ನೀಡಿ ಅಭಿನಂದಿಸಿದರು.

ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿ ಧನ್ಯವಾದ ನೀಡಿದರು. ತಾಲೂಕು ಹಣಕಾಸು ಪ್ರಬಂಧಕಿ ಸುಜಾತ ಹಾಗೂ ಆಡಳಿತ ಪ್ರಬಂಧಕಿ ಚೈತ್ರ ಕಾರ್ಯಕ್ರಮ ಸಂಯೋಜಿಸಿದರು. ತಾಲೂಕಿನ ಮೇಲ್ವೀಚಾರಕ ಶ್ರೇಣಿ ಸಿಬ್ಬಂದಿಗಳು, ಕಛೇರಿ ಸಿಬ್ಬಂದಿಗಳು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿದರು.

ಈ ಸುದ್ದಿಯನ್ನು ಓದಿದ್ದೀರಾ.?ವಿದೇಶಗಳಿಂದ 4009ಮಕ್ಕಳ ದತ್ತು ಸ್ವೀಕಾರ

GOLDFACTORYNEWS.COM

the latest addition to Karnataka’s vibrant media landscape, now reaching an international audience. We are excited to present a news platform that stands for quality journalism and insightful reporting.Our mission is to deliver unbiased news and in-depth analysis on local, national, and international events. With a team of dedicated journalists and state-of-the-art technology, we aim to keep our viewers informed and engaged.

Join us on this journey as we explore the stories that matter to you. Tune into Goldfactorynews for your daily dose of news delivered with integrity and excellence.

Digiqole Ad

ಈ ಸುದ್ದಿಗಳನ್ನೂ ಓದಿ